AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾಯಿಯನ್ನು ಬಿಟ್ಟು ಬರಲೊಲ್ಲೆ, ನಮ್ಮನ್ನು ಕೇಳುವವರೇ ಇಲ್ಲ; ಉಕ್ರೇನ್​​ನಿಂದ ವಿಡಿಯೋ ಮಾಡಿದ ವಿದ್ಯಾರ್ಥಿ

ಇಂದು ನಾನು ಫ್ಲೈಟ್​​ನಲ್ಲಿ ಭಾರತಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಏನೇನೋ ಸರ್ಟಿಫಿಕೇಟ್​ ಕೇಳುತ್ತಿದ್ದಾರೆ. ಇಲ್ಲಿ ಊಟ-ತಿಂಡಿಯೇ ಸಿಗದಂತಾದಾಗ ಸರ್ಟಿಫಿಕೇಟ್​ ಹೇಗೆ ತರಲಿ ಎಂದು ರಿಶಬ್​ ಕೌಶಿಕ್​ ಹೇಳಿದ್ದಾರೆ.

Video: ನಾಯಿಯನ್ನು ಬಿಟ್ಟು ಬರಲೊಲ್ಲೆ, ನಮ್ಮನ್ನು ಕೇಳುವವರೇ ಇಲ್ಲ; ಉಕ್ರೇನ್​​ನಿಂದ ವಿಡಿಯೋ ಮಾಡಿದ ವಿದ್ಯಾರ್ಥಿ
ಉಕ್ರೇನ್​ನಲ್ಲಿರುವ ವಿದ್ಯಾರ್ಥಿ
TV9 Web
| Edited By: |

Updated on:Feb 27, 2022 | 6:03 PM

Share

ಉಕ್ರೇನ್​​ನಲ್ಲಿ ರಷ್ಯಾ ಆಕ್ರಮಣ (Russia-Ukraine War) ತೀವ್ರವಾಗಿದ್ದು, ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ.  ಈ ಮಧ್ಯೆ ಉಕ್ರೇನ್​​ನಲ್ಲಿ ಇಂಜಿನಿಯರಿಂಗ್​ ಮೂರನೇ ವರ್ಷದಲ್ಲಿ ಓದುತ್ತಿರುವ ಭಾರತದ ವಿದ್ಯಾರ್ಥಿಯೊಬ್ಬರು ತಮ್ಮ ನಾಯಿಯನ್ನು ಬಿಟ್ಟು ಬರೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇವರ ಹೆಸರು ರಿಷಬ್​ ಕೌಶಿಕ್​. ಪೂರ್ವ ಉಕ್ರೇನ್​​ನ ನಗರವಾದ ಕಾರ್ಖೀವ್​​ನ ನ್ಯಾಶನಲ್​ ಯೂನಿವರ್ಸಿಟಿ ಆಫ್​ ರೇಡಿಯೋ ಎಲೆಕ್ಟ್ರಾನಿಕ್ಸ್​​ನಲ್ಲಿ ಓದುತ್ತಿದ್ದಾರೆ.  ನನ್ನನ್ನು ಏರ್​​ಲಿಫ್ಟ್ ಮಾಡಿದಾಗ ನಾಯಿಯನ್ನೂ ನನ್ನೊಂದಿಗೆ ಕರೆದೊಯ್ಯಬೇಕು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಮಾಡಿಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಅಧಿಕಾರಿಗಳು ಒಂದಾದ ಮೇಲೆ ಒಂದರಂತೆ ದಾಖಲೆಗಳನ್ನು ಕೇಳುತ್ತಿರುವುದರಿಂದ ವಿಳಂಬವಾಗುತ್ತಿದೆ ಎಂದು ರಿಶಬ್​ ಹೇಳಿದ್ದಾರೆ.

ಫೆ.18ರಿಂದಲೂ ನಾನು ಭಾರತಕ್ಕೆ ವಾಪಸ್ ಬರಲು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಮತ್ತು ನಾನು ಸಾಕಿರುವ ನಾಯಿಯ ಪಾಸ್​ಪೋರ್ಟ್​ಗಳನ್ನು ಭಾರತದ ರಾಯಭಾರಿ ಕಚೇರಿಗೆ ಕಳಿಸಿದ್ದೇನೆ. ಆದರೆ ಅಧಿಕಾರಿಗಳು ಏರ್​ ಟಿಕೆಟ್​ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಉಕ್ರೇನ್​​ನಲ್ಲಿ ವಾಯುಮಾರ್ಗವೆಲ್ಲ ಬಂದ್ ಆಗಿದೆ. ಹೀಗಿರುವಾಗ ಟಿಕೆಟ್​ ಎಲ್ಲಿಂದ ಸಿಗುತ್ತದೆ? ಇಲ್ಲಿ ಊಟ-ತಿಂಡಿ-ನೀರು ಏನೂ ಸಿಗುತ್ತಿಲ್ಲ. ಜನರು ಬಂಕರ್​ಗಳಲ್ಲಿ ಇದ್ದಾರೆ. ನಾನೂ ಕೂಡ ಕೀವ್​​ನ ಬಂಕರ್​​ನಲ್ಲಿದ್ದೆ. ಆದರೆ ತುಂಬ ಚಳಿ ಇದ್ದ ಕಾರಣ ನಾಯಿಯನ್ನು ಕರೆದುಕೊಂಡು, ಅಲ್ಲಿಂದ ಬರಬೇಕಾಯಿತು ಎಂದು ರಿಶಬ್​ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರನ್ನೂ ಸಂಪರ್ಕಿಸಿದ್ದೆ. ಅವರೂ ಸಹ ಸರಿಯಾಗಿ ಮಾತನಾಡಲಿಲ್ಲ ಎಂದು ರಿಶಬ್​ ಆರೋಪಿಸಿದ್ದಾರೆ.

ಇಂದು ನಾನು ಫ್ಲೈಟ್​​ನಲ್ಲಿ ಭಾರತಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಏನೇನೋ ಸರ್ಟಿಫಿಕೇಟ್​ ಕೇಳುತ್ತಿದ್ದಾರೆ. ಇಲ್ಲಿ ಊಟ-ತಿಂಡಿಯೇ ಸಿಗದಂತಾದಾಗ ಸರ್ಟಿಫಿಕೇಟ್​ ಹೇಗೆ ತರಲಿ. ನನ್ನ ಬಳಿ ಇರುವುದು ನಾನು ಕಾರ್ಖೀವ್​​ನಲ್ಲಿ ರಕ್ಷಣೆ ಮಾಡಿದ ನಾಯಿ. ಈ ಪಪ್ಪಿ ಈಗಾಗಲೇ ಹೆದರಿಕೊಂಡಿದೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಇಡೀದಿನ ಕೂಗುತ್ತಿರುತ್ತದೆ. ದಯವಿಟ್ಟು ಭಾರತ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹಲವು ರೀತಿಯ ಫೇಕ್​ನ್ಯೂಸ್​ಗಳು ಹರಿದಾಡುತ್ತಿವೆ. ನಮಗೆ ಮಾತ್ರ ಯಾರನ್ನೂ ಸಂಪರ್ಕಿಸಲು, ಏನು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ

Published On - 3:46 pm, Sun, 27 February 22

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ