
ನವದೆಹಲಿ, ಮೇ 28: ಕೇಂದ್ರ ಸಚಿವ ಸಂಪುಟವು (Modi Cabinet) ಇಂದು ರೈತರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಮೋದಿ ಸರ್ಕಾರ ಕೃಷಿ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಮುಖ ನಿರ್ಧಾರಗಳನ್ನು ಅಂಗೀಕರಿಸಿದೆ. 2025–26ರ ಋತುವಿನ ಖಾರಿಫ್ ಬೆಳೆಗಳಿಗೆ (Kharif crops) ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಸರ್ಕಾರ ಅನುಮೋದಿಸಿದೆ. ಮಾರುಕಟ್ಟೆ ಬೆಲೆಗಳು ಕಡಿಮೆಯಾಗಿದ್ದರೂ ಸಹ, ರೈತರಿಂದ ಬೆಳೆಗಳನ್ನು ಖರೀದಿಸಲು ಸರ್ಕಾರ ಭರವಸೆ ನೀಡುವ ಕನಿಷ್ಠ ಬೆಲೆಯೇ ಎಂಎಸ್ಪಿ. ರೈತರು ನ್ಯಾಯಯುತ ಬೆಲೆಯನ್ನು ಪಡೆಯಲು ಪ್ರತಿ ವರ್ಷ ವಿವಿಧ ಬೆಳೆಗಳಿಗೆ ಎಂಎಸ್ಪಿ ನಿಗದಿಪಡಿಸಲಾಗುತ್ತದೆ.
ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳಲ್ಲಿ (MSP) ಹೊಸ ಹೆಚ್ಚಳ, ರೈತರಿಗೆ ಬಡ್ಡಿ ರಿಯಾಯಿತಿ ಯೋಜನೆಯ ಮುಂದುವರಿಕೆ ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಪ್ರಮುಖ ರಸ್ತೆ ಮತ್ತು ರೈಲು ಯೋಜನೆಗಳಿಗೆ ಹಸಿರು ನಿಶಾನೆ ಸೇರಿದಂತೆ ಕೃಷಿ ಮತ್ತು ಮೂಲಸೌಕರ್ಯದ ಮೇಲೆ ಪರಿಣಾಮ ಬೀರುವ ಹಲವಾರು ಮಹತ್ವದ ಕ್ರಮಗಳನ್ನು ಕೇಂದ್ರ ಸಚಿವ ಸಂಪುಟ ಇಂದು ಅನುಮೋದಿಸಿದೆ.
VIDEO | Delhi: Union Minister Ashwini Vaishnaw (@AshwiniVaishnaw), during a Cabinet briefing, spoke about the approval for four-laning of the Wardha–Ballarshah railway line:
“This project involves the four-laning of the Wardha–Ballarshah line, which lies on the busy trunk route… pic.twitter.com/qX6gTG9spf
— Press Trust of India (@PTI_News) May 28, 2025
ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ವೆಚ್ಚಕ್ಕಿಂತ 50% ಲಾಭದ ಅಂತರವನ್ನು ಖಚಿತಪಡಿಸುತ್ತದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ 2025–26ರ ಋತುವಿನ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬೆಳೆಗಳ ಅಂದಾಜು ಖರೀದಿ ವೆಚ್ಚವು 2.07 ಲಕ್ಷ ಕೋಟಿ ರೂ.ಗಳಷ್ಟಿದೆ.
#WATCH | Union Minister Ashwini Vaishnaw says, “There is Krishnapatnam Port in Andhra Pradesh. Its last section, NH 67 was a bottleneck. Around 105 kilometres has been approved as 4-lane highway (Badvel Nellore 4-lane highway)…This is being done at an expense of Rs 3,653… pic.twitter.com/NvXWXPOCt3
— ANI (@ANI) May 28, 2025
ಇದನ್ನೂ ಓದಿ: ಜಸ್ಟ್ ಸಿಂಗಲ್ ಮಾವಿನ ಹಣ್ಣಿಗೆ 10 ಸಾವಿರ ರೂ.: ಇದು ಕರ್ನಾಟಕದಲ್ಲೇ ಬೆಳೆದ ತಳಿ ಯಾವುದು ಗೊತ್ತಾ?
“ಕಳೆದ 10–11 ವರ್ಷಗಳಲ್ಲಿ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿ ರೈತರು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50% ಲಾಭವನ್ನು ಪಡೆಯುವುದನ್ನು ಖಚಿತಪಡಿಸಿದ್ದಾರೆ. ಬಡ್ಡಿ ಸಬ್ಸಿಡಿ ಯೋಜನೆಯಡಿ ಸಬ್ಸಿಡಿ ಕೃಷಿ ಸಾಲಗಳು ಮುಂದುವರಿಯಲಿವೆ. ರೈತರಿಗೆ ರಿಯಾಯಿತಿ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲವನ್ನು ಒದಗಿಸುವ ಬಡ್ಡಿ ಸಬ್ಸಿಡಿ ಯೋಜನೆಯ ಮುಂದುವರಿಕೆಗೆ ಸಂಪುಟ ಅನುಮೋದನೆ ನೀಡಿದೆ.
The Union Cabinet chaired by Hon’ble PM Shri @narendramodi ji has approved increase in the Minimum Support Price (MSP) for 14 Kharif crops for Marketing Season 2025-26.
The expected margin to farmers over their cost of production is at least 50% for all crops, and highest in the… pic.twitter.com/OC9PIh3noF
— G Kishan Reddy (@kishanreddybjp) May 28, 2025
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಮೊದಲು ಪರಿಚಯಿಸಲಾದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಉಪಕ್ರಮವು ರೈತರಿಗೆ ಬಂಡವಾಳವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. “ಈ ಯೋಜನೆಯ ಮೂಲಕ ನಾವು ಸಾಲದ ವೆಚ್ಚವನ್ನು ಕಡಿಮೆ ಮಾಡಿದ್ದೇವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಟ್ಟಿದ್ದೇವೆ” ಎಂದು ಅವರು ಹೇಳಿದ್ದಾರೆ.
VIDEO | Delhi: Here’s what Union Minister Ashwini Vaishnaw (@AshwiniVaishnaw) said during Cabinet briefing about approving quadrupling of Ratlam-Nagda railway line:
“The project is about quadrupling or making the Ratlam-Nagda railway line into four-line. We are trying to fill in… pic.twitter.com/VK5XSM6tM7
— Press Trust of India (@PTI_News) May 28, 2025
ಇದನ್ನೂ ಓದಿ: Narendra Modi: ಮೇ 29ರಿಂದ ಎರಡು ದಿನ ಈ ನಾಲ್ಕು ರಾಜ್ಯಗಳಿಗೆ ಪ್ರಧಾನಿ ಮೋದಿ ಭೇಟಿ
ಮುಂಬರುವ ಖಾರಿಫ್ 2025–26 ಮಾರುಕಟ್ಟೆ ಋತುವಿನಲ್ಲಿ ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಕ್ವಿಂಟಾಲ್ಗೆ 69 ರೂ. ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಭತ್ತದ MSP ಅನ್ನು ಕ್ವಿಂಟಾಲ್ಗೆ 2,369 ರೂ.ಗೆ ಇಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಈ ನಿರ್ಧಾರವನ್ನು ತೆಗೆದುಕೊಂಡಿದೆ. ಭತ್ತದ (ಗ್ರೇಡ್ A) MSP ಅನ್ನು ಕ್ವಿಂಟಾಲ್ಗೆ 69 ರೂ.ನಿಂದ 2,389 ರೂ.ಗೆ ಹೆಚ್ಚಿಸಲಾಗಿದೆ.
VIDEO | Delhi: Here’s what Union Minister Ashwini Vaishnaw (@AshwiniVaishnaw) said regarding Cabinet increase MSP for Kharif crops:
“In past 10-11 years, there is major hike in Kharif crops MSP. In this section, according to Commission for Agricultural Costs and Prices (CACP)… pic.twitter.com/6RYqGmijrQ
— Press Trust of India (@PTI_News) May 28, 2025
ಭತ್ತದ ಮೇಲಿನ ಹೆಚ್ಚಳವನ್ನು ಎತ್ತಿ ತೋರಿಸಲಾಗಿದ್ದರೂ ಇತರ 13 ಖಾರಿಫ್ ಬೆಳೆಗಳಿಗೆ ಪರಿಷ್ಕೃತ MSPಗಳನ್ನು ಸಹ ಸಚಿವ ಸಂಪುಟ ಅನುಮೋದಿಸಿದೆ. ನೈಜರ್ ಸೀಡ್ ಕ್ವಿಂಟಾಲ್ಗೆ 820 ರೂ.ನಷ್ಟು ಅತ್ಯಧಿಕ ಹೆಚ್ಚಳ ಕಂಡಿದ್ದು, ನಂತರ ರಾಗಿ (596 ರೂ.), ಹತ್ತಿ (589 ರೂ.), ಮತ್ತು ಎಳ್ಳು (579 ರೂ.) ಏರಿಕೆ ಕಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ