AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ತಿಂಗಳ ನಂತರ ಕೆನಡಿಯನ್ನರಿಗೆ ಇ-ವೀಸಾ ಸೇವೆ ಪುನರಾರಂಭಿಸಿದ ಭಾರತ: ಮೂಲಗಳು

ಸೆಪ್ಟೆಂಬರ್‌ನಲ್ಲಿ, ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು "ಮುಂದಿನ ಸೂಚನೆಯವರೆಗೆ" ಸ್ಥಗಿತಗೊಳಿಸಿತ್ತು. ನಿಜ್ಜಾರ್ ಹತ್ಯೆ ಬಗ್ಗೆ ಕೆನಡಾ ಆರೋಪ ಮಾಡಿದ ನಂತರ ಎರಡು ದೇಶಗಳು ರಾಜತಾಂತ್ರಿಕರನ್ನು ವಾಪಸ್ ಕಳುಹಿಸಿತ್ತು. ಎರಡು ರಾಷ್ಟ್ರಗಳು ಸಹ ಪ್ರಯಾಣ ಸಲಹೆಗಳನ್ನು ವಿನಿಮಯ ಮಾಡಿಕೊಂಡವು.

2 ತಿಂಗಳ ನಂತರ ಕೆನಡಿಯನ್ನರಿಗೆ ಇ-ವೀಸಾ ಸೇವೆ ಪುನರಾರಂಭಿಸಿದ ಭಾರತ: ಮೂಲಗಳು
ಭಾರತ-ಕೆನಡಾ
Follow us
ರಶ್ಮಿ ಕಲ್ಲಕಟ್ಟ
|

Updated on:Nov 22, 2023 | 2:36 PM

ದೆಹಲಿ ನವೆಂಬರ್ 22: ಸುಮಾರು ಎರಡು ತಿಂಗಳ ನಂತರ ಭಾರತವು ಕೆನಡಾದ (Canada) ಪ್ರಜೆಗಳಿಗೆ ಎಲೆಕ್ಟ್ರಾನಿಕ್ ವೀಸಾ ಸೇವೆಗಳನ್ನು ಪುನರಾರಂಭಿಸಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್​​​ಡಿಟಿವಿ ವರದಿ ಮಾಡಿದ. ಆ ದೇಶದಲ್ಲಿ ಕೆನಡಾದ ಪ್ರಜೆಯಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nijjar) ಅವರ ಹತ್ಯೆಯಲ್ಲಿ “ಭಾರತ ಸರ್ಕಾರದ ಏಜೆಂಟರು” ಭಾಗಿಯಾಗಿದ್ದಾರೆ ಎಂಬ ಕೆನಡಾದ ಹೇಳಿಕೆಗಳ ಮೇಲೆ ನಡೆಯುತ್ತಿರುವ ರಾಜತಾಂತ್ರಿಕ ಗದ್ದಲದ ನಡುವೆ ಸೆಪ್ಟೆಂಬರ್ 21 ರಂದು ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.

ಇದರರ್ಥ ಪ್ರವಾಸಿ ವೀಸಾ ಸೇರಿದಂತೆ ಎಲ್ಲಾ ವೀಸಾ ಸೇವೆಗಳು ಈಗ ಪುನರಾರಂಭಗೊಂಡಿವೆ. ವ್ಯಾಪಾರ ಮತ್ತು ವೈದ್ಯಕೀಯ ವೀಸಾ ಸೇರಿದಂತೆ ನಾಲ್ವರ ಸೇವೆಗಳು ಕಳೆದ ತಿಂಗಳು ಪುನರಾರಂಭಗೊಂಡಿದ್ದವು.

ಸೆಪ್ಟೆಂಬರ್‌ನಲ್ಲಿ, ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು “ಮುಂದಿನ ಸೂಚನೆಯವರೆಗೆ” ಸ್ಥಗಿತಗೊಳಿಸಿತ್ತು. ನಿಜ್ಜಾರ್ ಹತ್ಯೆ ಬಗ್ಗೆ ಕೆನಡಾ ಆರೋಪ ಮಾಡಿದ ನಂತರ ಎರಡು ದೇಶಗಳು ರಾಜತಾಂತ್ರಿಕರನ್ನು ವಾಪಸ್ ಕಳುಹಿಸಿತ್ತು. ಎರಡು ರಾಷ್ಟ್ರಗಳು ಸಹ ಪ್ರಯಾಣ ಸಲಹೆಗಳನ್ನು ವಿನಿಮಯ ಮಾಡಿಕೊಂಡವು. ಭಾರತವು ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಮತ್ತು ಪ್ರಯಾಣವನ್ನು ಯೋಜಿಸುತ್ತಿರುವವರಿಗೆ ಪ್ರಯಾಣ ಸಲಹೆ ನೀಡಿತ್ತು.

ನಿಜ್ಜಾರ್ ಹತ್ಯೆಯಲ್ಲಿ ಕೈವಾಡವಿದೆ ಎಂಬ ಕೆನಡಾದ “ಅಸಂಬದ್ಧ” ಮತ್ತು “ಪ್ರಚೋದಿತ” ಆರೋಪಗಳನ್ನು ಭಾರತ ಪದೇ ಪದೇ ಮತ್ತು ದೃಢವಾಗಿ ನಿರಾಕರಿಸಿದ್ದು, ಈ ಹಕ್ಕುಗಳನ್ನು ಬೆಂಬಲಿಸಲು ಸಾಕ್ಷ್ಯವನ್ನು ಹಂಚಿಕೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಹೇಳಿದೆ.

ಇದನ್ನೂ ಓದಿ: ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಿ: ಪತಂಜಲಿಗೆ ಸುಪ್ರೀಂ ಎಚ್ಚರಿಕೆ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕಳೆದ ವಾರ ಭಾರತದ ಬೇಡಿಕೆಯನ್ನು ಪುನರುಚ್ಚರಿಸಿದರು. ಕೆನಡಾದ ವಿಚಾರಣೆಗೆ ಸಹಕರಿಸುವಂತೆ ಭಾರತವನ್ನು ಒತ್ತಾಯಿಸುತ್ತಿರುವ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೈಶಂಕರ್, “ನಾವು ತನಿಖೆಯನ್ನು ತಳ್ಳಿಹಾಕುವುದಿಲ್ಲ… (ಆದರೆ) ನಿಮಗೆ (ಕೆನಡಾದ ಸರ್ಕಾರ) ಆರೋಪ ಸಾಬೀತು ಪಡಿಸಲು ದಯವಿಟ್ಟು ನಮ್ಮೊಂದಿಗೆ ಪುರಾವೆಗಳನ್ನು ಹಂಚಿಕೊಳ್ಳಿ. ನೀವು ನೀಡುವ ಯಾವುದನ್ನಾದರೂ ನಾವು ನೋಡುತ್ತೇವೆ ಎಂದಿದ್ದರು.

ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ದೊಡ್ಡ ಹೇಳಿಕೆಯ ನಂತರ ಭಾರತ-ಕೆನಡಾ ಸಂಬಂಧಗಳು ಹಳಸಿದ್ದು, ಉಭಯ ದೇಶಗಳು ದೀರ್ಘಾವಧಿಯಿಂದ ಬಾಕಿ ಉಳಿದಿರುವ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಸಹ ನಿಲ್ಲಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Wed, 22 November 23