AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್‌ಕ್ರೀಮ್‌ ಬಾಕ್ಸ್‌ನಲ್ಲಿ ಶವ, ಸೋಂಕಿತ ಸತ್ತ 48 ಗಂಟೆ ನಂತರ ಅಂತ್ಯಕ್ರಿಯೆ

ಕೊಲ್ಕತಾ: ಕೊರೊನಾ ಸೋಂಕಿತರ ಮತ್ತು ಸಾವಿನ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಾನೇ ಇದೆ. ಇದು ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾದಿಂದ ಸಾವನ್ನಪ್ಪಿದವರನ್ನ ಅಂತ್ಯಕ್ರಿಯೆ ಮಾಡಲು ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಬಂದಿದೆ. ಇಂಥದ್ದೇ ಒಂದು ಮನಮಿಡಿಯುವ ಘಟನೆ ಕೊಲ್ಕತಾದಲ್ಲಿ ಬೆಳಕಿಗೆ ಬಂದಿದೆ. ಹೌದು ಕೊಲ್ಕತಾದಲ್ಲಿ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ 71 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಸಾವನ್ನಪ್ಪಿದ್ದ. ಆದ್ರೆ ಆತನ ಕೋವಿಡ್‌ ಟೆಸ್ಟ್‌ ವರದಿ ಬರೋವರೆಗೂ ಮೃತನ ಡೆತ್‌ ಸರ್ಟಿಫಿಕೇಟ್‌ ಕೊಡಲು ಕೋಲ್ಕತಾ ನಗರ ಪಾಲಿಕೆ ನಿರಾಕರಿಸಿದೆ. […]

ಐಸ್‌ಕ್ರೀಮ್‌ ಬಾಕ್ಸ್‌ನಲ್ಲಿ ಶವ, ಸೋಂಕಿತ ಸತ್ತ 48 ಗಂಟೆ ನಂತರ ಅಂತ್ಯಕ್ರಿಯೆ
ಸಾಂದರ್ಭಿಕ ಚಿತ್ರ
Follow us
Guru
| Updated By: ಸಾಧು ಶ್ರೀನಾಥ್​

Updated on: Jul 02, 2020 | 3:58 PM

ಕೊಲ್ಕತಾ: ಕೊರೊನಾ ಸೋಂಕಿತರ ಮತ್ತು ಸಾವಿನ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಾನೇ ಇದೆ. ಇದು ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾದಿಂದ ಸಾವನ್ನಪ್ಪಿದವರನ್ನ ಅಂತ್ಯಕ್ರಿಯೆ ಮಾಡಲು ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಬಂದಿದೆ. ಇಂಥದ್ದೇ ಒಂದು ಮನಮಿಡಿಯುವ ಘಟನೆ ಕೊಲ್ಕತಾದಲ್ಲಿ ಬೆಳಕಿಗೆ ಬಂದಿದೆ.

ಹೌದು ಕೊಲ್ಕತಾದಲ್ಲಿ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ 71 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಸಾವನ್ನಪ್ಪಿದ್ದ. ಆದ್ರೆ ಆತನ ಕೋವಿಡ್‌ ಟೆಸ್ಟ್‌ ವರದಿ ಬರೋವರೆಗೂ ಮೃತನ ಡೆತ್‌ ಸರ್ಟಿಫಿಕೇಟ್‌ ಕೊಡಲು ಕೋಲ್ಕತಾ ನಗರ ಪಾಲಿಕೆ ನಿರಾಕರಿಸಿದೆ. ಹೀಗಾಗಿ ಅಂತ್ಯಕ್ರಿಯೆ ಕಾರ್ಯವೂ ವಿಳಂಬವಾಗಿದೆ.

ಶವಾಗಾರದಲ್ಲಿ ಜಾಗ ಇಲ್ಲದೇ ಐಸ್‌ಕ್ರೀಮ್‌ ಬಾಕ್ಸ್‌ನಲ್ಲಿ ಶವ ಹೀಗಾಗಿ ಮನೆಯಲ್ಲಿಯೇ ಶವ ಕೊಳೆಯಲು ಶುರುವಾಗಿದೆ. ಆಗ ನಗರದಲ್ಲಿನ ಶವಾಗಾರದಲ್ಲಿ ಮೃತದೇಹವನ್ನಿಡಲು ಸಂಬಂಧಿಕರು ಪ್ರಯತ್ನಿಸಿದ್ದಾರೆ. ಅದ್ರೆ ಎಲ್ಲಿಯೂ ಅವರಿಗೆ ಸ್ಥಳಾವಕಾಶ ಸಿಕ್ಕಿಲ್ಲ. ಕೊನೆಗೆ ಅವರೇ ಒಂದು ಐಸ್‌ ಕ್ರೀಮ್‌ ಫ್ರೀಜರ್‌ ತಂದು ಅದರಲ್ಲಿ ಶವವನ್ನ ಇಟ್ಟಿದ್ದಾರೆ.

48 ಗಂಟೆ ಕಾಯಿಸಿದ ಅಧಿಕಾರಿಗಳು ಇದಾದ ನಂತರ ವ್ಯಕ್ತಿಯ ಕೋವಿಡ್‌ ಟೆಸ್‌ ವರದಿ ಬಂದಿದ್ದು, ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿರೋದು ಖಚಿತಪಟ್ಟಿದೆ. ಆಗ ಸ್ಥಳೀಯ ಪೊಲೀಸರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಕುಟುಂಬಸ್ಥರು ತಿಳಿಸಿದ್ದಾರೆ. ಆದ್ರೆ ಯಾವುದೇ ಅಂಬ್ಯುಲೆನ್ಸ್‌ ಖಾಲಿ ಇಲ್ಲ, ಸ್ವಲ್ಪ ಕಾಯಿರಿ ಅಂತಾ ಕೈ ಎತ್ತಿದ್ದಾರೆ. ಆದ್ರೂ ಸಂಬಂಧಿಕರು ಕರೆ ಮೇಲೆ ಕರೆ ಮಾಡಿದಾಗ ಸುಮಾರು 48 ಗಂಟೆಗಳ ನಂತರ ಅಂದ್ರೆ ಬುಧವಾರ ಅಧಿಕಾರಿಗಳು ಬಂದು ಮೃತದೇಹವನ್ನ ಕೊಂಡೊಯ್ದಿದ್ದಾರೆ.

ಅಂದರೆ ಸೋಮವಾರ ಸತ್ತ ವ್ಯಕ್ತಿಯ ಮೃತ ದೇಹವನ್ನ ಬುಧವಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತಿಮವಾಗಿ ಮೃತ ದೇಹವನ್ನ ತೆಗದುಕೊಂಡು ಹೋಗಿ ಅಪಾರ್ಟ್‌ಮೆಂಟ್‌ನ್ನು ಸ್ಯಾನಿಟೈಸ್‌ ಮಾಡಲು 50 ಗಂಟೆಗಳಾಗಿವೆ. ಅಲ್ಲಿಯವರೆಗೂ ಕುಟುಂಬ ಸದಸ್ಯರು ಪಟ್ಟ ಪಾಡು ಅಷ್ಟಿಷ್ಟಲ್ಲ.

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ