AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಎಎಸ್​ ಪಾಸ್ ಆದ 8 ವರ್ಷಗಳ ಬಳಿಕ ಅಭ್ಯರ್ಥಿಗೆ ನಾಗರಿಕ ಸೇವೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್; ಏನಿದು ಪ್ರಕರಣ?

ಇದು ರಾಜಶೇಖರ್ ರೆಡ್ಡಿಯವರ ಕೊನೆಯ ಪ್ರಯತ್ನ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್​ ಕಳೆದ ವರ್ಷ ಅವರನ್ನು ವೈದ್ಯಕೀಯವಾಗಿ ಮರುಪರೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಿತ್ತು. ಈ ಪರೀಕ್ಷೆಯಲ್ಲಿ ರಾಜಶೇಖರ್ ರೆಡ್ಡಿ 6 ವರ್ಷಗಳ ನಂತರ ವೈದ್ಯಕೀಯವಾಗಿ ಫಿಟ್ ಎಂದು ಘೋಷಿಸಲಾಯಿತು.

ಐಎಎಸ್​ ಪಾಸ್ ಆದ 8 ವರ್ಷಗಳ ಬಳಿಕ ಅಭ್ಯರ್ಥಿಗೆ ನಾಗರಿಕ ಸೇವೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್; ಏನಿದು ಪ್ರಕರಣ?
ಸುಪ್ರೀಂಕೋರ್ಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 15, 2022 | 10:21 AM

ನವದೆಹಲಿ: 2014ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ, ಆದರೆ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಕಾರಣ ಅನರ್ಹ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿಗೆ ಐಎಎಸ್ (IAS) ಅಧಿಕಾರಿಯಾಗಲು ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿರುವ ವಿಚಿತ್ರವಾದ ಪ್ರಕರಣವೊಂದು ನಡೆದಿದೆ. ಐಎಎಸ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 8 ವರ್ಷಗಳ ಬಳಿಕ ಆ ಅಭ್ಯರ್ಥಿಗೆ ನಾಗರಿಕೆ ಸೇವೆಗೆ ಸೇರ್ಪಡೆಯಾಗಲು ಅನುಮತಿ ನೀಡಲಾಗಿದೆ.

ಸುಪ್ರೀಂ ಕೋರ್ಟ್​​ ತನ್ನ 142ನೇ ವಿಧಿಯ ಅಧಿಕಾರವನ್ನು ಬಳಸಿದ್ದು, ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಂಟು ವರ್ಷಗಳ ನಂತರ ಐಎಎಸ್​ ಅಧಿಕಾರಿಯಾಗಲು ಅನುಮತಿ ನೀಡಲಾಗಿದೆ. ಕೆ. ರಾಜಶೇಖರ್ ರೆಡ್ಡಿ ಅವರು ತಮ್ಮ ಐದನೇ ಮತ್ತು ಕೊನೆಯ ಪ್ರಯತ್ನದಲ್ಲಿ CSE-2014ರಲ್ಲಿ ಪಾಸ್ ಆಗಿದ್ದರು. ಆದರೆ, ವೈದ್ಯಕೀಯ ಪರೀಕ್ಷೆ ವೇಳೆ ಅವರ ಬಿಎಂಐ 32 ಇತ್ತು ಎಂಬ ಕಾರಣಕ್ಕೆ ಅವರಿಗೆ ಐಎಎಸ್​ ಅಧಿಕಾರಿಯಾಗಲು ಅನುಮತಿ ನಿರಾಕರಿಸಲಾಗಿತ್ತು. ನಾಗರಿಕ ಸೇವೆಗಳಿಗೆ ಸೇರಲು ಅಭ್ಯರ್ಥಿಗೆ 30 ಅಥವಾ ಅದಕ್ಕಿಂತ ಕಡಿಮೆ BMIಯ ಕಡ್ಡಾಯ ಅವಶ್ಯಕತೆಯಿದೆ.

ಹೀಗಾಗಿ, ಅವರನ್ನು ‘ತಾತ್ಕಾಲಿಕವಾಗಿ ಅನರ್ಹ’ ವರ್ಗದ ಅಡಿಯಲ್ಲಿ ಇರಿಸಲಾಗಿತ್ತು. 2015ರ ಜುಲೈ 4ರಂದು ಅಂತಿಮ CSE-2014 ಪಟ್ಟಿಯು ಬಿಡುಗಡೆಯಾಗಿತ್ತು. 1,236 ಅಭ್ಯರ್ಥಿಗಳನ್ನು ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಯ ವಿವಿಧ ಸೇವೆಗಳಿಗೆ ನೇಮಕಾತಿಗಾಗಿ ಅವರ ಅರ್ಹತೆಯ ಕ್ರಮದಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ ಅದರಲ್ಲಿ ರಾಜಶೇಖರ್ ರೆಡ್ಡಿ ಅವರ ಹೆಸರನ್ನು ಸೇರಿಸಿರಲಿಲ್ಲ. ಆದರೆ, 2016ರ ಜನವರಿ 19ರಂದು ಪ್ರಕಟಿಸಲಾದ ಮೀಸಲು ಪಟ್ಟಿಯಲ್ಲಿ ರಾಜಶೇಖರ್ ರೆಡ್ಡಿ ಅವರ ಹೆಸರು ಕಾಣಿಸಿಕೊಂಡಿತ್ತು.

ಇದನ್ನೂ ಓದಿ
Image
ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್
Image
Air Pollution: ವಾಯು ಮಾಲಿನ್ಯದಿಂದ 5 ವರ್ಷ ಕಡಿಮೆಯಾಗುತ್ತಿದೆ ಭಾರತೀಯರ ಜೀವಿತಾವಧಿ
Image
Viral Photo: ಈ ಜಿಲ್ಲಾಧಿಕಾರಿಯ 10ನೇ ತರಗತಿ ಅಂಕಪಟ್ಟಿ ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ

ಇದನ್ನೂ ಓದಿ: ವೇಶ್ಯಾವಾಟಿಕೆಯೂ ಒಂದು ವೃತ್ತಿ, ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

ಸಿಎಸ್‌ಇ ನಿಯಮಗಳ ಪ್ರಕಾರ, ಅಂತಹ ವರ್ಗಕ್ಕೆ ಸೇರಿದ ಅಭ್ಯರ್ಥಿಯು ಆರು ತಿಂಗಳೊಳಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವನ್ನು ಒದಗಿಸಬೇಕು. ರಾಜಶೇಖರ್ ರೆಡ್ಡಿ ಅವರು 2016ರ ಮಾರ್ಚ್ 9ರಂದು ಮರು ವೈದ್ಯಕೀಯ ಪರೀಕ್ಷೆಗೆ ಪ್ರಾತಿನಿಧ್ಯವನ್ನು ಸಲ್ಲಿಸಿದ್ದರು. ಇದು ನಿಗದಿತ ಆರು ತಿಂಗಳ ಗಡುವನ್ನು ಮೀರಿದ್ದರಿಂದ ಅದನ್ನು ತಿರಸ್ಕರಿಸಲಾಗಿತ್ತು.

ಇದು ರಾಜಶೇಖರ್ ರೆಡ್ಡಿಯವರ ಐದನೇ ಮತ್ತು ಕೊನೆಯ ಪ್ರಯತ್ನ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್​ ಕಳೆದ ವರ್ಷ ಏಪ್ರಿಲ್ 6ರಂದು ಅವರನ್ನು ವೈದ್ಯಕೀಯವಾಗಿ ಮರುಪರೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ವೈದ್ಯಕೀಯ ಮರು ಪರೀಕ್ಷೆಯಲ್ಲಿ ರಾಜಶೇಖರ್ ರೆಡ್ಡಿ 6 ವರ್ಷಗಳ ನಂತರ ವೈದ್ಯಕೀಯವಾಗಿ ಫಿಟ್ ಎಂದು ಘೋಷಿಸಲಾಯಿತು. ಮರು ವೈದ್ಯಕೀಯ ಫಿಟ್‌ನೆಸ್ ವರದಿಯನ್ನು ಆಧರಿಸಿ, ಕೇಂದ್ರ ಸರ್ಕಾರವು ರಾಜಶೇಖರ್ ರೆಡ್ಡಿ ಅವರನ್ನು ಮೂಲತಃ ಸಿಎಸ್‌ಇ, 2014ರಲ್ಲಿ ಪ್ರಕಟಿಸಿದ ಏಕೀಕೃತ ಮೀಸಲು ಪಟ್ಟಿಯಲ್ಲಿ ಅವರ ನಿಯೋಜನೆಯ ಪ್ರಕಾರ ನೇಮಕಾತಿಗೆ ಪರಿಗಣಿಸಬಹುದು ಎಂದು ನಿರ್ದೇಶಿಸುವುದು ಸೂಕ್ತವೆಂದು ಸುಪ್ರೀಂ ಕೋರ್ಟ್​ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Wed, 15 June 22

ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ