ಚುನಾವಣೆ ಗೆಲ್ಲಲು ಬಳಸುವ ಶೋಪೀಸ್ ನಾನಲ್ಲ: ನವಜೋತ್ ಸಿಂಗ್ ಸಿಧು

| Updated By: ರಶ್ಮಿ ಕಲ್ಲಕಟ್ಟ

Updated on: Jun 20, 2021 | 7:23 PM

Navjot Singh Sidhu: 2017 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಕಾಂಗ್ರೆಸ್​ಗೆ ಸೇರ್ಪಡೆಯಾದ ವಿಧಾನವನ್ನು ಉಲ್ಲೇಖಿಸಿದ ಸಿಧು, ಪ್ರಶಾಂತ್ ಕಿಶೋರ್ ಅವರು ನನ್ನನ್ನು 50 ಕ್ಕೂ ಹೆಚ್ಚು ಬಾರಿ ಭೇಟಿಯಾಗಿ ಮನವೊಲಿಸಿ ಪಕ್ಷವು ಚುನಾವಣೆಯಲ್ಲಿ ಗೆಲ್ಲುವಂತೆ ಸಹಾಯ ಮಾಡಬೇಕು ಎಂದಿದ್ದರು.

ಚುನಾವಣೆ ಗೆಲ್ಲಲು ಬಳಸುವ ಶೋಪೀಸ್ ನಾನಲ್ಲ: ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us on

ಅಮೃತ್​ಸರ: ಕಾಂಗ್ರೆೆಸ್​ನ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರು ಕಾಂಗ್ರೆಸ್​ನಲ್ಲಿ ಯಾವುದೇ ಹುದ್ದೆಯ ಹಿಂದಿ ಬಿದ್ದಿಲ್ಲ ಹೇಳಿದ್ದಾರೆ, ಆದರೆ ಚುನಾವಣೆಗಳಲ್ಲಿ ಗೆಲ್ಲಲು ಬಳಸಿ ನಂತರ ಪಂಜಾಬ್​ನ ಹಿತಾಸಕ್ತಿಗಳನ್ನು ಅತಿಕ್ರಮಿಸಬಹುದಾದ ಪಟ್ಟಭದ್ರ ಹಿತಾಸಕ್ತಿಗಳ ಶೋಪೀಸ್ ಅಲ್ಲ ಎಂದು ಸಿಧು ಒತ್ತಿ ಹೇಳಿದ್ದಾರೆ. ತಮ್ಮ ಪಟಿಯಾಲ ನಿವಾಸದಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಅವರ ಬಗ್ಗೆ ಹಲವಾರು ವಿಷಯಗಳನ್ನು ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಸಿಧು ರಾಜ್ಯದಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಲು ಸಿದ್ಧರಿದ್ದಾರೆ ಎಂದು ಹೇಳಿದರು.

” ನನ್ನನ್ನು ಪ್ರಚಾರಕ್ಕೆ ಕರೆದೊಯ್ದು , ಚುನಾವಣೆಯಲ್ಲಿ ಗೆದ್ದನಂತರ ನನ್ನನ್ನು ಅಲ್ಮಿರಾದಲ್ಲಿ ಮತ್ತೆ ತಂದಿಡುವ ಶೋಪೀಸ್ ಅಲ್ಲ ನಾನು. ಆದ್ದರಿಂದ ನೀವು ಗಣಿಗಾರಿಕೆ ಹೇಗೆ ಮಾಡುತ್ತೀರಿ, ನೀವು ಇದನ್ನು ಹೇಗೆ ಮಾಡುತ್ತೀರಿ, ನೀವು ಅದನ್ನು ಹೇಗೆ ಮಾಡುತ್ತೀರಿ ಎಂದು ನಾನು ನೋಡಬಹುದು ಸ್ವಾರ್ಥಿ ಪಟ್ಟಭದ್ರ ಹಿತಾಸಕ್ತಿಗಳು ರಾಜ್ಯದ ಹಿತಾಸಕ್ತಿಗಳನ್ನು ಅತಿಕ್ರಮಿಸುತ್ತವೆ. ಇದು ನನಗೆ ಅಸಹನೀಯವಾಗಿದೆ, ”ಎಂದು ಸಿಧು ಹೇಳಿದರು.

ಮೊಟ್ಟಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯವನ್ನು ನಡೆಸುತ್ತಿರುವ “ವ್ಯವಸ್ಥೆ” ಯ ವಿರುದ್ಧ ತಮ್ಮ ಹೋರಾಟವನ್ನು ಸಿಧು ಪ್ರಾರಂಭಿಸಿದ್ದಾರ. “ಈ ವ್ಯವಸ್ಥೆಯನ್ನು ಎರಡು ಪ್ರಬಲ ಕುಟುಂಬಗಳು ನಿಯಂತ್ರಿಸುತ್ತವೆ, ಕುಶಲತೆಯಿಂದ ಮತ್ತು ವಿನ್ಯಾಸಗೊಳಿಸಿವೆ. ಅವರೇ ಈ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಅವರು ವಿಧಾನಸಭೆಯನ್ನು ತುಚ್ಚೀಕರಿಸಿದ್ದಾರೆ. ಶಾಸಕಾಂಗವು ಯಾವಾಗಲೂ ಜನರಿಗೆ ಜವಾಬ್ದಾರನಾಗಿರುತ್ತದೆ. ಜನರು ಮಂತ್ರಿಗಳು ಮತ್ತು ಶಾಸಕರನ್ನು ಆಯ್ಕೆ ಮಾಡಿದರು, ಅವರು ಅವರಿಗೆ ಮತ ಹಾಕಿದರು. ಅವರು ಅಧಿಕಾರಿಗೆ ಮತ ಹಾಕಲಿಲ್ಲ. ಆದರೆ ನೀವು ವ್ಯವಸ್ಥೆಯನ್ನು ಅಧಿಕಾರಿಯೊಬ್ಬರಿಗೆ ಜವಾಬ್ದಾರರನ್ನಾಗಿ ಮಾಡಿದಾಗ ನೀವು ಶಾಸಕಾಂಗವನ್ನು ಕಡಿಮೆ ಮಾಡಿದ್ದೀರಿ. ಏಕೆ? ನಿಯಂತ್ರಿಸುವುದಕ್ಕಾಗಿ. ಜನರ ಅಧಿಕಾರವನ್ನು ಹಿಂತಿರುಗಿಸಲಾಗುವುದಿಲ್ಲ ಮತ್ತು ಕೆಲವರಿಗೆ ಮಾತ್ರ ಸೀಮಿತವಾಗಿದೆ, ”ಎಂದು ಅವರು ಹೇಳಿದರು.

ಸಂದರ್ಶನದುದ್ದಕ್ಕೂ ‘ವ್ಯವಸ್ಥೆ’ ಯನ್ನು ಉಲ್ಲೇಖಿಸುತ್ತಾ, ಕ್ಯಾಪ್ಟನ್ ಅಮರಿಂದರ್ ಅವರೊಂದಿಗಿನ ಸಭೆಗಳ ಬಗ್ಗೆ ಮಾತನಾಡುವಾಗಲೂ, ದೆಹಲಿಯಲ್ಲಿ ಹೈಕಮಾಂಡ್ ಮತ್ತು ಹುದ್ದೆಗಳನ್ನು ನೀಡಲಾಗುತ್ತಿರುವ ಸಭೆಗಳ ಬಗ್ಗೆ ಕೆಂಪು ಹೇರಿಂಗ್ (ಗುಂಪು ಗುಂಪಾಗಿತೇಲುವ ಮೀನು) ತೇಲುತ್ತಿದೆ ಎಂದು ಹೇಳಿದರು. ಅದೇಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಜೊತೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದರು.

“ಹಲವಾರು ಆಫರ್​ಗಳು  ಬಂದಿವೆ ಆದರೆ ನಾನು ಎಲ್ಲವನ್ನೂ ತಿರಸ್ಕರಿಸಿದ್ದೇನೆ. ಏಕೆಂದರೆ ಅದು ಮುಖ್ಯವಾದುದಾಗಿದೆ? ಈ ಹುದ್ದೆ ನೀಡಿ, ಅಧಿಕಾರ ನೀಡಲಾಗುವುದು ಎಂದು ಹೇಳುತ್ತಾರೆ ಇದು ಹುದ್ದೆಗಳ ಬಗ್ಗೆಯೇ ? ಇದು ಒಂದು ಕಾರ್ಯಸೂಚಿಯ ಬಗ್ಗೆ, ಪಂಜಾಬ್ ತನ್ನ ವೈಭವಕ್ಕೆ ಹೇಗೆ ಪುನರುತ್ಥಾನಗೊಳ್ಳುತ್ತದೆ ಎಂಬುದರ ಕುರಿತು ಒಂದು ಮಾರ್ಗಸೂಚಿಯ ಬಗ್ಗೆ. ನೀವು ಅದನ್ನು ಪೂರೈಸುತ್ತೀರಿ, ನಾನು ನಿಮ್ಮ ಹಿಂದೆ ನಡೆಯುತ್ತೇನೆ. ಹುದ್ದೆ ಇಲ್ಲದೆ ನಾನು ನಿಮಗಾಗಿ 24X7 ಕೆಲಸ ಮಾಡುತ್ತೇನೆ. ಆದರೆ ನೀವು ಇದನ್ನು ಪೂರೈಸದಿದ್ದರೆ ನಾನು ಅದನ್ನು ಮಾಡುತ್ತೇನೆ. ನಾನು ಅದನ್ನು ಜನರಿಗೆ, ಜನರ ಮೂಲಕ, ಜನರಿಂದ, ಜನರಿಗಾಗಿ ತೆಗೆದುಕೊಳ್ಳುತ್ತೇನೆ. ನಾನು ಆ ಅಧಿಕಾರವನ್ನು ಜನರಿಂದ ಪಡೆಯುತ್ತೇನೆ. ನಾನು ಹೋರಾಡುತ್ತೇನೆ. ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ. ನಾನು ನಿಲುವನ್ನು ತೆಗೆದುಕೊಳ್ಳುವ ಮೊದಲು 200 ಬಾರಿ ಯೋಚಿಸುತ್ತೇನೆ, ಆದರೆ ಒಮ್ಮೆ ನಾನು ನಿಲುವನ್ನು ತೆಗೆದುಕೊಂಡರೆ ನಾನು ಒಂದು ಇಂಚು ಹಿಮ್ಮುಖವಾಗುವುದಿಲ್ಲ ಅಥವಾ ಹಿಂತಿರುಗುವುದಿಲ್ಲ ”ಎಂದು ಸಿಧು ಹೇಳಿದರು.

ಈ ನಿಲುವನ್ನು ಕಾಂಗ್ರೆಸ್ಸಿನೊಳಗೆ ತೆಗೆದುಕೊಳ್ಳುತ್ತೀರಾ ಅಥವಾ ಅದರಿಂದ ಹೊರಗುಳಿಯುತ್ತೀರಾ ಎಂದು ಕೇಳಿದಾಗ, ಇದು ಚರ್ಚೆಯ ವಿಷಯವಲ್ಲ ಎಂದು ಸಿಧು ಹೇಳಿದರು.

“ಆಲಿಸಿ, ಇದು ಸಮಸ್ಯೆಯಲ್ಲ. ನನ್ನನ್ನು ಬಲ್ಲವರು, ನಾನು ಯಾವುದರ ಪರ ಎಂದು ತಿಳಿದಿರುವವರು. ನನ್ನ ಪಾತ್ರವನ್ನು ತಿಳಿದಿರುವವರಿಗೆ ಸತ್ಯ ತಿಳಿದಿದೆ. ಆಡುವ ಈ ಪುಟ್ಟ ಆಟಗಳು ಝಿಕ್ರ್ ಉಸ್ಸಿ ಕಾ ಹೋತಾ ಹೈ ಜಿಸ್ಕಿ ಫಿಕ್ರ್ ಹೋತಿ ಹೈ (ನಾವು ಕಾಳಜಿವಹಿಸುವವರನ್ನು ನಾವು ಉಲ್ಲೇಖಿಸುತ್ತೇವೆ). ನಾನು ಪ್ರತಿಕ್ರಿಯಿಸಿದ್ದೇನೆಯೇ? ಏಕೆಂದರೆ ಇದು ಕೇವಲ ಒಂದು ತಿರುವು ಎಂದು ನನಗೆ ತಿಳಿದಿದೆ. ಅವರು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗುತ್ತಿದ್ದಾರೆ. ನಿಜವಾದ ವಿಷಯವೆಂದರೆ ರಾಜ್ಯದ ಆದಾಯ, ಉದ್ಯೋಗಗಳು, ರೈತರು, ಪರಿಹಾರಗಳು, ಜನರಿಗೆ ಹೇಗೆ ಪ್ರಯೋಜನವಾಗುವುದು, ”ಎಂದು ಅವರು ಹೇಳಿದರು.

ಅವರನ್ನು ಪಂಜಾಬ್‌ನಿಂದ ಹೊರಗೆ ಕಳುಹಿಸಲು ಮತ್ತು ದೆಹಲಿಯಲ್ಲಿ ಕಾಂಗ್ರೆಸ್ಸಿನ ಮುಖವನ್ನಾಗಿ ಮಾಡಲು ಪ್ರಯತ್ನಿಸಲಾಗಿದೆ ಎಂದು ನವಜೋತ್ ಸಿಧು ಹೇಳಿದರು, ಆದರೆ ಅವರು ನಿರಾಕರಿಸಿದರು.

“ನಾನು ಅವರ ಮಾತನ್ನು ಕೇಳುತ್ತಿಲ್ಲ ಎಂದು‘ ವ್ಯವಸ್ಥೆ ’ನೋಡಿದಾಗ ನನ್ನನ್ನು ಪಕ್ಷದ ಮುಖವಾಗಿ ದೆಹಲಿಗೆ ಕಳುಹಿಸುವ ಪ್ರಯತ್ನ ಮಾಡಲಾಯಿತು. ನಾನು ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯ ಮತ್ತು ರಾಜ್ಯಸಭೆಯನ್ನು (ಬಿಜೆಪಿಯಲ್ಲಿದ್ದಾಗ) ತೊರೆದಿದ್ದೇನೆ ಆದರೆ ನಾನು ಅಮೃತಸರವನ್ನು ಬಿಡಲಿಲ್ಲ. ಈ ಜನರು ಇಲ್ಲಿಂದ ಪಂಜಾಬ್‌ನಲ್ಲಿ ಈ ನಡೆಗಳ ಬಗ್ಗೆ ಯೋಚಿಸುತ್ತಿದ್ದರು. ನಾನು ‘ಇಲ್ಲ’ ಎಂದು ಹೇಳಿದೆ. ನಂತರ ‘ಸಿಸ್ಟಮ್’ ನನ್ನನ್ನು ಚಹಾಕ್ಕಾಗಿ ಆಹ್ವಾನಿಸುತ್ತದೆ. ‘ ಚಹಾಕ್ಕಾಗಿ ಬನ್ನಿ, ಮಗ. ಇದನ್ನು ತೆಗೆದುಕೊಳ್ಳಿ, ಅದನ್ನು ತೆಗೆದುಕೊಳ್ಳಿ. ನಾನು ಹೇಳಿದೆ, ಯಾವುದೇ ಚರ್ಚೆ ಇಲ್ಲ. ಇಲ್ಲ. ನಂತರ ‘ಸಿಸ್ಟಮ್’ ನನ್ನನ್ನು ಊಟಕ್ಕೆ ಕರೆದಿದೆ. ನಾನು ಜನರಿಗೆ ಯಾವುದೇ ಕಲ್ಯಾಣವನ್ನು ಮಾಡಲು ಸಾಧ್ಯವಾಗದಿದ್ದರೆ, ನಾನು ಅವರ ಜೀವನವನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಯಾವುದೇ ಹುದ್ದೆಯಿದ್ದೇನು. ನೀವು ಈ ಕಾರ್ಯಸೂಚಿಯನ್ನು ಪೂರೈಸಿದರೆ ನಾನು ನಿಮ್ಮ ಹಿಂದೆ ನಡೆಯುತ್ತೇನೆ. ನೀವು ನನಗೆ ಜಿಲಾ ಪರಿಷತ್ ಹುದ್ದೆ ನೀಡಿ, ಅದನ್ನು ನಾನು ಸ್ವೀಕರಿಸುತ್ತೇನೆ ”ಎಂದು ಸಿಧು ಹೇಳಿದರು.

2017 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಕಾಂಗ್ರೆಸ್​ಗೆ ಸೇರ್ಪಡೆಯಾದ ವಿಧಾನವನ್ನು ಉಲ್ಲೇಖಿಸಿದ ಸಿಧು, ಪ್ರಶಾಂತ್ ಕಿಶೋರ್ ಅವರು ನನ್ನನ್ನು 50 ಕ್ಕೂ ಹೆಚ್ಚು ಬಾರಿ ಭೇಟಿಯಾಗಿ ಮನವೊಲಿಸಿ ಪಕ್ಷವು ಚುನಾವಣೆಯಲ್ಲಿ ಗೆಲ್ಲುವಂತೆ ಸಹಾಯ ಮಾಡಬೇಕು ಎಂದಿದ್ದರು.

ಪ್ರಶಾಂತ್ ಕಿಶೋರ್ ಅವರು ನವೆಂಬರ್ 2016 ರಿಂದ ಜನವರಿ 2017 ರವರೆಗೆ 50 ಕ್ಕೂ ಹೆಚ್ಚು ಬಾರಿ ನನ್ನ ಬಳಿಗೆ ಬಂದರು. ನಾನು ಬರುತ್ತಿಲ್ಲ ಎಂದು ಹೇಳಿದೆ. ಪ್ರಿಯಾಂಕಾ ಜಿ ಮತ್ತು ಭಾಯ್ ರಾಹುಲ್ ಗಾಂಧಿಯವರ ಕಾರಣದಿಂದಾಗಿ) ನಾನು ನನ್ನ ಹೆಂಡತಿಯನ್ನು ಪಕ್ಷಕ್ಕೆ ಸೇರಲು ಕಳುಹಿಸಿದೆ. ನನ್ನ ತಂದೆ 40 ವರ್ಷಗಳ ಕಾಲ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದ್ದರಿಂದ ನಾನು ಅವರನ್ನು ನಿರಾಕರಿಸಲಿಲ್ಲ. ನೀವು ಸೇರಬೇಕು ಎಂದು ನನಗೆ ತಿಳಿಸಲಾಯಿತು, ಇಲ್ಲದಿದ್ದರೆ ಸರ್ಕಾರ ರಚನೆಯಾಗುವುದಿಲ್ಲ. ನಮಗೆ 40 ಕ್ಕೂ ಹೆಚ್ಚು ಸ್ಥಾನಗಳು ಸಿಗುವುದಿಲ್ಲ. ನಾನು ಅವನಿಗೆ ಅಜೆಂಡಾ ಇದೆ ಎಂದು ಹೇಳಿದೆ . ಪಂಜಾಬ್ ಜನರ ಕಲ್ಯಾಣಕ್ಕೆ ಮಾತ್ರ ಆದ್ಯತೆ. ರಾಜಕೀಯ ನನಗೆ ವೃತ್ತಿಯಾಗಿರಲಿಲ್ಲ. ‘ಮೇರಾ ಕೊಯಿ ದಂದಾ ನಹಿ ಹೈ ಕಿಟ್ಟೆ ವೀ ಪಂಜಾಬ್ ವಿಚ್’ (ನನಗೆ ಪಂಜಾಬ್‌ನಲ್ಲಿ ಎಲ್ಲಿಯೂ ವ್ಯವಹಾರವಿಲ್ಲ). ನಾನು ವರ್ಷಕ್ಕೆ 20-30 ಕೋಟಿ ರೂ ಸಂಪಾದಿಸುತ್ತಿದ್ದೆ.ನಾನು ಅದನ್ನು ಬಿಟ್ಟು ಬಂದಿದ್ದೇನೆ ಏಕೆಂದರೆ ಇದು ನನ್ನ ಜೀವನದ ಉದ್ದೇಶವಾಗಿದೆ. ಮಿಷನ್ ವೃತ್ತಿಯಲ್ಲ. ನೀವು ವ್ಯವಸ್ಥೆಯಿಂದ ಹೊರಗುಳಿಯಲು ಸಾಧ್ಯವಿಲ್ಲ ಮತ್ತು ಅದನ್ನು ಶುದ್ಧೀಕರಿಸಲು ಪ್ರಯತ್ನಿಸಬಹುದು, ”ಎಂದು ಸಿಧು ಹೇಳಿದರು.

ಇದನ್ನೂ ಓದಿ: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ನಿವಾಸದ ಹೊರಗೆ ಪ್ರತಿಭಟನೆ; ಸುಖ್ಬೀರ್ ಸಿಂಗ್ ಬಾದಲ್ ಪೊಲೀಸರ ವಶಕ್ಕೆ

Published On - 7:20 pm, Sun, 20 June 21