AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ಎಎಪಿ ಶಾಸಕ ಭೂಪತ್ ಭಯಾನಿ ರಾಜೀನಾಮೆ; ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ

ರಾಜೀನಾಮೆ ನೀಡಿದ ಬಳಿಕ ಭೂಪತ್ ಭಯಾನಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಆಮ್ ಆದ್ಮಿ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ, ನಾನು ರಾಷ್ಟ್ರೀಯವಾದಿ ಮತ್ತು ಜನಪರ ಕೆಲಸ ಮಾಡಲು ಬಯಸುತ್ತೇನೆ ಎಂದಿದ್ದಾರೆ.

ಗುಜರಾತ್ ಎಎಪಿ ಶಾಸಕ ಭೂಪತ್ ಭಯಾನಿ ರಾಜೀನಾಮೆ; ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ
ಭೂಪತ್ ಭಯಾನಿ
ರಶ್ಮಿ ಕಲ್ಲಕಟ್ಟ
|

Updated on: Dec 13, 2023 | 12:59 PM

Share

ದೆಹಲಿ ಡಿಸೆಂಬರ್ 13: ಗುಜರಾತಿನ ವಿಸಾವದರ್ (Visavadar) ಶಾಸಕ ಸ್ಥಾನಕ್ಕೆ ಭೂಪತ್ ಭಯಾನಿ (Bhupat Bhayani) ರಾಜೀನಾಮೆ ನೀಡಿದ್ದಾರೆ.ಎಎಪಿ ಶಾಸಕರಾಗಿರುವ ಭೂಪತ್ ಭಯಾನಿ ಶೀಘ್ರದಲ್ಲೇ ಬಿಜೆಪಿ (BJP) ಸೇರಲಿದ್ದಾರೆ. ಭೂಪತ್ ಭಯಾನಿ ಅವರು ಗುಜರಾತ್ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಲೋಕಸಭೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಸಿಕ್ಕಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಗೆದ್ದ ಐದು ಸ್ಥಾನಗಳಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ಉಳಿಸಿಕೊಂಡಿದೆ.

ರಾಜೀನಾಮೆ ನೀಡಿದ ಬಳಿಕ ಭೂಪತ್ ಭಯಾನಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಆಮ್ ಆದ್ಮಿ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ, ನಾನು ರಾಷ್ಟ್ರೀಯವಾದಿ ಮತ್ತು ಜನಪರ ಕೆಲಸ ಮಾಡಲು ಬಯಸುತ್ತೇನೆ. ನಾನು ಮೊದಲು ಬಿಜೆಪಿಯ ಕಾರ್ಯಕರ್ತನಾಗಿದ್ದೆ ಎಂದ ಅವರು, 22 ವರ್ಷಗಳಿಂದ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಎಲ್ಲ ಕಾರ್ಯಕರ್ತರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಂಡಿದ್ದು ಬಿಜೆಪಿ ಸೇರುವುದಾಗಿ ಘೋಷಿಸಿದರು.

ಭೂಪತ್ ಭಯಾನಿ ಯಾರು?

ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿಸವಾದರ್ ಶಾಸಕರಾಗಿ ಗೆದ್ದರು. ಅವರನ್ನು ಸ್ಥಳೀಯ ಪ್ರದೇಶದಲ್ಲಿ 108 ಎಂದು ಕರೆಯಲಾಗುತ್ತದೆ. ಅವರು ಸರಪಂಚರಿಂದ ಶಾಸಕರವರೆಗೆ ರಾಜಕೀಯ ಪಯಣ ಬೆಳೆಸಿದ್ದಾರೆ. ಭೂಪತ್ ಭಯಾನಿ 2017ರವರೆಗೆ ಬಿಜೆಪಿಯಲ್ಲಿದ್ದರು. ಆದರೆ, 2022ರಲ್ಲಿ ಅವರು ‘ಎಎಪಿ’ಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಮೊದಲು ಜುನಾಗಢ ಜಿಲ್ಲೆಯ ಉಪಾಧ್ಯಕ್ಷರೂ ಆಗಿದ್ದರು. ಆದರೆ, ಭಯಾನಿ ಅವರನ್ನು ಸರಪಂಚ ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು. ಭೂಪತ್ ಭಯಾನಿ ಅವರನ್ನು ಮಾಜಿ ಸಿಎಂ ವಿಜಯ್ ರೂಪಾನಿ ಅವರ ಆಪ್ತ ನಾಯಕ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಕುರಿತ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ

ರಾಜೀನಾಮೆಯ ಪರಿಣಾಮವೇನು?

ಲೋಕಸಭೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಹೊಡೆತ ಬಿದ್ದಿದೆ.ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರ ಸಂಖ್ಯೆ ಇದೀಗ 4ಕ್ಕೆ ಇಳಿದಿದೆ. ನಂತರ ವಿಶವಾದರ್ ಸ್ಥಾನ ತೆರವಾದ ಕಾರಣ ಇಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಇದರ ಪರಿಣಾಮ ಲೋಕಸಭೆ ಚುನಾವಣೆಯ ಮೇಲೂ ಆಗಲಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ತೆರವಾಗಿರುವ ವಿಸಾವದಾರ್ ವಿಧಾನಸಭಾ ಸ್ಥಾನಕ್ಕೂ ಆರು ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಬಿಜೆಪಿ ಸಂಪರ್ದಲ್ಲಿದ್ದಾರೆ ಆಪ್ ಶಾಸಕರು

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಇನ್ನಿಬ್ಬರು ಎಎಪಿ ಶಾಸಕರು ಚುನಾವಣೆಗೂ ಮುನ್ನ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳಿವೆ. ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿರುವುದು ಗೋಚರಿಸುತ್ತಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ ಐವರು ಶಾಸಕರಿದ್ದು, ಈ ಪೈಕಿ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ. ಈಗ ಕೇವಲ ನಾಲ್ಕು ಎಎಪಿ ಶಾಸಕರಿದ್ದಾರೆ. ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ