ಶಿಶು ವಿಹಾರಗಳು, ಶಾಲೆಗಳ ಮೇಲೆ ಕೂಡ ರಷ್ಯಾ ಸೇನೆಯಿಂದ ದಾಳಿ; ಉಕ್ರೇನಿಯನ್​ ಅಧ್ಯಕ್ಷರಿಂದ ಮಾಹಿತಿ

ಆಕ್ರಮಣಕಾರರು ಪ್ರತಿಯೊಂದರ ಮೇಲೆಯೂ ದಾಳಿ ಮಾಡುತ್ತಿದ್ದಾರೆ. ಅವರು ತಮ್ಮ ಗುರಿ ಇರುವುದು ಉಕ್ರೇನ್​​ ಶಸ್ತ್ರ ತ್ಯಜಿಸುವಂತೆ ಮಾಡುವುದು ಎಂದು ಹೇಳಿದ್ದರು. ಆದರೀಗ ಆ ಗುರಿಯನ್ನು ಮರೆತಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ಹೇಳಿದ್ದಾರೆ.

ಶಿಶು ವಿಹಾರಗಳು, ಶಾಲೆಗಳ ಮೇಲೆ ಕೂಡ ರಷ್ಯಾ ಸೇನೆಯಿಂದ ದಾಳಿ; ಉಕ್ರೇನಿಯನ್​ ಅಧ್ಯಕ್ಷರಿಂದ ಮಾಹಿತಿ
ರಷ್ಯಾ ದಾಳಿಗೆ ಮನೆಯೊಂದು ಅಸ್ತವ್ಯಸ್ಯ
Follow us
| Updated By: Lakshmi Hegde

Updated on: Feb 27, 2022 | 7:17 PM

ಕೀವ್​: ಉಕ್ರೇನ್​​ನಲ್ಲಿ ರಷ್ಯಾ ದಾಳಿ (Ukraine-Russia War) ಮುಂದುವರಿಸಿದೆ. ನಾವು ಯಾವ ಕಾರಣಕ್ಕೂ ರಷ್ಯಾಕ್ಕೆ ತಲೆಬಾಗುವುದಿಲ್ಲ ಎಂದು ಹೇಳಿರುವ ಉಕ್ರೇನಿಯನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ, ತಮಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವಂತೆ ವಿಶ್ವದ ವಿವಿಧ ದೇಶಗಳ ಬಳಿ ಮನವಿ ಮಾಡುತ್ತಿದ್ದಾರೆ. ಹಾಗೇ, ತಾವೇ ಟ್ವೀಟ್ ಮತ್ತು ವಿಡಿಯೋ ಮೂಲಕ ಅಲ್ಲಿನ ಅಪ್​ಡೇಟ್​ ಕೂಡ ಕೊಡುತ್ತಿದ್ದಾರೆ. ರಷ್ಯಾ ಈಗ ಜನವಸತಿ ಪ್ರದೇಶಗಳಲ್ಲೂ ದಾಳಿ ನಡೆಸುತ್ತಿದೆ. ಶನಿವಾರ ರಾತ್ರಿ ಭಯಾನಕವಾಗಿತ್ತು. ವಸತಿ ಪ್ರದೇಶಗಳಲ್ಲಿ ಬಾಂಬ್​ ಸ್ಫೋಟಿಸುತ್ತಿತ್ತು..ಎಲ್ಲಿ ನೋಡಿದರೂ ಗುಂಡಿನ ಶಬ್ದ ಕೇಳುತ್ತಿತ್ತು ಎಂದು ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

ಆಕ್ರಮಣಕಾರರು ಪ್ರತಿಯೊಂದರ ಮೇಲೆಯೂ ದಾಳಿ ಮಾಡುತ್ತಿದ್ದಾರೆ. ಅವರು ತಮ್ಮ ಗುರಿ ಇರುವುದು ಉಕ್ರೇನ್​​ ಶಸ್ತ್ರ ತ್ಯಜಿಸುವಂತೆ ಮಾಡುವುದು ಎಂದು ಹೇಳಿದ್ದರು. ಆದರೀಗ ಆ ಗುರಿಯನ್ನು ಮರೆತಿದ್ದಾರೆ. ಅವರೀಗ ವಸತಿ ಪ್ರದೇಶಗಳು, ಶಾಲೆಗಳು, ಶಿಶುವಿಹಾರಗಳ ಮೇಲೆ ಕೂಡ ದಾಳಿ ಮಾಡುತ್ತಿದ್ದಾರೆ. ಆಂಬುಲೆನ್ಸ್​​ಗಳನ್ನೂ ಕೂಡ ಬಿಡುತ್ತಿಲ್ಲ. ಒಂದೇ ಒಂದು ಮಿಲಿಟರಿ ವ್ಯವಸ್ಥೆ, ಉಪಕರಣಗಳು ಇಲ್ಲದ ನಗರಗಳು, ಜಿಲ್ಲೆಗಳಲ್ಲಿ ಕೂಡ ರಷ್ಯಾ ಸೇನೆ ರಾಕೆಟ್​, ಕ್ಷಿಪಣಿಗಳನ್ನು ಹಾರಿಸುತ್ತಿದೆ ಎಂದು ಆರೋಪಿಸಿದ್ದಾರೆ.  ವಾಸಿಲ್ಕಿವ್, ಕೀವ್​, ಚೆರ್ನಿಗಿವ್, ಸುಮಿ, ಖಾರ್ಕಿವ್ ಮತ್ತು ಉಕ್ರೇನ್‌ನ ಇತರ ಅನೇಕ ಪಟ್ಟಣಗಳಲ್ಲಿ ಎರಡನೇ ಮಹಾಯುದ್ಧದ ನಂತರ ಇಂಥ ಸ್ಥಿತಿ ಎದುರಾಗಿರಲಿಲ್ಲ ಎಂದೂ ಉಕ್ರೇನ್ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿ ಅಚ್ಚರಿ ಮೂಡಿಸಿದ ಹೊಸ ಧಾರಾವಾಹಿ; ನಾಲ್ಕೇ ಎಪಿಸೋಡ್​ನಲ್ಲಿ ಆಯ್ತು ಮೋಡಿ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ