AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಬಾಲಕನಿಗೆ ಕಾಡಿತ್ತು ಮಸ್ಕುಲಾರ್​ ಅಟ್ರೊಪಿ; ದಾನವೀರ​ ವಿರಾಟ್​ ಕೊಹ್ಲಿ ದಂಪತಿ ನೀಡಿದರು ಆರ್ಥಿಕ ನೆರವು

Spinal Muscular Atrophy: ಈ ಝೊಲ್ಗೆನ್ಸಮಾ ಔಷಧ ಎಷ್ಟು ದುಬಾರಿ, ಅಷ್ಟು ದುಡ್ಡನ್ನು ಆತನ ಪೋಷಕರು ಹೇಗೆ ಸಂಗ್ರಹಿಸಿದರು ಎಂಬುದು ಆತಂಕದ ಮಧ್ಯೆ ಆಶ್ಚರ್ಯಕರ ಮತ್ತು ಆಶಾದಾಯಕ ಸಂಗತಿಯಾಗಿದೆ. ತಮ್ಮ ಮಗ ಅಯಾಂಶ್​ಗೆ ಝೊಲ್ಗೆನ್ಸಮಾ ಎಂಬ ದುಬಾರಿ ಔಷಧವನ್ನು ಕೊಡಿಸಲು ಆತನ ಅಪ್ಪ-ಅಮ್ಮ ಮೂರೂವರೆ ತಿಂಗಳಲ್ಲಿ 65 ಸಾವಿರ ದಾನಿಗಳ ಮೂಲಕ 16 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

ಆ ಬಾಲಕನಿಗೆ ಕಾಡಿತ್ತು ಮಸ್ಕುಲಾರ್​ ಅಟ್ರೊಪಿ; ದಾನವೀರ​ ವಿರಾಟ್​ ಕೊಹ್ಲಿ ದಂಪತಿ ನೀಡಿದರು ಆರ್ಥಿಕ ನೆರವು
ಆ ಬಾಲಕನಿಗೆ ಕಾಡಿತ್ತು ಮಸ್ಕುಲಾರ್​ ಅಟ್ರೊಪಿ: ಬೇಕಿತ್ತು ಹತ್ತಾರು ಕೋಟಿ ರೂಪಾಯಿ, ದಾನವೀರ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ದಂಪತಿ ನೀಡಿದರು ಆರ್ಥಿಕ ನೆರವು
Follow us
ಸಾಧು ಶ್ರೀನಾಥ್​
|

Updated on: Jun 12, 2021 | 4:30 PM

ಬೆನ್ನು ಮೂಳೆಯ ಸ್ನಾಯು ಕ್ಷೀಣಿಸುವಿಕೆ ಅಂದ್ರೆ (ಸ್ಪೈನಲ್​ ಮಸ್ಕುಲಾರ್​ ಅಟ್ರೊಪಿ – Spinal Muscular Atrophy -SMA) ಎಂಬುದು ಮಾರಣಾಂತಿಕ, ವಿರಳ ಕಾಯಿಲೆ. ಲಕ್ಷಾಂತರ ಮಂದಿಯಲ್ಲಿ ಒಬ್ಬಿಬ್ಬರಿಗೆ ಬರುವ ಕಾಯಿಲೆಯಿದು. ಈ ಕಾಯಿಲೆಯಿಂದ ಸುಪ್ತವಾಗಿ ನರಳುವವರು ನಮ್ಮ ಮಧ್ಯೆಯೂ ಇರಬಹುದು. ಅವಳಿ ನಗರವಾದ ಸಿಕಂದರಾಬಾದ್​ನಲ್ಲಿ ಈ ಕಾಯಿಲೆಯಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕನಿಗೆ ಮೊನ್ನೆ ಇಂತಹ ಕಾಯಿಲೆಗೆ ಚಿಕಿತ್ಸೆ ನೀಡಲಾಗಿದೆ. ವಿಕ್ರಮಪುರಿಯಲ್ಲಿರುವ ರೈನ್​​ಬೋ ಚಿಲ್ಡ್ರನ್ಸ್​ ಆಸ್ಪತ್ರೆಯಲ್ಲಿ ಅಯಾಂಶ್ ಎಂಬ ಆ ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ವಿಶೇಷ ಏನು ಅಂದ್ರೆ ಮಾಂಸಖಂಡ ಕ್ಷೀಣಿಸುವಿಕೆ ಕಾಯಿಲೆಗೆ ಚಿಕಿತ್ಸೆಗೆಂದು ಬಾಲಕ ಅಯಾಂಶ್​ಗೆ ಝೊಲ್ಗೆನ್ಸಮಾ (Zolgensma) ಎಂಬ ದುಬಾರಿ ಇಂಜೆಕ್ಷನ್ ಔಷಧವನ್ನು ನೀಡಲಾಗಿದೆ.

ಈ ಝೊಲ್ಗೆನ್ಸಮಾ ಔಷಧ ಎಷ್ಟು ದುಬಾರಿ ಮತ್ತು ಅಷ್ಟು ದುಡ್ಡನ್ನು ಆತನ ಪೋಷಕರು ಹೇಗೆ ಸಂಗ್ರಹಿಸಿದರು ಎಂಬುದು ಆತಂಕದ ಮಧ್ಯೆ ಆಶ್ಚರ್ಯಕರ ಮತ್ತು ಆಶಾದಾಯಕ ಸಂಗತಿಯಾಗಿದೆ. ಅಂದಹಾಗೆ, ತಮ್ಮ ಮಗ ಅಯಾಂಶ್​ಗೆ ಝೊಲ್ಗೆನ್ಸಮಾ ಎಂಬ ದುಬಾರಿ ಔಷಧವನ್ನು ಕೊಡಿಸಲು ಆತನ ಅಪ್ಪ-ಅಮ್ಮ ಮೂರೂವರೆ ತಿಂಗಳಲ್ಲಿ 65 ಸಾವಿರ ದಾನಿಗಳ ಮೂಲಕ 16 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

ಅಮೆರಿಕಾದ ನೊವಾರ್ಟಿಸ್ ಕಂಪನಿಯಿಂದ ಆಮದು ಮಾಡಿಕೊಳ್ಳಲಾದ ಈ ಔಷಧ ಜೂನ್ 8ರಂದು ಹೈದರಾಬಾದಿಗೆ ಬಂದಿಳಿದಿತ್ತು. ಸಮಾಧಾನದ ಸಂಗತಿಯೆಂದ್ರೆ ಕೇಂದ್ರ ಸರ್ಕಾರ ಈ ಅಪರೂಪದ ಔಷಧದ ಮೇಲಿನ ಆಮದು ಸುಂಕವನ್ನು (import duty) ಸಂಪೂರ್ಣವಾಗಿ ಮನ್ನಾ ಮಾಡಿತ್ತು. ಜೊತೆಗೆ ಜಿಎಸ್​ಟಿಯನ್ನು (GST) ಸಹ ತೆಗೆದುಹಾಕಿತ್ತು. ಇವೆರಡೂ ಬಾಬತ್ತಿನಲ್ಲಿ 6 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿ ಮಕ್ಕಳ ಚಿಕಿತ್ಸೆಗಾಗಿ ತನ್ನ ಬದ್ಧತೆಯನ್ನು ಋಜುವಾತು ಪಡಿಸಿತು.

Hyderabad boy Ayaansh gets world most expensive medicine Zolgensma for rare disease Spinal Muscular Atrophy 2

Spinal Muscular Atrophy ಎಂಬ ವಂಶವಾಹಿ ರೋಗಕ್ಕೆ ಝೊಲ್ಗೆನ್ಸಮಾ (Zolgensma) ಎಂಬ ದುಬಾರಿ ಇಂಜೆಕ್ಷನ್ ಔಷಧ

ಬಾಲಕ ಅಯಾಂಶ್​ನ ಅಪ್ಪ ಚಂಡೀಗಢ ಮೂಲದವರು. ಇಲ್ಲಿ ಹೈದರಾಬಾದಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಬಾಲಕ ಅಯಾಂಶ್​ನ ಅಪ್ಪ-ಅಮ್ಮ ಫೆಬ್ರವರಿ 4 ರಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗನ ದುಃಸ್ಥಿತಿಯನ್ನು ವಿವರಿಸಿ, ಒಂದು ಪೋಸ್ಟ್​ ಹಾಕಿದ್ದರು. ಮಗನ ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿಯ ತುರ್ತು ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಅವರ ಸಮಾಧಾನಕ್ಕೆ, ಆಶ್ಚರ್ಯಕ್ಕೆ ಮೇ 23ರ ವೇಳೆಗೆ 16 ಕೋಟಿ ರೂಪಾಯಿ ನೆರವು ಸಂಗ್ರಹವಾಗಿತ್ತು. ಬಡವ ಬಲ್ಲಿದ ಎಲ್ಲ ಈ ಮಗುವಿನ ಸಹಾಯಕ್ಕೆ ಬಂದಿದ್ದರು.

ಸೆಲೆಬ್ರಟಿಗಳಂತೂ ಬಾಲಕ ಅಯಾಂಶ್​ನನ್ನು ಉಳಿಸಿಕೊಳ್ಳಲು ನಾಮುಂದು ತಾಮುಂದು ಎಂದು ಸಹಾಯಕ್ಕೆ ಬಂದಿದ್ದರು. ಭಾರತೀಯ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ (Virat Kohli) ಮತ್ತು ಅವರ ತಾರಾ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರು ಮೊದಲಿಗರಾಗಿ ಆರ್ಥಿಕ ನೆರವು (Donation) ನೀಡಿದರು. ಅದಾದ ಮೇಲೆ ಇಮ್ರಾನ್​ ಹಷ್ಮಿ, ದಿಯಾ ಮಿರ್ಜಾ, ಜಾವೇದ್​ ಜಾಫ್ರಿ, ಅರ್ಜುನ್​ ಕಪೂರ್, ಸಾರಾ ಅಲಿ ಖಾನ್​ ಮುಂತಾದವರೂ ಸಹ ಸಹಾಯದ ಹಸ್ತ ಚಾಚಿದ್ದರು.

Virat Kohli Anushka Sharma

ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಅಂತಹ ಸೆಲೆಬ್ರಟಿಗಳು ಬಾಲಕನ ಚಿಕಿತ್ಸೆಗೆ ನಾಮುಂದು ತಾಮುಂದು ಎಂದು ನೆರವಾದರು..

ವಂಶವಾಹಿ ಚಿಕಿತ್ಸೆ ಮೂಲಕ ನರದೊಳಕ್ಕೆ ಒಂದೇ ಒಂದು ಡೋಸ್​ ಇಂಜೆಕ್ಷನ್​ ನೀಡುವುದರೊಂದಿಗೆ (single-dose intravenous injection) ವೈದ್ಯ ಗುಪ್ತಾ ಅವರು ಮಗುವಿಗೆ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅಂದಹಾಗೆ ಸಂಶೋಧಕರು ಈ ಕಾಯಿಲೆ ವಂಶವಾಹಿ ಅನ್ನುತ್ತಾರಾದರೂ ಅದು ಹೊಸ ಪೀಳಿಗೆಯಲ್ಲೂ ಕಾಣಿಸಿಕೊಳ್ಳಬಹುದು.

ಎಸ್​ಎಂಎನ್ (SMN gene) ಎಂಬ ವಂಶವಾಹಿಯ ಕೊರತೆಯಿಂದ ಈ SMA ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸಲು adeno-associated virus (AAV9) ನಿಂದ ಪಡೆದ ಔಷಧವನ್ನು (ಅದುವೇ ಝೊಲ್ಗೆನ್ಸಮಾ -Zolgensma ಎಂಬ ಇಂಜೆಕ್ಷನ್) ರೋಗಿಗೆ ನೀಡಲಾಗುತ್ತದೆ. ಅದು ನಿರ್ದಿಷ್ಟ ಭಾಗದಲ್ಲಿ ಎಸ್​ಎಂಎನ್ ಕೊರತೆ ಅನುಭವಿಸುತ್ತಿರುವ ಎಲ್ಲಾ ಜೀವ ಕೋಶಗಳಿಗೂ ತಲುಪುತ್ತದೆ. ತನ್ಮೂಲಕ ಆ ಭಾಗ ಸರಿಹೊಂದುತ್ತದೆ.

ಎಂಟು ವಯಾಲ್​ಗಲ್ಲಿರುವ ಸುಮಾರು 60 ಮಿ. ಲೀ. ನಷ್ಟು ಝೊಲ್ಗೆನ್ಸಮಾ ಇಂಜೆಕ್ಷನ್ ಅನ್ನು ಬಾಲಕ ಅಯಾಂಶ್​ನಿಗೆ ನೀಡಲಾಗಿತ್ತು. ಎರಡೂ ತೋಳುಗಳ ಮೂಲಕ ಸಮನಾಗಿ ಇಂಜೆಕ್ಷನ್ ಕೊಡಲಾಗಿತ್ತು. ಸದ್ಯಕ್ಕೆ ಸಮಾಜ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಇನ್ನು ಬಾಲಕನನ್ನು ತಕ್ಷಣಕ್ಕೆ ಇನ್ನೆರಡು ತಿಂಗಳ ಕಾಲ ಜೋಪಾನ ಮಾಡುವುದು ಆತನ ಮಾತಾಪಿತೃವಿನ ಜವಾಬ್ದಾರಿಯಾಗಿದೆ. ಬಾಲಕ ಅಯಾಂಶ್​ನಿಗೆ ಕ್ಷೇಮವನ್ನು ಕೋರುತ್ತಾ… ಇತ್ತೀಚೆಗೆ ಟಿವಿ9 ಸಹ ಇಂತಹುದೇ ಅಭಿಯಾನದಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ ಸಂಗತಿಯಾಗಿದೆ. ಕೆಳಗಿನ ಲಿಂಕ್ ನೋಡಿ…

ಟಿವಿ9 ವರದಿ ನೋಡಿ ಮಗುವಿನ ಚಿಕಿತ್ಸೆಗೆ ಮುಂದಾದ ಯುವಕರು: ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದನಿಗೆ ನೆರವು

(Hyderabad boy Ayaansh gets world most expensive medicine Zolgensma for rare disease Spinal Muscular Atrophy as parents mobilise rupees 16 crore)

ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್
ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್
ನೆಲಮಂಗಲ: ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್
ನೆಲಮಂಗಲ: ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್