AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

26/11ರ ಮುಂಬೈ ಉಗ್ರದಾಳಿಯ ವೇಳೆ ದಿಟ್ಟತನದಿಂದ ಹೋರಾಡಿದ್ದ ಎನ್​ಎಸ್​ಜಿ ಮುಖ್ಯಸ್ಥ ಜೆಕೆ ದತ್ತ ಕೊರೊನಾದಿಂದ ಸಾವು

ದೆಹಲಿ: 26/11 ರ ಮುಂಬೈ ಉಗ್ರದಾಳಿ ಸಂದರ್ಭದಲ್ಲಿ ಧೈರ್ಯದಿಂದ ಹೋರಾಡಿದ್ದ, ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್​​ಎಸ್​ಜಿ)ದ ಮುಖ್ಯಸ್ಥರಾಗಿದ್ದ ಜೆಕೆ ದತ್ತ ಅವರು ಇಂದು ಕೊವಿಡ್​ 19ನಿಂದ ಮೃತರಾಗಿದ್ದಾರೆ. ದತ್ತ ಅವರಿಗೆ 72 ವರ್ಷವಾಗಿತ್ತು. ಕೊವಿಡ್​ 19 ಸೋಂಕಿತರಾಗಿದ್ದ ಜೆಕೆ ದತ್ತ ಅವರನ್ನು ಗುರ್​ಗಾಂವ್​​ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. 2008ರಲ್ಲಿ ಮುಂಬೈನ ಹೋಟೆಲ್​ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾಗ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ನಡೆಸಲಾಗಿದ್ದ ಆಪರೇಶನ್​ ಬ್ಲ್ಯಾಕ್​ ಕಮಾಂಡೋ ಆ್ಯಂಟಿ-ಟೆರರ್​ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು. ಇಂದು ಮಧ್ಯಾಹ್ನ 3.30ರ […]

26/11ರ ಮುಂಬೈ ಉಗ್ರದಾಳಿಯ ವೇಳೆ ದಿಟ್ಟತನದಿಂದ ಹೋರಾಡಿದ್ದ ಎನ್​ಎಸ್​ಜಿ ಮುಖ್ಯಸ್ಥ ಜೆಕೆ ದತ್ತ ಕೊರೊನಾದಿಂದ ಸಾವು
ಜೆಕೆ ದತ್ತ
Lakshmi Hegde
|

Updated on:May 19, 2021 | 10:16 PM

Share

ದೆಹಲಿ: 26/11 ರ ಮುಂಬೈ ಉಗ್ರದಾಳಿ ಸಂದರ್ಭದಲ್ಲಿ ಧೈರ್ಯದಿಂದ ಹೋರಾಡಿದ್ದ, ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್​​ಎಸ್​ಜಿ)ದ ಮುಖ್ಯಸ್ಥರಾಗಿದ್ದ ಜೆಕೆ ದತ್ತ ಅವರು ಇಂದು ಕೊವಿಡ್​ 19ನಿಂದ ಮೃತರಾಗಿದ್ದಾರೆ. ದತ್ತ ಅವರಿಗೆ 72 ವರ್ಷವಾಗಿತ್ತು.

ಕೊವಿಡ್​ 19 ಸೋಂಕಿತರಾಗಿದ್ದ ಜೆಕೆ ದತ್ತ ಅವರನ್ನು ಗುರ್​ಗಾಂವ್​​ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. 2008ರಲ್ಲಿ ಮುಂಬೈನ ಹೋಟೆಲ್​ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾಗ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ನಡೆಸಲಾಗಿದ್ದ ಆಪರೇಶನ್​ ಬ್ಲ್ಯಾಕ್​ ಕಮಾಂಡೋ ಆ್ಯಂಟಿ-ಟೆರರ್​ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು.

ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಹೃದಯ ಸ್ತಂಭನದಿಂದ ಮೃಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ. ಜೆಕೆ ದತ್ತ ಅವರು 1971ರ ಬ್ಯಾಚ್​​ನ, ಬೆಂಗಾಲ್​ ಕೆಡರ್​ನ ಐಪಿಎಸ್​ ಅಧಿಕಾರಿಯಾಗಿದ್ದರು. 2006ರಿಂದ 2009ರವರೆಗೆ ಎನ್​​ಎಸ್​​ಜಿಯ ಮುಖ್ಯಸ್ಥರಾಗಿದ್ದರು. ಅಲ್ಲದೆ, ಸಿಬಿಐನ ಜಂಟಿ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ.

2008ರ ನವೆಂಬರ್​ 26ರಂದು ಲಷ್ಕರ್​ ಎ ತೊಯ್ಬಾದ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿದ್ದ ಭಯೋತ್ಪಾದಕರು ಪ್ರಮುಖ ಹೋಟೆಲ್​​ಗಳನ್ನೇ ಟಾರ್ಗೆಟ್ ಮಾಡಿದ್ದರು. ಅವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ಎನ್​ಎಸ್​ಜಿ ಕಮಾಂಡೋಗಳು ದಿಟ್ಟತನದ ಹೋರಾಟ ಮಾಡಿದ್ದರು. ಅವರಲ್ಲಿ ಜೆಕೆ ದತ್ತ ಕೂಡ ಪ್ರಮುಖರು.

ಇದನ್ನೂ ಓದಿ: ಬ್ಲ್ಯಾಕ್‌ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ, ಈಗಾಗಲೇ 1000 ವೈಲ್ಸ್‌ ಔಷಧಿ ಬಂದಿದೆ: ಅಶ್ವತ್ಥ ನಾರಾಯಣ

Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು

Former NSG Cheif JK Dutt who lead commondos during 2008 Mumbai Attack Died by Covid 19

Published On - 10:14 pm, Wed, 19 May 21

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ