AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Army: ಗಾಲ್ವಾನ್​ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗಾಗಿ ಭಾರತೀಯ ಸೇನೆಯಿಂದ ಗಾಯನ ನಮನ; ವಿಡಿಯೋ ವೈರಲ್​

Galwan clash: ‘ಗಾಲ್ವಾನ್​ ಕೆ ವೀರ್​..’ ಎಂಬ ಹಾಡನ್ನು ಖ್ಯಾತ ಗಾಯಕ ಹರಿಹರನ್​ ಹಾಡಿದ್ದಾರೆ. ಭಾರತೀಯ ಯೋಧರ ಸಾಹಸದ ದೃಶ್ಯಗಳೊಂದಿಗೆ ಈ ಹಾಡನ್ನು ಸಂಯೋಜಿಸಲಾಗಿದೆ.

Indian Army: ಗಾಲ್ವಾನ್​ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗಾಗಿ ಭಾರತೀಯ ಸೇನೆಯಿಂದ ಗಾಯನ ನಮನ; ವಿಡಿಯೋ ವೈರಲ್​
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 16, 2021 | 11:51 AM

Share

ಗಾಲ್ವಾನ್​ ಸಂಘರ್ಷಕ್ಕೆ ನಿನ್ನೆಗೆ ಒಂದು ವರ್ಷ ಕಳೆದಿದೆ. 2020 ಜೂ.15ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು, 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂದು ಮಡಿದ ಯೋಧರಿಗಾಗಿ ಭಾರತೀಯ ಸೇನೆ ಒಂದು ವಿಡಿಯೋ ಹಾಡಿನ ಮೂಲಕ ಗೌರವ ಸಲ್ಲಿಸಿದೆ. ಭಾರತೀಯ ಸೇನೆ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಡೈರಕ್ಟರೇಟ್​ ಜನರಲ್​ ಟ್ವಿಟರ್​​ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

‘ಗಾಲ್ವಾನ್​ ಕೆ ವೀರ್​..’ ಎಂಬ ಹಾಡನ್ನು ಖ್ಯಾತ ಗಾಯಕ ಹರಿಹರನ್​ ಹಾಡಿದ್ದಾರೆ. ಭಾರತೀಯ ಯೋಧರ ಸಾಹಸದ ದೃಶ್ಯಗಳೊಂದಿಗೆ ಈ ಹಾಡನ್ನು ಸಂಯೋಜಿಸಲಾಗಿದೆ. ಲಡಾಖ್​​ನಲ್ಲಿ ನಿಯೋಜಿಸಲಾಗಿರುವ ಭಾರತೀಯ ಯೋಧರ ತರಬೇತಿ, ಯುದ್ಧ ಸಿದ್ಧತೆಗಳ ದೃಶ್ಯಗಳನ್ನು ಈ 5 ನಿಮಿಷಗಳ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋ ಮತ್ತು ಹಾಡಿನ ಸಾಹಿತ್ಯ ಒಂದಕ್ಕೊಂದು ತುಂಬ ಚೆನ್ನಾಗಿ ಹೊಂದಾಣಿಕೆಯಾಗಿದ್ದು, ಅದನ್ನು ಕೇಳಿದರೆ ರೋಮಾಂಚನವಾಗದೆ ಇರದು.

ಗಾಲ್ವಾನ್​ ಸಂಘರ್ಷದಲ್ಲಿ ಚೀನಾ ಯೋಧರ ದಾಳಿಯಲ್ಲಿ ಮಡಿದ ಸೈನಿಕರಿಗೆ ಲೇಹ್​ನ 14 ಕಾರ್ಪ್ಸ್​​ (ಫೈರ್​ ಆ್ಯಂಡ್ ಫ್ಯೂರಿ ಕಾರ್ಪ್ಸ್​​)ನ ಯೋಧರು ಗೌರವ ಸಮರ್ಪಿಸಿದ್ದಾರೆ ಎಂದು ಉತ್ತರ ವಿಭಾಗದ ಕಮಾಂಡ್​​ ತಿಳಿಸಿದ್ದಾರೆ. ಹಾಗೇ, ಹುತಾತ್ಮ ಯೋಧರಿಗಾಗಿ ಪೂರ್ವ ಲಡಾಖ್​​ನ ಪೋಸ್ಟ್​ 120ರಲ್ಲಿ ಗಾಲ್ವಾನ್ ಧೀರರು ಎಂಬ ಹೆಸರಿನಲ್ಲಿ ಸ್ಮಾರಕವನ್ನೂ ಕಳೆದವರ್ಷವೇ ಕಟ್ಟಲಾಗಿದೆ. ಇಲ್ಲಿದೆ ನೋಡಿ ಚೀನಾ ಯೋಧರೊಂದಿಗೆ ಶೌರ್ಯದಿಂದ ಹೋರಾಡಿ, ಹುತಾತ್ಮರಾದ ಭಾರತದ ಯೋಧರಿಗಾಗಿ ರಚಿಸಲಾದ ವಿಡಿಯೋ ಹಾಡು..

ಇದನ್ನೂ ಓದಿ: Corona 3rd Wave: ಬೆಂಗಳೂರಿನಲ್ಲಿ 4,500 ಐಸಿಯು ಬೆಡ್​ಗಳನ್ನು ಸಿದ್ಧಪಡಿಸಿಕೊಳ್ಳಿ; ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ

Published On - 10:54 am, Wed, 16 June 21

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!