AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​-19 ಸೋಂಕಿತ ಪತ್ನಿಯನ್ನು ದೂರ ಮಾಡಿದ ಪತಿ; ಮತ್ತೆ ಒಂದಾಗಲು 10 ಲಕ್ಷ ರೂ.ಕೇಳುತ್ತಿದ್ದಾನೆಂದು ಠಾಣೆ ಮೆಟ್ಟಿಲೇರಿದ ನರ್ಸ್​

ನನಗೆ ನರ್ಸ್​ ವೃತ್ತಿ ಬಿಡಲು ಇಷ್ಟವಿರಲಿಲ್ಲ. ಮಾರ್ಚ್​ನಲ್ಲಿ ನಗರದಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ನಾನು ನಿರಂತರವಾಗಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದೆ. ಹಾಗಾಗಿ ಸಹಜವಾಗಿಯೇ ನನಗೆ ಸೋಂಕು ತಗುಲಿತ್ತು ಎಂದು ನರ್ಸ್​ ತಿಳಿಸಿದ್ದಾರೆ.

ಕೊವಿಡ್​-19 ಸೋಂಕಿತ ಪತ್ನಿಯನ್ನು ದೂರ ಮಾಡಿದ ಪತಿ; ಮತ್ತೆ ಒಂದಾಗಲು 10 ಲಕ್ಷ ರೂ.ಕೇಳುತ್ತಿದ್ದಾನೆಂದು ಠಾಣೆ ಮೆಟ್ಟಿಲೇರಿದ ನರ್ಸ್​
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 22, 2021 | 6:17 PM

Share

ಅಹ್ಮದಾಬಾದ್​: ಕೊರೊನಾ ಕಾಲಿಟ್ಟ ಅದರ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ವೈದ್ಯರು, ನರ್ಸ್​ಗಳು, ಪೊಲೀಸರು, ಪೌರ ಕಾರ್ಮಿಕರು. ಇವರನ್ನೆಲ್ಲ ಕೊರೊನಾ ವಾರಿಯರ್ಸ್​ ಎಂದೇ ಕರೆಯಲಾಗಿದೆ. ಅಲ್ಲದೆ, ಅವರನ್ನು ಇಡೀ ದೇಶವೇ ಮನಸ್ಫೂರ್ತಿಯಾಗಿ ಹೊಗಳುತ್ತಿದೆ. ಡೆಡ್ಲಿ ಸೋಂಕಿನ ವಿರುದ್ಧ ಹೋರಾಡಿದ ಅವರ ದಿಟ್ಟತನಕ್ಕೆ ಬಹುತೇಕ ಎಲ್ಲರೂ ತಲೆಬಾಗಿದ್ದಾರೆ. ಆದರೆ ಇಲ್ಲೊಬ್ಬ ನರ್ಸ್​​ ಕೊರೊನಾ ವಿರುದ್ಧ ಹೋರಾಡಿ, ಕೊನೆಗೆ ತಾನೇ ಸೋಂಕಿಗೆ ಒಳಗಾಗಿ, ಇದೀಗ ಪತಿಯಿಂದಲೂ ಹಿಂಸೆ ಅನುಭವಿಸುತ್ತಿದ್ದಾರೆ.

ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ಇಸಾನ್​ಪುರದ ನರ್ಸ್​ (27) ಪತಿಯ ವಿರುದ್ಧ ಖೋಖ್ರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದ ಈ ನರ್ಸ್​​ಗೆ 2020ರ ಏಪ್ರಿಲ್​​ನಲ್ಲಿ ಕೊವಿಡ್​-19 ಸೋಂಕು ತಗುಲಿತ್ತು. ಆ ವೇಳೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದ್ದ ಪತಿ ಕೈಬಿಟ್ಟಿದ್ದ. ಸೋಂಕು ತಗುಲುತ್ತಿದ್ದಂತೆ ಅವಳನ್ನು ಅನಾಥಳನ್ನಾಗಿ ಮಾಡಿದ್ದ. ಇನ್ನು ನರ್ಸ್ ಗುಣಮುಖರಾದ ಮೇಲೆ ಕೂಡ ಜತೆಗಿರಬೇಕು ಎಂದರೆ 10 ಲಕ್ಷ ರೂ.ಕೊಡಬೇಕು ಎಂದು ಹೇಳುತ್ತಿದ್ದಾನೆ.

ಈ ಮಹಿಳೆ ಮಣಿನಗರದ ಎಲ್​ಜಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. 2020ರ ಫೆಬ್ರವರಿ 4ರಂದು ವಿವಾಹ ಆಗಿತ್ತು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಪತಿ ಹಾಗೂ ಆತನ ಕುಟುಂಬದಿಂದ ದೌರ್ಜನ್ಯ ಶುರುವಾಗಿತ್ತು. ನರ್ಸ್​ ಕೆಲಸ ಬಿಟ್ಟುಬಿಡು ಎಂದು ಸದಾ ಕಿರುಕುಳ ನೀಡುತ್ತಿದ್ದರು. ಕೊರೊನಾ ಸೋಂಕು ಎಲ್ಲೆಡೆ ಹಬ್ಬುತ್ತಿದೆ. ನೀನು ಆಸ್ಪತ್ರೆಗೆ ಹೋಗಿ ಅದನ್ನು ನಮ್ಮ ಮನೆಗೆ ತರುತ್ತೀಯಾ ಎಂದು ಕೂಗಾಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ನನಗೆ ನರ್ಸ್​ ವೃತ್ತಿ ಬಿಡಲು ಇಷ್ಟವಿರಲಿಲ್ಲ. ಮಾರ್ಚ್​ನಲ್ಲಿ ನಗರದಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ನಾನು ನಿರಂತರವಾಗಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದೆ. ಹಾಗಾಗಿ ಸಹಜವಾಗಿಯೇ ನನಗೆ ಸೋಂಕು ತಗುಲಿತ್ತು. ಆಗ ನನ್ನ ಪತಿ ನನ್ನನ್ನು ಸೇರಿಸಲಿಲ್ಲ. ತವರುಮನೆಯಿಂದ 10 ಲಕ್ಷ ತಂದರೆ ಮಾತ್ರ ನಮ್ಮ ಮನೆಗೆ ಸೇರಿಸುತ್ತೇನೆ. ನನ್ನೊಂದಿಗೆ ಇರಲು ಅವಕಾಶ ಕೊಡುತ್ತೇನೆ ಎಂದು ಹೇಳಿದ ಎಂದು ಆರೋಪಿಸಿದ್ದಾರೆ.

ಈ ಜಗಳದಲ್ಲಿ ನನ್ನ ಕುಟುಂಬದವರೂ ಹಸ್ತಕ್ಷೇಪ ಮಾಡಿದರು. ಇಬ್ಬರಿಗೂ ರಾಜಿ ಮಾಡಲು ಪ್ರಯತ್ನಿಸಿದರು. ಆದರೆ ನನ್ನ ಪತಿಯ ಸಹೋದರಿ ಮತ್ತೊಮ್ಮೆ ಕೊವಿಡ್​-19 ಟೆಸ್ಟ್​ಗೆ ಒಳಗಾಗಿ, ಹೊಸ ವರದಿ ತರುವಂತೆ ಹೇಳಿದಳು. ನಾನು ಮತ್ತೆ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪಲಿಲ್ಲ. ಈ ಕಾರಣಕ್ಕೆ ನನ್ನ ಪತಿ ಹಾಗೂ ಕುಟುಂಬದವರು ನನ್ನ ಬಳಿ ವಿಚ್ಛೇದನ ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದೂ ನರ್ಸ್​ ಹೇಳಿದ್ದಾರೆ. ಕಳೆದ 6 ತಿಂಗಳಿಂದಲೂ ಪತಿ ನನ್ನ ಬಳಿ ಬಂದಿಲ್ಲ ಎಂದು ಹೇಳಿರುವ ಆಕೆ, ಪತಿ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ, ದೌರ್ಜನ್ಯದ ದೂರನ್ನೂ ನೀಡಿದ್ದಾರೆ.

ಇದನ್ನೂ ಓದಿ: ಮುಂದಿನ ಸೀಸನ್​ಗೆ ಬಿಗ್​ ಬಾಸ್​ ನಿರೂಪಕ ಚೇಂಜ್​; ಹೊಸ ನಟನ ಹುಡುಕಾಟದಲ್ಲಿ ವಾಹಿನಿ

ಸ್ಟಾರ್​ ನಟಿಯರಿಗೆ ಕಿಸ್​ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್​ ಹಷ್ಮಿ! ತಪ್ಪು ಒಪ್ಪಿಕೊಂಡ ನಟ

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!