ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಗೆ ಖಡಕ್ ಉತ್ತರ ನೀಡಿ ಬಾಯ್ಮುಚ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

ಮೇ 5 ರಂದು ಎಸ್‌ಸಿಒ ವಿದೇಶಾಂಗ ಸಚಿವರು ಗೋವಾ ಶೃಂಗಸಭೆಯ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಬೇಕಿದ್ದ ತಮ್ಮ ಸಮರ್ಥ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರನ್ನು ಪಕ್ಕಕ್ಕೆ ಸರಿಯುವಂತೆ ಜೈಶಂಕರ್ ಕೇಳಿಕೊಂಡರು. ಇದರಿಂದಾಗಿ ಅವರು ಜರ್ದಾರಿ ಅವರ ಸುಳ್ಳುಗಳನ್ನು ಮತ್ತು ಮೊದಲು ಪ್ರಚಾರ ಮಾಡಿದ ಸುಳ್ಳು ಪಾಕಿಸ್ತಾನಿ ನಿರೂಪಣೆಯನ್ನು ಕೆಡವಲು ಸಾಧ್ಯವಾಯಿತು

ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಗೆ ಖಡಕ್ ಉತ್ತರ ನೀಡಿ ಬಾಯ್ಮುಚ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್
ಎಸ್.ಜೈಶಂಕರ್
Follow us
|

Updated on:May 11, 2023 | 7:01 PM

ಎಸ್.ಜೈಶಂಕರ್ (EAM Jaishankar) ಅವರನ್ನು ಅವರ ಅಧಿಕಾರಶಾಹಿ ದಿನಗಳಿಂದ ಬಲ್ಲವರಿಗೆ, ವಿದೇಶಾಂಗ ವ್ಯವಹಾರಗಳ ಸಚಿವರು ಯಾವಾಗಲೂ ಯಾವ ರೀತಿ ನೇರಾ ನೇರಾ ಉತ್ತರಿಸುತ್ತಾರೆ ಎಂಬುದು ಗೊತ್ತು. ಇತ್ತೀಚೆಗೆ ಜೈಶಂಕರ್ ಅವರು ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಅವರಿಗೆ ನೇರ ಪ್ರತಿಕ್ರಿಯೆ ನೀಡಿದ್ದರು. ಮೇ 4-5 ರಂದು ಗೋವಾದಲ್ಲಿದಲ್ಲಿ ನಡೆದ ಎಸ್‌ಸಿಒ ಸಮ್ಮೇಳನದಲ್ಲಿ ಬಿಲಾವಲ್ ಭಾಗವಹಿಸಿದ್ದರು. ಮೇ 5 ರಂದು ನಡೆದ ಎಸ್‌ಸಿಒ ನಂತರದ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಪಾಕಿಸ್ತಾನದ ಮೇಲೆ ಜೈಶಂಕರ್ ಗುಡುಗಿದ್ದಾರೆ ಎಂದು ಭಾರತದ ಎಡ-ಲಿಬರಲ್ ಮಾಧ್ಯಮಗಳು ವರದಿ ಮಾಡಿದ್ದು, ಜರ್ದಾರಿಯ ಕೆಳಮಟ್ಟದ ತಂತ್ರಗಳು ಜೈಶಂಕರ್ ಅವರನ್ನು ಕೆರಳಿಸಿತು ಎಂಬುದು ಸತ್ಯ.

ಪಾಕಿಸ್ತಾನದೊಂದಿಗಿನ ಯಾವುದೇ ದ್ವಿಪಕ್ಷೀಯ ಸಭೆಗೆ ಭಾರತವು ಆಸಕ್ತಿ ಹೊಂದಿಲ್ಲ ಎಂಬುದು ಗೋವಾ ಸಭೆಗೆ ಮುಂಚೆಯೇ ಸ್ಪಷ್ಟವಾಗಿತ್ತು. ಆದರೆ ಜರ್ದಾರಿ ಭಾರತದ ನೆಲದಲ್ಲಿ ಎಲ್ಲಾ ದ್ವಿಪಕ್ಷೀಯ ಸಮಸ್ಯೆಗಳನ್ನು ಎತ್ತುವ ಯೋಜನೆಯನ್ನು ಹೊಂದಿದ್ದಾರೆ ಎಂದು ತಿಳಿದ ನಂತರ ಜೈಶಂಕರ್ ಮೂಡ್ ಬದಲಾಯಿತು.

ಬಿಲಾವಲ್ ಅವರು ಎರಡು ಭಾರತೀಯ ಮಾಧ್ಯಮ ಗುಂಪುಗಳೊಂದಿಗೆ ಮೂರು ಸಂದರ್ಶನಗಳನ್ನು ಮತ್ತು ಬಿಬಿಸಿಯೊಂದಿಗೆ ಮೂರು ಸಂದರ್ಶನಗಳನ್ನು ಯೋಜಿಸಿದ್ದಾರೆ ಎಂದು ಜೈಶಂಕರ್ ಅವರಿಗೆ ಮುಂಚಿತವಾಗಿ ತಿಳಿಸಲಾಗಿತ್ತು. ಜರ್ದಾರಿ ಮೇ 5 ರಂದು ಭಾರತವನ್ನು ತೊರೆಯುವವರೆಗೆ ಸಂದರ್ಶನಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಲಾಗಿತ್ತು. ಭಾರತೀಯ ಮಾಧ್ಯಮಗಳಿಗೆ ಪ್ರವೇಶ ನಿಷೇಧಿಸಿ ಗೋವಾಕ್ಕೆ ತೆರಳಿದ್ದ ಪಾಕಿಸ್ತಾನದ ಮಾಧ್ಯಮಗಳೊಂದಿಗೆ ಜರ್ದಾರಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಜೈಶಂಕರ್‌ಗೆ ಹೇಳಲಾಗಿತ್ತು. ಭುಟ್ಟೋ-ಜರ್ದಾರಿ ರಾಜಕೀಯ ರಾಜವಂಶದ ವಂಶಸ್ಥರು  ಅವರ ತಾಯಿ ಮತ್ತು ತಾಯಿಯ ಅಜ್ಜ ಇಬ್ಬರೂ ಭಾರತದ ಟೀಕಾಕಾರರಾಗಿದ್ದರು. ಕಾಶ್ಮೀರ, ಆರ್ಟಿಕಲ್ 370, ಮಾನವ ಹಕ್ಕುಗಳು ಹೀಗೆ ಪಾಕಿಸ್ತಾನಿ ನಿರೂಪಣೆಗೆ ಪ್ರಿಯವಾದ ಎಲ್ಲಾ ಸಮಸ್ಯೆಗಳನ್ನು ಬಿಲಾವಲ್ ಪ್ರಸ್ತಾಪಿಸಿದರು. ಜುಲೈ 14-16, 2001, ಆಗ್ರಾ ಶೃಂಗಸಭೆಯಲ್ಲಿ ಪಾಕಿಸ್ತಾನಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಹಳಿತಪ್ಪಿಸಿದಂತೆ ಜರ್ದಾರಿ ಬೇರೆ ವಿಷಯಗಳತ್ತ ತಿರುಗಿಸುವುದು ಜೈಶಂಕರ್ ಅವರಿಗೆ ಸಿಟ್ಟು ತರಿಸಿತ್ತು.

ಇದನ್ನೂ ಓದಿ:  Pakistan: ಇಮ್ರಾನ್ ಖಾನ್ ಆಪ್ತ ಸಹಾಯಕ ಶಾ ಮೆಹಮೂದ್ ಖುರೇಷಿ ಬಂಧನ

ಮೇ 5 ರಂದು ಎಸ್‌ಸಿಒ ವಿದೇಶಾಂಗ ಸಚಿವರು ಗೋವಾ ಶೃಂಗಸಭೆಯ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಬೇಕಿದ್ದ ತಮ್ಮ ಸಮರ್ಥ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರನ್ನು ಪಕ್ಕಕ್ಕೆ ಸರಿಯುವಂತೆ ಜೈಶಂಕರ್ ಕೇಳಿಕೊಂಡರು. ಇದರಿಂದಾಗಿ ಅವರು ಜರ್ದಾರಿ ಅವರ ಸುಳ್ಳುಗಳನ್ನು ಮತ್ತು ಮೊದಲು ಪ್ರಚಾರ ಮಾಡಿದ ಸುಳ್ಳು ಪಾಕಿಸ್ತಾನಿ ನಿರೂಪಣೆಯನ್ನು ಕೆಡವಲು ಸಾಧ್ಯವಾಯಿತು.

ಕಾಶ್ಮೀರವನ್ನು ಭಾರತದಿಂದ ವಶಪಡಿಸಿಕೊಳ್ಳಲು 1000 ವರ್ಷಗಳ ಯುದ್ಧವನ್ನು ನಡೆಸಲು ಅವರ ತಾಯಿ ಬೆನಜೀರ್ ಬಯಸಿದ್ದರು. ಅವರ ಅಜ್ಜ ಜುಲ್ಫಿಕರ್ ಅಲಿ ಪಾಕಿಸ್ತಾನಕ್ಕೆ ಯಾವುದೇ ಬೆಲೆಯಲ್ಲಿ ಇಸ್ಲಾಮಿಕ್ ಅಣುಬಾಂಬ್ ಬೇಕು ಎಂದು ಬಯಸಿದ್ದರು. ಜರ್ದಾರಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ವಿರುದ್ಧ ವೈಯಕ್ತಿಕ ದಾಳಿಗಳನ್ನು ಮಾಡಿದ್ದರು.

ಮೇ 22-24 ರಂದು ಕೇಂದ್ರಾಡಳಿತ ಪ್ರದೇಶವಾದ ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಿ-20 ಸಭೆಯ ಸಂದರ್ಭದಲ್ಲಿ ಪಾಕಿಸ್ತಾನ ಹೇಳುವಂತೆ ಇದಕ್ಕೂ ಶ್ರೀನಗರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಇಸ್ಲಾಮಾಬಾದ್ ಆಕ್ರಮಿತ ಕಾಶ್ಮೀರವನ್ನು ಯಾವಾಗ ತೆರವು ಮಾಡುತ್ತದೆ ಎಂಬುದು ಪಾಕಿಸ್ತಾನದೊಂದಿಗೆ ಚರ್ಚಿಸಬೇಕಾದ ಏಕೈಕ ವಿಷಯವಾಗಿದೆ. ಜೈಶಂಕರ್ ಅವರ ಬಲವಾದ ಪ್ರತಿವಾದವು ಭಾರತ ಮತ್ತು ಪಾಕಿಸ್ತಾನಿ ಮಾಧ್ಯಮಗಳಿಗೆ ಜರ್ದಾರಿ ನೀಡಿದ ಹೇಳಿಕೆಗಳಲ್ಲಿ ಹುರುಳಿಲ್ಲ ಎಂಬುದವನ್ನು ಸಾಬೀತುಪಡಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Thu, 11 May 23

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’