AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಯಿಂದಾಗಿ ಮಂಟಪದಲ್ಲಿ ವರ ಮೂರ್ಛೆ ಹೋಗಿದ್ದಕ್ಕೆ ಮದುವೆಯೇ ರದ್ದು

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ, ಜಾರ್ಖಂಡ್​ನ ದಿಯೋಗಢದಲ್ಲಿ ಚಳಿಯಿಂದಾಗಿ ಮದುವೆಯೇ ರದ್ದುಗೊಂಡಿದೆ. ವಿಪರೀತ ಚಳಿಯಿಂದಾಗಿ ವರ ಮದುವೆ ಮಂಟಪದಲ್ಲೇ ಮೂರ್ಛೆ ಹೋಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ವಧು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ. ಡಿಸೆಂಬರ್ 15ರಂದು ದಿಯೋಗಢದ ಘೋರ್ಮಾರಾದಲ್ಲಿ ವರ ಆರ್ನವ್ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹವಾಗಬೇಕಿತ್ತು.

ಚಳಿಯಿಂದಾಗಿ ಮಂಟಪದಲ್ಲಿ ವರ ಮೂರ್ಛೆ ಹೋಗಿದ್ದಕ್ಕೆ ಮದುವೆಯೇ ರದ್ದು
ಮದುವೆ
ನಯನಾ ರಾಜೀವ್
|

Updated on:Dec 17, 2024 | 2:15 PM

Share

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ, ಜಾರ್ಖಂಡ್​ನ ದಿಯೋಗಢದಲ್ಲಿ ಚಳಿಯಿಂದಾಗಿ ಮದುವೆಯೇ ರದ್ದುಗೊಂಡಿದೆ. ವಿಪರೀತ ಚಳಿಯಿಂದಾಗಿ ವರ ಮದುವೆ ಮಂಟಪದಲ್ಲೇ ಮೂರ್ಛೆ ಹೋಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ವಧು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ. ಡಿಸೆಂಬರ್ 15ರಂದು ದಿಯೋಗಢದ ಘೋರ್ಮಾರಾದಲ್ಲಿ ವರ ಆರ್ನವ್ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹವಾಗಬೇಕಿತ್ತು. ಅನಾರೋಗ್ಯದ ಕಾರಣ ಚಳಿಯನ್ನು ತಡೆದುಕೊಳ್ಳಲಾಗದೆ ಮೂರ್ಛೆ ಹೋಗಿದ್ದರು. ಆದರೆ ವಧು ಇದೇ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

ಮದುವೆಯು ಸ್ಥಳೀಯ ಪಟ್ಟಣವೊಂದರಲ್ಲಿ ನಡೆಯುತ್ತಿತ್ತು. ವಧುವಿನ ಕುಟುಂಬ ಮತ್ತು ಸಂಬಂಧಿಕರು ಎಲ್ಲರೂ ವರನಿದ್ದ ಸ್ಥಳವನ್ನು ತಲುಪಿದರು. ಸಂಪ್ರದಾಯದಂತೆ ಸಕಲ ವಿಧಿವಿಧಾನಗಳು ನೆರವೇರಿದ್ದು, ಶೀತ ವಾತಾವರಣದ ನಡುವೆ ಬಯಲಿನಲ್ಲಿ ವರಮಾಲಾ ಸಮಾರಂಭವೂ ಸಂತಸದಿಂದ ನೆರವೇರಿತು. ನಂತರ ಎರಡು ಕುಟುಂಬಗಳು, ವಧು ಮತ್ತು ವರನೊಂದಿಗೆ ರಾತ್ರಿ ಊಟ ಮಾಡಿ ಸಪ್ತಪದಿ ತುಳಿಯಲು ಸಿದ್ಧರಾಗಿದ್ದರು. ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ವರ ನಡುಗಲು ಶುರು ಮಾಡಿದ್ದ ತಕ್ಷನವೇ ಪ್ರಜ್ಞೆ ತಪ್ಪಿ ಬಿದ್ದಿದ್ದ.

ಗಾಬರಿಯಾದ ಮದುಮಗನ ಮನೆಯವರು ಆತನನ್ನು ಸಮೀಪದ ಕೋಣೆಗೆ ಕರೆದೊಯ್ದು ಆತನ ಅಂಗೈ ಮತ್ತು ಅಡಿಭಾಗವನ್ನು ಉಜ್ಜಿ ಪ್ರಜ್ಞೆಗೆ ತರಲು ಪ್ರಯತ್ನಿಸಿದರು. ವೈದ್ಯರನ್ನು ಕರೆಸಲಾಯಿತು. ಒಂದೂವರೆ ಗಂಟೆಗಳ ಬಳಿಕ ಪ್ರಜ್ಞೆಗೆ ಮರಳಿದ್ದರು. ಆದರೆ ವಧು ಈ ಮದುವೆಯನ್ನು ನಿರಾಕರಿಸಿದ್ದಾಳೆ. ಆರ್ನವ್ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆತ ಚಳಿಯಲ್ಲಿ ಮೂರ್ಛೆ ಹೋಗಿದ್ದಾನೆ ಎಂಬ ಭಯ ಕಾಡುತ್ತಿದೆ ಎಂದು ಅಂಕಿತಾ ಹೇಳಿದ್ದಾರೆ.

ಮತ್ತಷ್ಟು ಓದಿ: ಮದುವೆ ದಿನ ರಾತ್ರಿ ಮಧುಮಗಳು ಮಾಡಿದ ಕೆಲಸದಿಂದ ಪತಿ ಆಸ್ಪತ್ರೆ ಸೇರುವಂತಾಯ್ತು

ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿತ್ತು, ವಧುವಿನ ಮನೆಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಲು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಾಕಿ ಉಳಿದಿರುವ ವಿವಾಹದ ವಿಧಿವಿಧಾನಗಳನ್ನು ಮುಂದುವರಿಸಲು ಎರಡೂ ಕಡೆಯವರನ್ನು ಮನವೊಲಿಸಲು ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು.

ಆದಾಗ್ಯೂ, ಮರುದಿನ ಬೆಳಿಗ್ಗೆ ತನಕ ಪರಿಸ್ಥಿತಿ ಸುಧಾರಿಸಲಿಲ್ಲ ಮತ್ತು ಅಂತಿಮವಾಗಿ ಎರಡು ಕಡೆಯವರ ಒಪ್ಪಿಗೆಯೊಂದಿಗೆ ಮದುವೆಯನ್ನು ರದ್ದುಗೊಳಿಸಲಾಯಿತು. ಆರ್ನವ್ ಅವರ ಕುಟುಂಬವು ಘೋರ್ಪಾರಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರೆ, ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಭಾಗಲ್ಪುರಕ್ಕೆ ಹಿಂತಿರುಗಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:05 pm, Tue, 17 December 24

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ