AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2022 ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ ಫ್ಯಾಕ್ಟ್​​​ಚೆಕರ್​​ ಮೊಹಮ್ಮದ್​​ ಜುಬೇರ್​​, ಪ್ರತೀಕ್ ಸಿನ್ಹಾ: ಟೈಮ್ ವರದಿ

ನೊಬೆಲ್ ಸಮಿತಿಯು ನಾಮನಿರ್ದೇಶಿತರ ಹೆಸರನ್ನು ಪ್ರಕಟಿಸದಿದ್ದರೂ ರಾಯಿಟರ್ಸ್ ಸಮೀಕ್ಷೆಯು ಬೆಲರೂಸಿಯನ್ ವಿರೋಧ ಪಕ್ಷದ ರಾಜಕಾರಣಿ ಸ್ವಿಯಾಟ್ಲಾನಾ ತ್ಸಿಖಾನೌಸ್ಕಯಾ, ಬ್ರಾಡ್ ಕಾಸ್ಟರ್ ಡೇವಿಡ್ ಅಟೆನ್‌ಬರೋ, ಹವಾಮಾನ ಕಾರ್ಯಕರ್ತೆ...

2022 ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ ಫ್ಯಾಕ್ಟ್​​​ಚೆಕರ್​​ ಮೊಹಮ್ಮದ್​​ ಜುಬೇರ್​​, ಪ್ರತೀಕ್ ಸಿನ್ಹಾ: ಟೈಮ್ ವರದಿ
ಮೊಹಮ್ಮದ್ ಜುಬೇರ್ ಮತ್ತು ಪ್ರತೀಕ್ ಸಿನ್ಹಾ
TV9 Web
| Edited By: |

Updated on:Oct 05, 2022 | 3:55 PM

Share

ದೆಹಲಿ: ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ (Mohammed Zubair) ಮತ್ತು ಪ್ರತೀಕ್ ಸಿನ್ಹಾ (Pratik Sinha) ಅವರು 2022 ರ ನೊಬೆಲ್ ಶಾಂತಿ ಪ್ರಶಸ್ತಿಗಿರುವವರ (2022 Nobel Peace Prize) ಪಟ್ಟಿಯಲ್ಲಿದ್ದಾರೆ ಎಂದು ಟೈಮ್ ವರದಿ ಮಾಡಿದೆ. ಟೈಮ್ ವರದಿ ಪ್ರಕಾರ, ಫ್ಯಾಕ್ಟ್ ಚೆಕಿಂಗ್ ವೆಬ್ ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕರಾದ ಸಿನ್ಹಾ ಮತ್ತು ಜುಬೇರ್ ಅವರು ನಾರ್ವೇಜಿಯನ್ ಶಾಸಕರು, ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಓಸ್ಲೋ (PRIO) ಬಹಿರಂಗಪಡಿಸಿದ ನಾಮನಿರ್ದೇಶನಗಳ ಆಧಾರದ ಮೇಲೆ ಬಹುಮಾನವನ್ನು ಗೆಲ್ಲುವ ಸ್ಪರ್ಧಿಗಳಾಗಿದ್ದಾರೆ . ದೆಹಲಿ ಪೋಲೀಸ್ ಪ್ರಥಮ ಮಾಹಿತಿ ವರದಿ (FIR) ಪ್ರಕಾರ 2018 ರ ಟ್ವೀಟ್‌ಗಾಗಿ ಜುಬೇರ್ ಅವರನ್ನು ಈ ವರ್ಷದ ಜೂನ್‌ನಲ್ಲಿ ಬಂಧಿಸಲಾಯಿತು. ಜುಬೇರ್ ಮಾಡಿದ ಟ್ವೀಟ್ ಹೆಚ್ಚು ಪ್ರಚೋದನಕಾರಿ ಮತ್ತು ದ್ವೇಷದ ಭಾವನೆಗಳನ್ನು ಪ್ರಚೋದಿಸುತ್ತದೆ ಎಂಬುದು ಆರೋಪವಾಗಿತ್ತು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳಿಗಾಗಿ ದೆಹಲಿ ಪೊಲೀಸರು ಆತನ ಮೇಲೆ ಆರೋಪ ಹೊರಿಸಿದ್ದಾರೆ. ಜುಬೇರ್ ಅವರ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಅಮೆರಿಕದ ನಾನ್ ಪ್ರಾಫಿಟ್ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ , ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತೊಮ್ಮೆ ಕೆಳಮಟ್ಟಕ್ಕೆ ತಲುಪಿದೆ. ಅಲ್ಲಿ ಸರ್ಕಾರವು ಪಂಥೀಯ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಿಕಾ ಸದಸ್ಯರಿಗೆ ಪ್ರತಿಕೂಲ ಮತ್ತು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದೆ.

ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಒಂದು ತಿಂಗಳ ನಂತರ  ಜುಬೇರ್ ತಿಹಾರ್ ಜೈಲಿನಿಂದ ಹೊರನಡೆದರು. ಸುಮಾರು 343 ಅಭ್ಯರ್ಥಿಗಳ ಪೈಕಿ- 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳು – 2022 ರ ನೊಬೆಲ್ ಶಾಂತಿ ಪ್ರಶಸ್ತಿಯ ಪಟ್ಟಿಯಲ್ಲಿದ್ದಾರೆ.

ನೊಬೆಲ್ ಸಮಿತಿಯು ನಾಮನಿರ್ದೇಶಿತರ ಹೆಸರನ್ನು ಪ್ರಕಟಿಸದಿದ್ದರೂ ರಾಯಿಟರ್ಸ್ ಸಮೀಕ್ಷೆಯು ಬೆಲರೂಸಿಯನ್ ವಿರೋಧ ಪಕ್ಷದ ರಾಜಕಾರಣಿ ಸ್ವಿಯಾಟ್ಲಾನಾ ತ್ಸಿಖಾನೌಸ್ಕಯಾ, ಬ್ರಾಡ್ ಕಾಸ್ಟರ್ ಡೇವಿಡ್ ಅಟೆನ್‌ಬರೋ, ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್, ಪೋಪ್ ಫ್ರಾನ್ಸಿಸ್, ಟುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ, ಮತ್ತು ಮ್ಯಾನ್ಮಾರ್‌ನ ನ್ಯಾಷನಲ್ ಯೂನಿಟಿ ಸರ್ಕಾರ ನಾರ್ವೇಜಿಯನ್ ಶಾಸಕರಿಂದ ನಾಮನಿರ್ದೇಶನಗೊಂಡವರಲ್ಲಿ ಸೇರಿದೆ.

ನಾಮನಿರ್ದೇಶನಕಾರರ ಅಥವಾ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶಿತರಾದವರ ಹೆಸರನ್ನು ನಿರ್ದಿಷ್ಟ ಪ್ರಶಸ್ತಿಯನ್ನು ನೀಡುವ 50 ನೇ ವಾರ್ಷಿಕೋತ್ಸವವನ್ನು ಗುರುತಿಸುವ ವರ್ಷ ಪ್ರಾರಂಭವಾಗುವವರೆಗೆ ಬಹಿರಂಗಪಡಿಸಲಾಗುವುದಿಲ್ ಎಂದು ಶಾಂತಿ ಪ್ರಶಸ್ತಿಗಾಗಿ ನಾಮನಿರ್ದೇಶನಗಳ ಕುರಿತು ನೊಬೆಲ್ ಸಮಿತಿಯ ನಿಯಮ ಹೇಳಿದೆ.

ಸಿನ್ಹಾ ಮತ್ತು ಜುಬೇರ್ ಅವರಲ್ಲದೆ, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ, ಯುಎನ್ ನಿರಾಶ್ರಿತರ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ರಷ್ಯಾದ ಭಿನ್ನಮತೀಯ ಮತ್ತು ವ್ಲಾಡಿಮಿರ್ ಪುಟಿನ್ ವಿಮರ್ಶಕ ಅಲೆಕ್ಸಿ ನವಲ್ನಿ ಸಹ ಶಾಂತಿ ಪ್ರಶಸ್ತಿಗೆ ಸ್ಪರ್ಧಿಗಳಾಗಿದ್ದಾರೆ. 2022 ರ ನೊಬೆಲ್ ಶಾಂತಿ ಪ್ರಶಸ್ತಿಯ ವಿಜೇತರನ್ನು ಓಸ್ಲೋದಲ್ಲಿ ಅಕ್ಟೋಬರ್ 7 ರಂದು ಸ್ಥಳೀಯ ಸಮಯ ಬೆಳಿಗ್ಗೆ 11 ಗಂಟೆಗೆ ಘೋಷಿಸಲಾಗುವುದು.

Published On - 3:47 pm, Wed, 5 October 22

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್