ಪಾಕ್, ಚೀನಾವನ್ನು ಎದುರಿಸಲು ಶ್ರೀನಗರದಲ್ಲಿ ಹೊಸ MiG-29 ಫೈಟರ್ ಜೆಟ್‌ ನಿಯೋಜಿಸಿದ ಭಾರತ

ಭಾರತೀಯ ಸೇನೆಯು ಶ್ರೀನಗರದ ವಾಯುನೆಲೆಯಲ್ಲಿ ಪಾಕಿಸ್ತಾನಿ ಮತ್ತು ಚೀನಾದ ಸೇನಾ ಬೆದರಿಕೆಯನ್ನು ಎದುರಿಸಲು ಹೊಸ MiG-29 ಫೈಟರ್ ಜೆಟ್‌ಗಳನ್ನು ಸ್ಕ್ವಾಡ್ರನ್​​ ನಿಯೋಜಿಸಿದೆ.

ಪಾಕ್, ಚೀನಾವನ್ನು ಎದುರಿಸಲು ಶ್ರೀನಗರದಲ್ಲಿ ಹೊಸ MiG-29 ಫೈಟರ್ ಜೆಟ್‌ ನಿಯೋಜಿಸಿದ ಭಾರತ
ಸಾಂದರ್ಭಿಕ ಚಿತ್ರ
Follow us
|

Updated on: Aug 12, 2023 | 11:29 AM

ಶ್ರೀನಗರ, ಆ12 : ಗಡಿ ವಿಚಾರದಲ್ಲಿ ಭಾರತದ ಜತೆಗೆ ಪದೇ ಪದೇ ಕಿರಿಕ್​​ ಮಾಡಿಕೊಳ್ಳುತ್ತಿದ್ದ ಪಾಕ್​​-ಚೀನಾಕ್ಕೆ, ಭಾರತೀಯ ಸೇನೆ, ಸೈನ್ಯದ ಮೂಲಕವೇ ಖಡಕ್​​ ಉತ್ತರ ನೀಡಲು ಮುಂದಾಗಿದೆ. ಇದೀಗ ಭಾರತೀಯ ಸೇನೆಯು ಶ್ರೀನಗರದ ವಾಯುನೆಲೆಯಲ್ಲಿ ಪಾಕಿಸ್ತಾನಿ ಮತ್ತು ಚೀನಾದ ಸೇನಾ ಬೆದರಿಕೆಯನ್ನು ಎದುರಿಸಲು ಹೊಸ MiG-29 ಫೈಟರ್ ಜೆಟ್‌ಗಳನ್ನು ಸ್ಕ್ವಾಡ್ರನ್​​ ನಿಯೋಜಿಸಿದೆ. “ಉತ್ತರದ ರಕ್ಷಕ” ಎಂದೂ ಕರೆಯಲ್ಪಡುವ ಟ್ರೈಡೆಂಟ್ಸ್ ಸ್ಕ್ವಾಡ್ರನ್​​ನ ಮಿಗ್ -21 ಬದಲು ಮಿಗ್ -29ನ್ನು ಶ್ರೀನಗರದ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗಿದ್ದು, ಇದಕ್ಕೆ ಪಾಕ್​​ -ಚೀನಾದ ಬೆದರಿಕೆಯನ್ನು ಎದುರಿಸುವ ಜಬಾಬ್ದಾರಿಯನ್ನು ನೀಡಲಾಗಿದೆ.

ಶ್ರೀನಗರವು ಕಾಶ್ಮೀರ ಕಣಿವೆಯ ಮಧ್ಯಭಾಗದಲ್ಲಿದೆ. ಇದು ಬಯಲು ಪ್ರದೇಶಕ್ಕಿಂತ ಎತ್ತರದಲ್ಲಿದ್ದು, ಹೆಚ್ಚಿನ ತೂಕ, ಅನುಪಾತ ಮತ್ತು ಕಡಿಮೆ ಪ್ರತಿಕ್ರಿಯೆ ಸಮಯವನ್ನು ಹೊಂದಿರುವ ಹಾಗೂ ಯುದ್ಧ ವಿಮಾನವನ್ನು ಲ್ಯಾಂಡ್ ಅಥವಾ ನಿಲ್ಲಿಸಲು ಉತ್ತಮ ಪ್ರದೇಶದ ಎಂದು ಸೇನೆ ಹೇಳಿದೆ. ಮಿಗ್ -29 ದೀರ್ಘ-ಶ್ರೇಣಿಯ ಕ್ಷಿಪಣಿ ಮತ್ತು ಎಲ್ಲ ಮಾನದಂಡಗಳನ್ನು ಪೂರೈಸುವ ಕಾರ್ಯತಂತ್ರವನ್ನು ಹೊಂದಿದೆ. ಇದರಿಂದಾಗಿ ನಾವು ಎರಡೂ ರಂಗಗಳಲ್ಲಿ ಶತ್ರುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಭಾರತೀಯ ವಾಯುಪಡೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

MiG 29, MiG-21s ಗಿಂತ ಹೆಚ್ಚು ಬಲಶಾಲಿ ಮತ್ತು ಶೀಘ್ರ ಪ್ರಕ್ರಿಯೆ ಶಕ್ತಿಯನ್ನು ಹೊಂದಿದೆ. ಹಲವು ವರ್ಷಗಳಿಂದ ಇದು ಕಾಶ್ಮೀರ ಕಣಿವೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ನಮ್ಮ ದೇಶಕ್ಕೆ ರಕ್ಷಣಾ ಕವಚವಾಗಿರಲು ಸಮರ್ಥವಾಗಿವೆ. 2019ರಲ್ಲಿ ಬಾಲಾಕೋಟ್ ವಾಯುದಾಳಿ ನಂತರ ಇದು ಪ್ರತಿಯುತ್ತರವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿ F-16ನ್ನು ಹೊಡೆದುರುಳಿಸಿದ್ದವು.

ಇದನ್ನೂ ಓದಿ: 2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್

ಇನ್ನು ನವೀಕರಿಸಲಾದ ಮಿಗ್ -29ನ್ನು ಯುದ್ಧ ಸಮಯದಲ್ಲಿ ಶತ್ರುಗಳ ಯುದ್ಧ ವಿಮಾನ ಸಮಾರ್ಥ್ಯವನ್ನು ಕ್ಷೀಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಂ ರಾಣಾ ಅವರ ಪ್ರಕಾರ ಇದು ಹೆಚ್ಚು ಹೊತ್ತು ಆಕಾಶದಲ್ಲಿ ಹಾರಡುವ ಸಮಾರ್ಥ್ಯವನ್ನು ಹೊಂದಿದ್ದು, ರಾತ್ರಿ ಹೊತ್ತಿನಲ್ಲು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತದೆ. ಮಿಗ್ -29ನ್ನು ಈ ವರ್ಷ ಅಂದರೆ 2023 ಜನವರಿಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ನಿಯೋಜನೆ ಮಾಡಲಿದೆ. ಒಂದು ವೇಳೆ ಚೀನಾ ಅಥವಾ ಪಾಕ್ ಗಡಿ ನಿಯಮವನ್ನು ಉಲ್ಲೆಂಘನೆ ಮಾಡಿದರೆ ತಕ್ಷಣ ಮಿಗ್ -29 ಪ್ರತಿಕ್ರಿಯೆ ನೀಡುತ್ತದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು