ಹೈದರಾಬಾದ್ ಆಸ್ಟನ್ ಮಾರ್ಟಿನ್ ಆಕ್ಸಿಡೆಂಟ್: ಎಂಪಿ ಮಗನ ಡ್ರಗ್ಸ್, ಆಲ್ಕೋಹಾಲ್ ಟೆಸ್ಟ್ ರಿಪೋರ್ಟ್ ನೆಗೆಟಿವ್

ಹೈದರಾಬಾದ್‌ನ ಆಸ್ಟನ್ ಮಾರ್ಟಿನ್ ಅಪಘಾತ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಸಂಸದರ ಪುತ್ರ ಸಂಜುಷ್‌ನ ಆರಂಭಿಕ ಪರೀಕ್ಷೆಗಳು ನೆಗೆಟಿವ್ ಬಂದಿವೆ. ವೇಗದ ಚಾಲನೆಯಿಂದ ಭಾರತಿ ಮುಖಿ ಎಂಬುವರು ಮೃತಪಟ್ಟಿದ್ದಾರೆ. ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ತನಿಖೆ ಮುಂದುವರೆದಿದೆ. ಮೃತರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರಕ್ಕೆ ಆಗ್ರಹವಿದೆ.

ಹೈದರಾಬಾದ್ ಆಸ್ಟನ್ ಮಾರ್ಟಿನ್ ಆಕ್ಸಿಡೆಂಟ್: ಎಂಪಿ ಮಗನ ಡ್ರಗ್ಸ್, ಆಲ್ಕೋಹಾಲ್ ಟೆಸ್ಟ್ ರಿಪೋರ್ಟ್ ನೆಗೆಟಿವ್
ಹೈದರಾಬಾದ್ ಆಸ್ಟನ್ ಮಾರ್ಟಿನ್ ಅಪಘಾತ
Image Credit source: News9

Updated on: Aug 22, 2026 | 11:57 AM

ದೆಹಲಿ, ಆ.22: ಹೈದರಾಬಾದ್‌ನ ಇನ್‌ಆರ್ಬಿಟ್ ಮಾಲ್ ಬಳಿ ಸಂಭವಿಸಿದ ಭೀಕರ ಆಸ್ಟನ್ ಮಾರ್ಟಿನ್ (Aston Martin) ಐಷಾರಾಮಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಅವರ 21 ವರ್ಷದ ಮಗ ಲಿಂಗಮನೇನಿ ಸಂಜುಷ್‌ನ ಆರಂಭಿಕ ಮದ್ಯ ಮತ್ತು ಡ್ರಗ್ಸ್ ತಪಾಸಣೆ ವರದಿಗಳು ನೆಗೆಟಿವ್ (Negative) ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 16 ರಂದು ಸಂಜುಷ್ ಚಲಾಯಿಸುತ್ತಿದ್ದ ಅತೀ ವೇಗದ ಐಷಾರಾಮಿ ಕಾರು 26 ವರ್ಷದ ಸೇಲ್ಸ್ ಎಕ್ಸಿಕ್ಯೂಟಿವ್ ಭಾರತಿ ಮುಖಿ ಎಂಬುವರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಭಾರತಿಯವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.

ಸಂಜುಷ್ ಕಾರನ್ನು ಅತ್ಯಂತ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಮೋಟಾರು ವಾಹನ ಪರೀಕ್ಷಕರ (MVI) ತನಿಖಾ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರಾಥಮಿಕ ಮದ್ಯ ತಪಾಸಣೆಯಲ್ಲಿ ನೆಗೆಟಿವ್ ಬಂದಿದ್ದರೂ, ಪೂರ್ಣ ಪ್ರಮಾಣದ ತನಿಖೆಗಾಗಿ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.

ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 106(1) ಅಡಿ ಪ್ರಕರಣ ದಾಖಲಿಸಲಾಗಿದೆ. ಸಂಜುಷ್‌ಗೆ BNSS ಸೆಕ್ಷನ್ 35ರ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಯಾವುದೇ ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ, ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಂತೆಯೇ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಗೋಲ್ಡ್ ಲೋನ್ ವಲಯಕ್ಕೆ ಬಿರ್ಲಾ ಗ್ರೂಪ್ ಎಂಟ್ರಿ: 3 ವರ್ಷಗಳಲ್ಲಿ 1,000 ಹೊಸ ಬ್ರಾಂಚ್‌ ತೆರೆಯಲು ಯೋಜನೆ

ಒಡಿಶಾ ಮೂಲದ ಮೃತ ಯುವತಿ ಭಾರತಿ ಮುಖಿ ತಮ್ಮ ಕುಟುಂಬದ ಏಕೈಕ ದುಡಿಮೆಯ ಆಸರೆಯಾಗಿದ್ದರು. ಪೋಸ್ಟ್‌ಮಾರ್ಟಮ್ ನಂತರ ಅವರ ಮೃತದೇಹವನ್ನು ಸಹೋದರನಿಗೆ ಹಸ್ತಾಂತರಿಸಲಾಗಿದ್ದು, ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ. ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು, ಕಾರು ಸಂಜುಷ್ ಹೆಸರಿನಲ್ಲಿ ನೋಂದಣಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಅಪಘಾತದ ನಂತರ ತಾವು ಓಡಿಹೋಗಿರಲಿಲ್ಲ, ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಿ ನಂತರ ಪೊಲೀಸರಿಗೆ ಸಹಕರಿಸಿದ್ದಾಗಿ ಸಂಜುಷ್ ಹೇಳಿಕೊಂಡಿದ್ದಾರೆ.

ದೇಶದನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us