AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮೀಕ್ಷೆಗಳೆಲ್ಲ ಮಹಾಘಟಬಂಧನ್ ಗೆಲ್ಲಬಹುದೆಂದು ಹೇಳುತ್ತಿವೆ | Exit Polls predict Grand Alliance coming to power in Bihar

ವಿವಿಧ ಚ್ಯಾನೆಲ್​ಗಳು ಮತ್ತು ಸಂಸ್ಥೆಗಳು ನಡೆಸಿರುವ ಬಿಹಾರ ವಿಧಾನಸಭಾ ಚುನಾವಣೋತ್ತರ ಮತದಾನ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲ ಸಮೀಕ್ಷೆಗಳು ಮಹಾಘಟಬಂಧನ್​ಗೆ ಹೆಚ್ಚು ಸ್ಥಾನಗಳು ಸಿಗಲಿವೆಯೆಂದು ಹೇಳುತ್ತಿವೆ. ಟಿವಿ9 ಭರತ್​ವರ್ಷ್‌ ನಡೆಸಿರುವ ಸಮೀಕ್ಷೆ ಅನ್ವಯ ಮಹಾಘಟಬಂಧನ್‌ 115-125 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದರೆ ಎನ್​ಡಿಎ 110-120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಎಲ್​ಜೆಪಿ 3 ರಿಂದ 5 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರರು 10-15 ಸೀಟುಗಳನ್ನು ಗೆಲ್ಲಬಹುದೆಂದು ಭರತ್​ವರ್ಷ್‌ ಸಮೀಕ್ಷೆ ಹೇಳುತ್ತದೆ. ಸಿ-ವೋಟರ್ ಸಮೀಕ್ಷೆ ಸಹ […]

ಸಮೀಕ್ಷೆಗಳೆಲ್ಲ ಮಹಾಘಟಬಂಧನ್ ಗೆಲ್ಲಬಹುದೆಂದು ಹೇಳುತ್ತಿವೆ | Exit Polls predict Grand Alliance coming to power in Bihar
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2020 | 10:23 PM

ವಿವಿಧ ಚ್ಯಾನೆಲ್​ಗಳು ಮತ್ತು ಸಂಸ್ಥೆಗಳು ನಡೆಸಿರುವ ಬಿಹಾರ ವಿಧಾನಸಭಾ ಚುನಾವಣೋತ್ತರ ಮತದಾನ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲ ಸಮೀಕ್ಷೆಗಳು ಮಹಾಘಟಬಂಧನ್​ಗೆ ಹೆಚ್ಚು ಸ್ಥಾನಗಳು ಸಿಗಲಿವೆಯೆಂದು ಹೇಳುತ್ತಿವೆ.

ಟಿವಿ9 ಭರತ್​ವರ್ಷ್‌ ನಡೆಸಿರುವ ಸಮೀಕ್ಷೆ ಅನ್ವಯ ಮಹಾಘಟಬಂಧನ್‌ 115-125 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದರೆ ಎನ್​ಡಿಎ 110-120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಎಲ್​ಜೆಪಿ 3 ರಿಂದ 5 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರರು 10-15 ಸೀಟುಗಳನ್ನು ಗೆಲ್ಲಬಹುದೆಂದು ಭರತ್​ವರ್ಷ್‌ ಸಮೀಕ್ಷೆ ಹೇಳುತ್ತದೆ.

ಸಿ-ವೋಟರ್ ಸಮೀಕ್ಷೆ ಸಹ ಮಹಾಘಟಬಂಧನ್​ಗೆ ಹೆಚ್ಚಿನ ಸ್ಥಾನ ಸಿಗಲಿವೆಯೆಂದು ಹೇಳಿದೆ. ಇದು ನಡೆಸಿರುವ ಸಮೀಕ್ಷೆ ಪ್ರಕಾರ ಎನ್​ಡಿಎ 116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದ್ದರೆ, ಮಹಾಘಟಬಂಧನ್ 120 ಕ್ಷೇತ್ರಗಳಲ್ಲಿ ಗೆಲ್ಲಬಹುದಾಗಿದೆ. ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಆವರ ಎಲ್​ಜೆಪಿ 1 ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಲಿದೆಯೆಂದು ಅದು ಭವಿಷ್ಯ ನುಡಿದಿದೆ. ಹಾಗೆಯೇ 6 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಬಹುದೆಂದು ಸಿ-ವೋಟರ್ ಸಮೀಕ್ಷೆ ಹೇಳುತ್ತದೆ.

ಜನ್​ ಕಿ ಬಾತ್ ನಡೆಸಿರುವ ಸಮೀಕ್ಷೆಯ ಪ್ರಕಾರ​ ಮಹಾಘಟಬಂಧನ್‌ಗೆ ಹೆಚ್ಚು ಸ್ಥಾನ ಲಭ್ಯವಾಗಲಿವೆ. ಅದಕ್ಕೆ 118-138 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶಗಳಿದ್ದರೆ ಬಿಜೆಪಿ, ಜೆಡಿ (ಯು) ಪಕ್ಷಗಳನ್ನೊಳಗೊಂಡ ಎನ್​ಡಿಎಗೆ 91-117 ಕ್ಷೇತ್ರಗಳಲ್ಲಿ ಗೆಲುವು ದಕ್ಕುವ ಸಾಧ್ಯತೆಯಿದೆ. ಎಲ್​ಜೆಪಿ 5 ರಿಂದ 8 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವ ಸಾಧ್ಯತೆಯಿದ್ದರೆ ಪಕ್ಷೇತರ ಅಭ್ಯರ್ಥಿಗಳು 3-6 ಸೀಟುಗಳನ್ನು ಕಬಳಿಸಬಹುದೆಂದು ಜನ್​ ಕಿ ಬಾತ್ ನಡೆಸಿರುವ ಸಮೀಕ್ಷೆ ಹೇಳುತ್ತದೆ.

ಟೈಮ್ಸ್​​ ನೌ ಚ್ಯಾನೆಲ್ ಸಿ ವೋಟರ್ ಸಹಯೋಗದೊಂದಿಗೆ ನಡೆಸಿರುವ ಸಮೀಕ್ಷೆಯ ಪ್ರಕಾರವೂ ಮಹಾಘಟಬಂಧನ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಮಹಾಘಟಬಂಧನ್​ 120 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆಯಿದ್ದರೆ ಎನ್​ಡಿಎ 116 ಕ್ಷೇತ್ರಗಳಲ್ಲಿ ಗೆಲುವು ಲಭ್ಯವಾಗಬಹುದೆಂದು ಸಮೀಕ್ಷೆ ಹೇಳುತ್ತದೆ. ಎಲ್​ಜೆಪಿ 6 ಕ್ಷೇತ್ರಗಳಲ್ಲಿ ಮತ್ತು 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆ.

ಹಾಗೆಯೇ, ಎಬಿಪಿ ವಾಹಿನಿ ನಡೆಸಿರುವ ಸಮೀಕ್ಷೆಯ ಪ್ರಕಾರ ಮಹಾಘಟಬಂಧನ್‌ಗೆ 108-131 ಕ್ಷೇತ್ರಗಳಲ್ಲಿ ಜಯ ಲಭಿಸುವ ಸಾಧ್ಯತೆಯಿದೆ ಮತ್ತು ಎನ್​ಡಿಎಗೆ 104-128 ಕ್ಷೇತ್ರಗಳಲ್ಲಿ ಗೆಲುವು ದಕ್ಕಬಹುದು. ಎಲ್​ಜೆಪಿ 1-3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ ಮತ್ತು ಪಕ್ಷೇತರ ಅಭ್ಯರ್ಥಿಗಳು 4-8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬಹುದೆಂದು ಈ ಸಮೀಕ್ಷೆ ಹೇಳುತ್ತದೆ.

ಕೊನೆಯದಾಗಿ, ಪೋಲ್ ಆಫ್​ ಪೋಲ್ಸ್‌ ಸಮೀಕ್ಷೆಯಂತೆಯೂ ಮಹಾಘಟಬಂಧನ್‌ಗೆ ಹೆಚ್ಚು ಸ್ಥಾನಗಳು ಲಭಿಸಲಿದೆ. ಇದರ ಪ್ರಕಾರ ಮಹಾಘಟಬಂಧನ್​ 123 ಸೀಟುಗಳು ಸಿಗಲಿವೆ ಮತ್ತು ಎನ್​ಡಿಎಗೆ 112 ಕ್ಷೇತ್ರಗಳಲ್ಲಿ ಜಯ ದಕ್ಕಲಿದೆ. ಎಲ್​ಜೆಪಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ ಮತ್ತು 4 ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾಗಲಿವೆಯೆಂದು ಪೋಲ್ ಆಫ್​ ಪೋಲ್ಸ್‌ ಸಮೀಕ್ಷೆ ಹೇಳುತ್ತದೆ.

ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್