ಒಮ್ಮೆ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಅಂದ, ಇಂಡಿಗೋ ವಿಮಾನದಲ್ಲಿ 2 ಬಾರಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ

ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. 'ತಿಳಿಯಲಿಲ್ಲ', 'ದೆವ್ವ ಹಿಡಿದಿದೆ' ಎಂದವನು, ವಿಮಾನದಲ್ಲಿದ್ದವರಲ್ಲಿ ಆತಂಕ ಸೃಷ್ಟಿಸಿದ್ದ. ವಿಮಾನ ಸುರಕ್ಷಿತವಾಗಿ ಇಳಿದ ನಂತರ, ಆರೋಪಿ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಮ್ಮೆ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಅಂದ, ಇಂಡಿಗೋ ವಿಮಾನದಲ್ಲಿ 2 ಬಾರಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ
ಇಂಡಿಗೋ ವಿಮಾನ
Image Credit source: Reuters

Updated on: Mar 30, 2026 | 8:28 AM

ವಾರಾಣಸಿ, ಮಾರ್ಚ್​ 30: ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ(IndiGo)  ವಿಮಾನದಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆರೆಯಲು ಯತ್ನಿಸಿರುವ ಘಟನೆ ನಡೆದಿದೆ. ಒಮ್ಮೆ ವಿಮಾನ ಸಿಬ್ಬಂದಿ ಕೇಳಿದಾಗ ತಿಳೀಲಿಲ್ಲ ಅಂದ, ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಎಂದು ಹೇಳಿದ್ದಾನೆ.6E-185 ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹಾರಾಟದ ಸಮಯದಲ್ಲಿ ಎರಡು ಬಾರಿ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ.

ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ, ಪ್ರಯಾಣಿಕನನ್ನು ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ವರದಿಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ನಂತರ ಅದ್ನಾನ್ ಎಂಬ ವ್ಯಕ್ತಿ ಮೊದಲು ತುರ್ತು ಬಾಗಿಲನ್ನು ತಿದ್ದಲು ಪ್ರಯತ್ನಿಸಿದ್ದ. ಕ್ಯಾಬಿನ್ ಸಿಬ್ಬಂದಿ ತಕ್ಷಣ ಅವನನ್ನು ತಡೆದು ಎಚ್ಚರಿಸಿದ್ದರು, ನಂತರ ಅವನು ಸ್ವಲ್ಪ ಸಮಯದವರೆಗೆ ಶಾಂತನಾಗಿದ್ದ.

ಆದರೆ ರಾತ್ರಿ 10.20 ರ ಸುಮಾರಿಗೆ, ವಿಮಾನವು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಅರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಸುಮಾರು 500 ಅಡಿ ಎತ್ತರದಲ್ಲಿ ಇಳಿಯುವ ಹಂತದಲ್ಲಿದ್ದಾಗ ಅದ್ನಾನ್ ಮತ್ತೆ ಎಕ್ಸಿಟ್ ಡೋರ್ ತೆರೆಯಲು ಪ್ರಯತ್ನಿಸಿದ್ದಾನೆ. ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ, ಪೈಲಟ್ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಿದರು, ಸುತ್ತಾಟ ನಡೆಸಿದರು ಮತ್ತು ಬೆಳಗ್ಗೆ 10. 35 ಕ್ಕೆ ವಿಮಾನವನ್ನು ಮತ್ತೆ ಸುರಕ್ಷಿತವಾಗಿ ಇಳಿಸಿದ್ದಾರೆ.

ಮತ್ತಷ್ಟು ಓದಿ: ನಾಳೆಯಿಂದ ವಿಮಾನ ಪ್ರಯಾಣ ದುಬಾರಿ; ಇಂಧನದ ಬೆಲೆ ಹೆಚ್ಚಾಗಿದ್ದರಿಂದ ಟಿಕೆಟ್ ದರ ಏರಿಸಿದ ಇಂಡಿಗೋ

ಈ ಘಟನೆಯು ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತ್ತು. ಆದರೆ ಎಲ್ಲರೂ ಸುರಕ್ಷಿತವಾಗಿ ಇಳಿಸಿದ್ದಕ್ಕಾಗಿ ಸಿಬ್ಬಂದಿಯನ್ನು ಶ್ಲಾಘಿಸಿದರು.ನಿಯಮಗಳ ಪ್ರಕಾರ, ಆರೋಪಿ ಪ್ರಯಾಣಿಕನನ್ನು ತಕ್ಷಣವೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ನಡೆಸಿದ ವಿಚಾರಣೆಯ ಸಮಯದಲ್ಲಿ, ಅದ್ನಾನ್ ಆರಂಭದಲ್ಲಿ ತಾನು ಏಕೆ ಹಾಗೆ ವರ್ತಿಸಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾನೆ, ಬಳಿಕ ನಗೆ ದೆವ್ವ ಹಿಡಿದಿದೆ ಎಂದಿದ್ದಾನೆ.

ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ತಾನು ಗೋವಾದಲ್ಲಿ ರಜೆ ಮುಗಿಸಿ ಹಿಂತಿರುಗುತ್ತಿದ್ದೇನೆ.ತಾನು ಎಳೆದ ಹ್ಯಾಂಡಲ್ ತುರ್ತು ನಿರ್ಗಮನ ಬಾಗಿಲಿನದ್ದು ಎಂದು ತಿಳಿದಿರಲಿಲ್ಲ ಎಂದಿದ್ದಾರೆ. ನಮ್ಮ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಇನ್ನೂ ಪ್ರಶ್ನಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:24 am, Mon, 30 March 26

Follow Us