ಹೋಲಾ ಮೊಹಲ್ಲಾ ಮೆರವಣಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಸಿಖ್​ ಯುವಕರು; ಕತ್ತಿ ಹಿಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಾಹನಗಳೆಲ್ಲ ಪುಡಿಪುಡಿ

Nanded Violence: ಮಹಾರಾಷ್ಟ್ರದ ಎಲ್ಲೆಡೆ ಕೊರೊನಾ ವೈರಸ್ ಪ್ರಸರಣ ಮಿತಿಮೀರಿದೆ. ಹಾಗಾಗಿ ಸಿಖ್​ರ ಹಬ್ಬವಾದ ಹೋಲಾ ಮೊಹಲ್ಲಾದ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ನಾವಿದನ್ನು ಗುರುದ್ವಾರ ಸಮಿತಿಗೆ ತಿಳಿಸಿದ್ದೆವು. ನಿಮ್ಮ ಆದೇಶವನ್ನು ಪಾಲಿಸುವುದಾಗಿ ಅವರೂ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೋಲಾ ಮೊಹಲ್ಲಾ ಮೆರವಣಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಸಿಖ್​ ಯುವಕರು; ಕತ್ತಿ ಹಿಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಾಹನಗಳೆಲ್ಲ ಪುಡಿಪುಡಿ
ನಾಂದೇಡ್​ನಲ್ಲಿ ನಡೆದ ಹಿಂಸಾಚಾರ
Follow us
|

Updated on: Mar 30, 2021 | 11:31 AM

ನಾಂದೇಡ್​: ಕೊವಿಡ್​-19 ಸೋಂಕು ಮಿತಿಮೀರುತ್ತಿರುವ ಕಾರಣಕ್ಕೆ ಹೋಲಾ ಮೊಹಲ್ಲಾ ಮೆರವಣಿಗೆ ಅನುಮತಿ ನೀಡದೆ ಇರುವ ಕಾರಣಕ್ಕೆ ಸಿಟ್ಟಿಗೆದ್ದ ಸಿಖ್​ ಗುಂಪೊಂದು ಕತ್ತಿಗಳನ್ನು ಹಿಡಿದು ಗಲಾಟೆ ಸೃಷ್ಟಿಸಿದ್ದಲ್ಲದೆ, ಪೊಲೀಸರ ಮೇಲೆ ಹಲ್ಲೆಯನ್ನೂ ಮಾಡಿದೆ. ಈ ಗಲಾಟೆಯಲ್ಲಿ ನಾಲ್ವರು ಪೊಲೀಸ್​ ಸಿಬ್ಬಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್​​ನಲ್ಲಿ ಸೋಮವಾರ ನಡೆದಿದೆ. ಅನೇಕ ವಾಹನಗಳನ್ನೂ ಜಖಂಗೊಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗುಂಪೊಂದು ಕತ್ತಿಗಳನ್ನು ಹಿಡಿದು ಗುರುದ್ವಾರದಿಂದ ಹೊರಬಂದು ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನು ಮುರಿದು, ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಮಹಾರಾಷ್ಟ್ರದ ಎಲ್ಲೆಡೆ ಕೊರೊನಾ ವೈರಸ್ ಪ್ರಸರಣ ಮಿತಿಮೀರಿದೆ. ಹಾಗಾಗಿ ಸಿಖ್​ರ ಹಬ್ಬವಾದ ಹೋಲಾ ಮೊಹಲ್ಲಾದ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ನಾವಿದನ್ನು ಗುರುದ್ವಾರ ಸಮಿತಿಗೆ ತಿಳಿಸಿದ್ದೆವು. ನಿಮ್ಮ ಆದೇಶವನ್ನು ಪಾಲಿಸುವುದಾಗಿ ಅವರೂ ಹೇಳಿದ್ದರು. ಗುರುದ್ವಾರದ ಒಳಗೇ ಕಾರ್ಯಕ್ರಮ ನಡೆಸುವುದಾಗಿಯೂ ಭರವಸೆ ನೀಡಿದ್ದರು. ಆದರೆ ಸಂಜೆ 4 ಗಂಟೆ ಹೊತ್ತಿಗೆ ಅವರ ನಿಶಾನ್​ ಸಾಹಿಬ್ ಧ್ವಜವನ್ನು ಗುರುದ್ವಾರದ ಗೇಟ್​ ಬಳಿ ತರುತ್ತಿದ್ದಂತೆ ವರಸೆಯೇ ಬದಲಾಗಿ ಹೋಯಿತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಲವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. 300ಕ್ಕೂ ಹೆಚ್ಚು ಯುವಕರು ಗೇಟ್​ನ್ನು ತೆರೆದು, ನುಗ್ಗಿಬಂದು ಬ್ಯಾರಿಕೇಡ್​​ಗಳನ್ನು ಮುರಿದರು. ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ತೊಡಗಿದರು ಎಂದು ನಾಂದೇಡ್​​ ವಲಯದ ಡಿಐಜಿ ನಿಸಾರ್​ ತಾಂಬೋಲಿ ತಿಳಿಸಿದ್ದಾರೆ.

ಗಾಯಗೊಂಡ ನಾಲ್ವರು ಪೊಲೀಸ್ ಸಿಬ್ಬಂದಿಯಲ್ಲಿ ಓರ್ವ ಕಾನ್​ಸ್ಟೆಬಲ್​ ಸ್ಥಿತಿ ಗಂಭೀರವಾಗಿದೆ. ಸುಮಾರು 6 ಪೊಲೀಸ್​ ವಾಹನಗಳು ಜಖಂಗೊಂಡಿವೆ. ಸುಮಾರು 200 ಜನರ ವಿರುದ್ಧ ಕೊಲೆ ಯತ್ನ ಸೆಕ್ಷನ್​ನಡಿ ಎಫ್​ಐಆರ್​ ದಾಖಲಿಸಲಾಗಿದೆ. ಈ ಹಿಂಸಾಚಾರ ನಡೆಸಿದವರನ್ನು ಎಲ್ಲರನ್ನೂ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಏನಿದು ಹೋಲಾ ಮೊಹಲ್ಲಾ(ಹೋಲಾ)? ಹೋಲಾ ಮೊಹಲ್ಲಾ ಎಂಬುದು ಸಿಖ್​ರು ಆಚರಿಸುವ ಹಬ್ಬ. ಹೋಳಿ ಹಬ್ಬದ ಮರುದಿನ ಈ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬದಲ್ಲಿ ಹಿಂದುಗಳು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರೆ, ಹೋಲಾ ಮೊಹಲ್ಲಾದಲ್ಲಿ ಸಿಖ್​ರು ತಮ್ಮ ಸಮರ ಕೌಶಲಗಳನ್ನು ಪ್ರದರ್ಶಿಸುತ್ತಾರೆ. ಮಹಾರಾಷ್ಟ್ರದ ನಾಂದೇಡ್​ ಸಿಖ್​ರ ಪ್ರಮುಖ ಯಾತ್ರಾಸ್ಥಳವಾಗಿದೆ. ಅಲ್ಲಿ ಪ್ರತಿವರ್ಷವೂ ಹೋಲಾ ಮೊಹಲ್ಲಾವನ್ನು ಅದ್ದೂರಿ, ಸಂಭ್ರಮದಿಂದ ಆಚರಿಸಲಾಗುತ್ತದೆ.

ಇದನ್ನೂ ಓದಿ: ಕಾಯಕ ಯೋಗಿ ಹುಟ್ಟುಹಬ್ಬ ಆಚರಣೆಗೆ ಕೊರೊನಾ ಅಡ್ಡಿ.. ಸರಳ ಆಚರಣೆಗೆ ಸಿದ್ಧತೆ

BJP Candidate Mangala Angadi Temple Run: ನಾಮಪತ್ರ ಸಲ್ಲಿಕೆಗೂ ಮುನ್ನ ಪುತ್ರಿಯರೊಂದಿಗೆ ಶಿವಾಜಿ-ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ