AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾಯಿಯನ್ನು ಬಿಟ್ಟು ಬರಲೊಲ್ಲೆ, ನಮ್ಮನ್ನು ಕೇಳುವವರೇ ಇಲ್ಲ; ಉಕ್ರೇನ್​​ನಿಂದ ವಿಡಿಯೋ ಮಾಡಿದ ವಿದ್ಯಾರ್ಥಿ

ಇಂದು ನಾನು ಫ್ಲೈಟ್​​ನಲ್ಲಿ ಭಾರತಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಏನೇನೋ ಸರ್ಟಿಫಿಕೇಟ್​ ಕೇಳುತ್ತಿದ್ದಾರೆ. ಇಲ್ಲಿ ಊಟ-ತಿಂಡಿಯೇ ಸಿಗದಂತಾದಾಗ ಸರ್ಟಿಫಿಕೇಟ್​ ಹೇಗೆ ತರಲಿ ಎಂದು ರಿಶಬ್​ ಕೌಶಿಕ್​ ಹೇಳಿದ್ದಾರೆ.

Video: ನಾಯಿಯನ್ನು ಬಿಟ್ಟು ಬರಲೊಲ್ಲೆ, ನಮ್ಮನ್ನು ಕೇಳುವವರೇ ಇಲ್ಲ; ಉಕ್ರೇನ್​​ನಿಂದ ವಿಡಿಯೋ ಮಾಡಿದ ವಿದ್ಯಾರ್ಥಿ
ಉಕ್ರೇನ್​ನಲ್ಲಿರುವ ವಿದ್ಯಾರ್ಥಿ
TV9 Web
| Edited By: |

Updated on:Feb 27, 2022 | 6:03 PM

Share

ಉಕ್ರೇನ್​​ನಲ್ಲಿ ರಷ್ಯಾ ಆಕ್ರಮಣ (Russia-Ukraine War) ತೀವ್ರವಾಗಿದ್ದು, ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ.  ಈ ಮಧ್ಯೆ ಉಕ್ರೇನ್​​ನಲ್ಲಿ ಇಂಜಿನಿಯರಿಂಗ್​ ಮೂರನೇ ವರ್ಷದಲ್ಲಿ ಓದುತ್ತಿರುವ ಭಾರತದ ವಿದ್ಯಾರ್ಥಿಯೊಬ್ಬರು ತಮ್ಮ ನಾಯಿಯನ್ನು ಬಿಟ್ಟು ಬರೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇವರ ಹೆಸರು ರಿಷಬ್​ ಕೌಶಿಕ್​. ಪೂರ್ವ ಉಕ್ರೇನ್​​ನ ನಗರವಾದ ಕಾರ್ಖೀವ್​​ನ ನ್ಯಾಶನಲ್​ ಯೂನಿವರ್ಸಿಟಿ ಆಫ್​ ರೇಡಿಯೋ ಎಲೆಕ್ಟ್ರಾನಿಕ್ಸ್​​ನಲ್ಲಿ ಓದುತ್ತಿದ್ದಾರೆ.  ನನ್ನನ್ನು ಏರ್​​ಲಿಫ್ಟ್ ಮಾಡಿದಾಗ ನಾಯಿಯನ್ನೂ ನನ್ನೊಂದಿಗೆ ಕರೆದೊಯ್ಯಬೇಕು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಮಾಡಿಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಅಧಿಕಾರಿಗಳು ಒಂದಾದ ಮೇಲೆ ಒಂದರಂತೆ ದಾಖಲೆಗಳನ್ನು ಕೇಳುತ್ತಿರುವುದರಿಂದ ವಿಳಂಬವಾಗುತ್ತಿದೆ ಎಂದು ರಿಶಬ್​ ಹೇಳಿದ್ದಾರೆ.

ಫೆ.18ರಿಂದಲೂ ನಾನು ಭಾರತಕ್ಕೆ ವಾಪಸ್ ಬರಲು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಮತ್ತು ನಾನು ಸಾಕಿರುವ ನಾಯಿಯ ಪಾಸ್​ಪೋರ್ಟ್​ಗಳನ್ನು ಭಾರತದ ರಾಯಭಾರಿ ಕಚೇರಿಗೆ ಕಳಿಸಿದ್ದೇನೆ. ಆದರೆ ಅಧಿಕಾರಿಗಳು ಏರ್​ ಟಿಕೆಟ್​ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಉಕ್ರೇನ್​​ನಲ್ಲಿ ವಾಯುಮಾರ್ಗವೆಲ್ಲ ಬಂದ್ ಆಗಿದೆ. ಹೀಗಿರುವಾಗ ಟಿಕೆಟ್​ ಎಲ್ಲಿಂದ ಸಿಗುತ್ತದೆ? ಇಲ್ಲಿ ಊಟ-ತಿಂಡಿ-ನೀರು ಏನೂ ಸಿಗುತ್ತಿಲ್ಲ. ಜನರು ಬಂಕರ್​ಗಳಲ್ಲಿ ಇದ್ದಾರೆ. ನಾನೂ ಕೂಡ ಕೀವ್​​ನ ಬಂಕರ್​​ನಲ್ಲಿದ್ದೆ. ಆದರೆ ತುಂಬ ಚಳಿ ಇದ್ದ ಕಾರಣ ನಾಯಿಯನ್ನು ಕರೆದುಕೊಂಡು, ಅಲ್ಲಿಂದ ಬರಬೇಕಾಯಿತು ಎಂದು ರಿಶಬ್​ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರನ್ನೂ ಸಂಪರ್ಕಿಸಿದ್ದೆ. ಅವರೂ ಸಹ ಸರಿಯಾಗಿ ಮಾತನಾಡಲಿಲ್ಲ ಎಂದು ರಿಶಬ್​ ಆರೋಪಿಸಿದ್ದಾರೆ.

ಇಂದು ನಾನು ಫ್ಲೈಟ್​​ನಲ್ಲಿ ಭಾರತಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಏನೇನೋ ಸರ್ಟಿಫಿಕೇಟ್​ ಕೇಳುತ್ತಿದ್ದಾರೆ. ಇಲ್ಲಿ ಊಟ-ತಿಂಡಿಯೇ ಸಿಗದಂತಾದಾಗ ಸರ್ಟಿಫಿಕೇಟ್​ ಹೇಗೆ ತರಲಿ. ನನ್ನ ಬಳಿ ಇರುವುದು ನಾನು ಕಾರ್ಖೀವ್​​ನಲ್ಲಿ ರಕ್ಷಣೆ ಮಾಡಿದ ನಾಯಿ. ಈ ಪಪ್ಪಿ ಈಗಾಗಲೇ ಹೆದರಿಕೊಂಡಿದೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಇಡೀದಿನ ಕೂಗುತ್ತಿರುತ್ತದೆ. ದಯವಿಟ್ಟು ಭಾರತ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹಲವು ರೀತಿಯ ಫೇಕ್​ನ್ಯೂಸ್​ಗಳು ಹರಿದಾಡುತ್ತಿವೆ. ನಮಗೆ ಮಾತ್ರ ಯಾರನ್ನೂ ಸಂಪರ್ಕಿಸಲು, ಏನು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ

Published On - 3:46 pm, Sun, 27 February 22

Follow Us
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ