Sign In

By signing in or creating an account, you agree with Associated Broadcasting Company's Terms & Conditions and Privacy Policy.

Haj 2021: ಹಜ್​ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿ ರದ್ದು; ಭಾರತೀಯ ಹಜ್​ ಕಮಿಟಿಯಿಂದ ಮಾಹಿತಿ ಪ್ರಕಟ

Haj Committee: ಹಜ್ 1442 ರಲ್ಲಿ ಸೌದಿ ಅರೇಬಿಯಾದ ನಾಗರಿಕರು ಅದೂ ಸೀಮಿತ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೌದಿ ಅರೇಬಿಯಾ ಆಡಳಿತ ಹೇಳಿದೆ. ಅಂತಾರಾಷ್ಟ್ರೀಯ ಹಜ್ ಯಾತ್ರೆಯನ್ನು ನಿಷೇಧಿಸಲಾಗಿದೆ.

Haj 2021: ಹಜ್​ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿ ರದ್ದು; ಭಾರತೀಯ ಹಜ್​ ಕಮಿಟಿಯಿಂದ ಮಾಹಿತಿ ಪ್ರಕಟ
ಮೆಕ್ಕಾ
Follow us
TV9 Web
| Updated By: ganapathi bhat

Updated on: Jun 15, 2021 | 9:00 PM

ದೆಹಲಿ: ಈ ಬಾರಿಯ (2021ನೇ ಸಾಲಿನ) ಹಜ್​ ಯಾತ್ರೆಗೆ ಸಲ್ಲಿಸಿದ್ದ ಎಲ್ಲ ಅರ್ಜಿಯನ್ನು ರದ್ದುಗೊಳಿಸಲಾಗಿದೆ. ವಿದೇಶೀಯರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಭಾರತೀಯ ಹಜ್​ ಕಮಿಟಿಯಿಂದ ಈ ಮಾಹಿತಿ ಪ್ರಕಟವಾಗಿದೆ. ಅದರಂತೆ, ಭಾರತೀಯರು ಹಜ್​ ಯಾತ್ರೆಗೆ ಸಲ್ಲಿಸಿದ್ದ ಅರ್ಜಿಗಳು ರದ್ದಾಗಿದೆ. ಕೊವಿಡ್-19 ಕಾರಣದಿಂದ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾ ಇತ್ತೀಚೆಗಷ್ಟೇ ನಿರ್ಬಂಧ ಹೇರಿತ್ತು.

ಹಜ್ 1442 ರಲ್ಲಿ ಸೌದಿ ಅರೇಬಿಯಾದ ನಾಗರಿಕರು ಅದೂ ಸೀಮಿತ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೌದಿ ಅರೇಬಿಯಾ ಆಡಳಿತ ಹೇಳಿದೆ. ಅಂತಾರಾಷ್ಟ್ರೀಯ ಹಜ್ ಯಾತ್ರೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಹಜ್- 2021ರ ಅರ್ಜಿಗಳನ್ನು ಭಾರತದ ಹಜ್ ಕಮಿಟಿ ಕೂಡ ರದ್ದುಗೊಳಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವರ್ಷ ಕೊವಿಡ್ Haj Committee: ಸೋಂಕಿನ ಕಾರಣದಿಂದ ಪವಿತ್ರ ಹಜ್ ಯಾತ್ರೆಗೆ ವಿದೇಶಿ ಯಾತ್ರಾರ್ಥಿಗಳಿಗೆ ಅವಕಾಶ ನೀಡದಿರುವುದಾಗಿ ಸೌದಿ ಅರೇಬಿಯಾ ಜೂನ್ 12ರಂದು ತಿಳಿಸಿತ್ತು. ಈ ಬಾರಿ ಒಟ್ಟು 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಪವಿತ್ರ ಹಜ್ ಯಾತ್ರೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸೌದಿ ಅರೇಬಿಯಾದ ಆರೋಗ್ಯ ಮತ್ತು ಹಜ್ ಸಚಿವಾಲಯ ತಿಳಿಸಿತ್ತು.

ಅಲ್ಲದೇ, ಸೌದಿ ಅರೇಬಿಯಾ ಸರ್ಕಾರ ನಿಗಡಿಪಡಿಸಿರುವ ನಿಯಮಗಳ ಪ್ರಕಾರ ಈಗಾಗಲೇ ಕೊವಿಡ್ ಲಸಿಕೆ ಪಡೆದುಕೊಂಡವರು, ಕನಿಷ್ಠ 14 ದಿನಗಳ ಹಿಂದಾದರೂ ಲಸಿಕೆ ಪಡೆದವರು ಮತ್ತು ಕೊವಿಡ್​ನಿಂದ ಗುಣಮುಖರಾದ ನಂತರ ಲಸಿಕೆ ಪಡೆದವರಿಗೆ ಮಾತ್ರ ಹಜ್ ದರ್ಶನ ಒದಗಿಸಲಾಗುವುದು ಎಂದು ವರದಿಯಾಗಿತ್ತು.

ಈ ವರ್ಷದ ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗುವ ಮುಸ್ಲಿಂ ಸಮುದಾಯದ ಪವಿತ್ರ ಕ್ಷೇತ್ರದ ದರ್ಶನಕ್ಕೆ 18ರಿಂದ 65 ವರ್ಷದ ಒಳಗಿನವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷವೂ ಕೊವಿಡ್​ ಪಿಡುಗಿನ ಕಾರಣದಿಂದ ಅತ್ಯಲ್ಪ ಯಾತ್ರಾರ್ಥಿಗಳಿಗಷ್ಟೇ ಹಜ್ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ, ಸೌದಿ ಅರೇಬಿಯಾವು ಜನರ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿ ವಿದೇಶಿಯವರಿಗೆ ಅವಕಾಶ ನೀಡದೇ, ದೇಶದ 60 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ: Hajj 2021: ಪವಿತ್ರ ಹಜ್ ಯಾತ್ರೆಗೆ ವಿದೇಶಿಯರಿಗಿಲ್ಲ ಅವಕಾಶ, ಸ್ಥಳೀಯ 60 ಸಾವಿರ ಯಾತ್ರಾರ್ಥಿಗಳಿಗಷ್ಟೇ ದರ್ಶನ ಭಾಗ್ಯ

ಮುಸ್ಲಿಮರಿಗೆ ಶುಭ ಸುದ್ದಿ; ಆದಷ್ಟು ಬೇಗ ನಿಗದಿಯಾಗಲಿದೆ ಹಜ್, ಉಮ್ರಾ ತೀರ್ಥ ಯಾತ್ರೆ ದಿನಾಂಕ.. ಸೌದಿ ಪ್ರಕಟಣೆ

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ