AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

26/11ರ ಮುಂಬೈ ಉಗ್ರದಾಳಿಯ ವೇಳೆ ದಿಟ್ಟತನದಿಂದ ಹೋರಾಡಿದ್ದ ಎನ್​ಎಸ್​ಜಿ ಮುಖ್ಯಸ್ಥ ಜೆಕೆ ದತ್ತ ಕೊರೊನಾದಿಂದ ಸಾವು

ದೆಹಲಿ: 26/11 ರ ಮುಂಬೈ ಉಗ್ರದಾಳಿ ಸಂದರ್ಭದಲ್ಲಿ ಧೈರ್ಯದಿಂದ ಹೋರಾಡಿದ್ದ, ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್​​ಎಸ್​ಜಿ)ದ ಮುಖ್ಯಸ್ಥರಾಗಿದ್ದ ಜೆಕೆ ದತ್ತ ಅವರು ಇಂದು ಕೊವಿಡ್​ 19ನಿಂದ ಮೃತರಾಗಿದ್ದಾರೆ. ದತ್ತ ಅವರಿಗೆ 72 ವರ್ಷವಾಗಿತ್ತು. ಕೊವಿಡ್​ 19 ಸೋಂಕಿತರಾಗಿದ್ದ ಜೆಕೆ ದತ್ತ ಅವರನ್ನು ಗುರ್​ಗಾಂವ್​​ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. 2008ರಲ್ಲಿ ಮುಂಬೈನ ಹೋಟೆಲ್​ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾಗ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ನಡೆಸಲಾಗಿದ್ದ ಆಪರೇಶನ್​ ಬ್ಲ್ಯಾಕ್​ ಕಮಾಂಡೋ ಆ್ಯಂಟಿ-ಟೆರರ್​ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು. ಇಂದು ಮಧ್ಯಾಹ್ನ 3.30ರ […]

26/11ರ ಮುಂಬೈ ಉಗ್ರದಾಳಿಯ ವೇಳೆ ದಿಟ್ಟತನದಿಂದ ಹೋರಾಡಿದ್ದ ಎನ್​ಎಸ್​ಜಿ ಮುಖ್ಯಸ್ಥ ಜೆಕೆ ದತ್ತ ಕೊರೊನಾದಿಂದ ಸಾವು
ಜೆಕೆ ದತ್ತ
Lakshmi Hegde
|

Updated on:May 19, 2021 | 10:16 PM

Share

ದೆಹಲಿ: 26/11 ರ ಮುಂಬೈ ಉಗ್ರದಾಳಿ ಸಂದರ್ಭದಲ್ಲಿ ಧೈರ್ಯದಿಂದ ಹೋರಾಡಿದ್ದ, ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ದಳ (ಎನ್​​ಎಸ್​ಜಿ)ದ ಮುಖ್ಯಸ್ಥರಾಗಿದ್ದ ಜೆಕೆ ದತ್ತ ಅವರು ಇಂದು ಕೊವಿಡ್​ 19ನಿಂದ ಮೃತರಾಗಿದ್ದಾರೆ. ದತ್ತ ಅವರಿಗೆ 72 ವರ್ಷವಾಗಿತ್ತು.

ಕೊವಿಡ್​ 19 ಸೋಂಕಿತರಾಗಿದ್ದ ಜೆಕೆ ದತ್ತ ಅವರನ್ನು ಗುರ್​ಗಾಂವ್​​ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. 2008ರಲ್ಲಿ ಮುಂಬೈನ ಹೋಟೆಲ್​ಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾಗ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ನಡೆಸಲಾಗಿದ್ದ ಆಪರೇಶನ್​ ಬ್ಲ್ಯಾಕ್​ ಕಮಾಂಡೋ ಆ್ಯಂಟಿ-ಟೆರರ್​ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು.

ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಹೃದಯ ಸ್ತಂಭನದಿಂದ ಮೃಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ. ಜೆಕೆ ದತ್ತ ಅವರು 1971ರ ಬ್ಯಾಚ್​​ನ, ಬೆಂಗಾಲ್​ ಕೆಡರ್​ನ ಐಪಿಎಸ್​ ಅಧಿಕಾರಿಯಾಗಿದ್ದರು. 2006ರಿಂದ 2009ರವರೆಗೆ ಎನ್​​ಎಸ್​​ಜಿಯ ಮುಖ್ಯಸ್ಥರಾಗಿದ್ದರು. ಅಲ್ಲದೆ, ಸಿಬಿಐನ ಜಂಟಿ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ.

2008ರ ನವೆಂಬರ್​ 26ರಂದು ಲಷ್ಕರ್​ ಎ ತೊಯ್ಬಾದ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿದ್ದ ಭಯೋತ್ಪಾದಕರು ಪ್ರಮುಖ ಹೋಟೆಲ್​​ಗಳನ್ನೇ ಟಾರ್ಗೆಟ್ ಮಾಡಿದ್ದರು. ಅವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ಎನ್​ಎಸ್​ಜಿ ಕಮಾಂಡೋಗಳು ದಿಟ್ಟತನದ ಹೋರಾಟ ಮಾಡಿದ್ದರು. ಅವರಲ್ಲಿ ಜೆಕೆ ದತ್ತ ಕೂಡ ಪ್ರಮುಖರು.

ಇದನ್ನೂ ಓದಿ: ಬ್ಲ್ಯಾಕ್‌ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ, ಈಗಾಗಲೇ 1000 ವೈಲ್ಸ್‌ ಔಷಧಿ ಬಂದಿದೆ: ಅಶ್ವತ್ಥ ನಾರಾಯಣ

Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು

Former NSG Cheif JK Dutt who lead commondos during 2008 Mumbai Attack Died by Covid 19

Published On - 10:14 pm, Wed, 19 May 21

Follow Us
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ