AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಾಳು ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಕೀವ್​​ನಿಂದ ಕರೆದುಕೊಂಡು ಹೋದ ಚಾಲಕನಿಗೆ ಧನ್ಯವಾದ ಸಲ್ಲಿಸಿದ ರಾಯಭಾರಿ ಕಚೇರಿ

700 ಕಿಮೀ ಕ್ರಮಿಸುವಾಗ ಎದುರಾದ ಕಷ್ಟಗಳ ಬಗ್ಗೆಯೂ ಭಾರತೀಯ ರಾಯಭಾರಿ ಕಚೇರಿ ಟ್ವೀಟ್​ ಮೂಲಕ ತಿಳಿಸಿದೆ.  ಯುದ್ಧ ವಲಯದಲ್ಲೆಲ್ಲ ಬಾಂಬ್​ ದಾಳಿ, ಶೆಲ್ಲಿಂಗ್​ ದಾಳಿ ಆಗುತ್ತಿದೆ. ಇಂಧನ ಕೊರತೆಯ ಅಪಾಯ ಇತ್ತು ಎಂದು ಹೇಳಿದೆ.

ಗಾಯಾಳು ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಕೀವ್​​ನಿಂದ ಕರೆದುಕೊಂಡು ಹೋದ ಚಾಲಕನಿಗೆ ಧನ್ಯವಾದ ಸಲ್ಲಿಸಿದ ರಾಯಭಾರಿ ಕಚೇರಿ
ಹರ್ಜೋತ್​ ಸಿಂಗ್​ರನ್ನು 700 ಕಿಮೀ ಕರೆದುಕೊಂಡು ಹೋದ ಚಾಲಕ
TV9 Web
| Edited By: |

Updated on:Mar 08, 2022 | 5:08 PM

Share

ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಷ್ಯಾ ಸೇನೆಯ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಬಾರತದ ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಈಗಾಗಲೇ ಪೋಲ್ಯಾಂಡ್​ ಗಡಿಯವರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಭಾರತದ ವಿಮಾನ ಹತ್ತಿಸಲಾಗಿದೆ.  ಸ್ಟ್ರೆಚರ್​ ಮೇಲೆ ಮಲಗಿದ್ದ ಅವರನ್ನು ಆಂಬುಲೆನ್ಸ್ ಮೂಲಕ ಪೋಲ್ಯಾಂಡ್​ ಗಡಿಗೆ ಕರೆದುಕೊಂಡು ಬರಲಾಗಿದೆ. ಕೀವ್​​ನಿಂದ ಪೋಲ್ಯಾಂಡ್​ ಬರೋಬ್ಬರಿ 700 ಕಿಮೀಗಳಷ್ಟು ದೂರ ಇದ್ದು, ಆಂಬುಲೆನ್ಸ್​​ನಲ್ಲಿ ಕರೆದುಕೊಂಡು ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹೀಗಿದ್ದಾಗ್ಯೂ ಚಾಲಕ ತುಂಬ ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ಹರ್ಜೋತ್​ ಸಿಂಗ್​ರಿಗೆ ಯಾವುದೇ ತೊಂದರೆಯಾಗದಂತೆ ನೆರೆರಾಷ್ಟ್ರದ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದಾನೆ. ಆ ಚಾಲಕನನ್ನು ಉಕ್ರೇನ್​ನಲ್ಲಿರುವ ಭಾರತೀಯರ ರಾಯಭಾರಿ ಕಚೇರಿ ಪ್ರಶಂಸಿಸಿದೆ.

ಹೀಗೆ 700 ಕಿಮೀ ಕ್ರಮಿಸುವಾಗ ಎದುರಾದ ಕಷ್ಟಗಳ ಬಗ್ಗೆಯೂ ಭಾರತೀಯ ರಾಯಭಾರಿ ಕಚೇರಿ ಟ್ವೀಟ್​ ಮೂಲಕ ತಿಳಿಸಿದೆ.  ಯುದ್ಧ ವಲಯದಲ್ಲೆಲ್ಲ ಬಾಂಬ್​ ದಾಳಿ, ಶೆಲ್ಲಿಂಗ್​ ದಾಳಿ ಆಗುತ್ತಿದೆ. ಇಂಧನ ಕೊರತೆಯ ಅಪಾಯ ಇತ್ತು. ರಸ್ತೆಗಳು ಬ್ಲಾಕ್​ ಆಗಿದ್ದವು. ಅಷ್ಟೇ ಅಲ್ಲ, ಟ್ರಾಫಿಕ್​ ಜಾಮ್​ ಸಮಸ್ಯೆಯೂ ಇತ್ತು. ಇನ್ನೂ  ಹಲವು ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಅದೆಲ್ಲದರ ಮಧ್ಯೆ ಹರ್ಜೋತ್​ ಸಿಂಗ್​ರನ್ನು 700 ಕಿಮೀ ದೂರದ ಪೋಲ್ಯಾಂಡ್​ ಗಡಿಯಾದ ಬೊಡೊಮಿಯರ್ಜ್​ಗೆ ಸ್ಥಳಾಂತರ ಮಾಡಲಾಯಿತು.  ಎಲ್ಲ ಅಡೆತಡೆಗಳನ್ನೂ ಮೀರಿ ಹರ್ಜೋತ್​ರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದ ಭಾರತೀಯ ರಾಯಭಾರಿ ಕಚೇರಿಯ ಉಕ್ರೇನ್​ ಚಾಲಕನಿಗೆ ಧನ್ಯವಾದಗಳು ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಸದ್ಯ ಹರ್ಜೋತ್​ ಸಿಂಗ್​(31) ಅವರು ಸಿ-17 ವಾಯು ಪಡೆ ವಿಮಾನದ ಮೂಲಕ ದೆಹಲಿ ಬಳಿಯ ಹಿಂಡನ್​ ಏರ್​ಫೋರ್ಸ್​ ಸ್ಟೇಶನ್​​ಗೆ ತಲುಪಿದ್ದಾರೆ. ನಿನ್ನೆ ಪೋಲ್ಯಾಂಡ್ ಏರ್​ಪೋರ್ಟ್ ತಲುಪಿದ್ದ ಅವರನ್ನು ಕೇಂದ್ರ ಸಚಿವ ವಿ.ಕೆ.ಸಿಂಗ್ ಭೇಟಿಯಾಗಿದ್ದರು.  ಯುದ್ಧ ಪೀಡಿತ ಉಕ್ರೇನ್​ನಿಂದ ಆಪರೇಷನ್​ ಗಂಗಾ ಮೂಲಕ ಈಗಾಗಲೇ 83 ವಿಮಾನಗಳಿಂದ 17,100 ಭಾರತೀಯರನ್ನು ಕರೆ ತಂದಿದೆ. ಉಕ್ರೇನ್​ ವಾಯು ಮಾರ್ಗ ಬಂದ್​ ಆಗಿರುವ ಕಾರಣ, ಅಲ್ಲಿರುವ ಭಾರತೀಯರನ್ನು ನೆರೆ ರಾಷ್ಟ್ರಗಳಾದ ರೊಮೇನಿಯಾ, ಪೋಲ್ಯಾಂಡ್, ಹಂಗೇರಿ, ಸ್ಲೊವಾಕಿಯಾ, ಮೊಲ್ಡೊವಾಗಳಿಗೆ ತಲುಪುವಂತೆ ಮಾಡಿ, ಅಲ್ಲಿಂದ ವಿಮಾನ ವ್ಯವಸ್ಥೆ ಮಾಡಿದೆ. ಭಾರತೀಯ ವಾಯುಪಡೆಯ ವಿಮಾನಗಳೂ ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ.

ಇದನ್ನೂ ಓದಿ: ಗೋವಾದಲ್ಲಿ ಪಕ್ಷಾಂತರ ಭೀತಿ: ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್​​ಗೆ ಕರೆದೊಯ್ದ ಕಾಂಗ್ರೆಸ್

Published On - 5:07 pm, Tue, 8 March 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!