AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾನ್‌ ಹೈ ತೋ ಜಹಾನ್‌ ಹೈ ಎಂದ ಮೋದಿ ಲಾಕ್​ಡೌನ್ ಸಡಿಲಿಕೆಗೆ ಮುಂದಾಗಿದ್ದೇಕೆ?

ದೆಹಲಿ: ದೇಶದಲ್ಲಿ ಮೇ 17ರವರೆಗೂ ಲಾಕ್​ಡೌನ್ ಇದೆ. ಆದ್ರೆ ನಿನ್ನೆಯಿಂದ್ಲೇ ಲಾಕ್​ಡೌನ್ ಅನ್ನೋದು ಆಲ್​ಮೋಸ್ಟ್ ಸಡಿಲಿಕೆಯಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್​ಡೌನ್​ನ ಭಾಗಶಃ ಸಡಿಲಿಸೋ ತೀರ್ಮಾನ ಕೈಗೊಂಡಿದ್ದಾರೆ. ಮೋದಿ ನಿರ್ಧಾರದ ಹಿಂದೆ ಹತ್ತಾರು ಲೆಕ್ಕಾಚಾರಗಳಿವೆ. ಆ ನಿರ್ಧಾರಗಳೇನು? ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆಗೆ ಏನ್ ಕಾರಣ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ. ಲಾಕ್​​ಡೌನ್ ಸಡಿಲಿಕೆ ಆಯ್ತು ಅಂತಾ ದೇಶದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಭಾರತ ಇನ್ನೂ ಕಿಲ್ಲರ್ ಕೊರೊನಾ ವಿರುದ್ಧ ಗೆದ್ದಿಲ್ಲ. ಆಗಲೇ ಲಾಕ್​ಡೌನ್​ ಸಡಿಲಿಸಿಬಿಟ್ಟಿದ್ದಾರೆ. ಇಷ್ಟು ಬೇಗ […]

ಜಾನ್‌ ಹೈ ತೋ ಜಹಾನ್‌ ಹೈ ಎಂದ ಮೋದಿ ಲಾಕ್​ಡೌನ್ ಸಡಿಲಿಕೆಗೆ ಮುಂದಾಗಿದ್ದೇಕೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 05, 2020 | 8:25 AM

Share

ದೆಹಲಿ: ದೇಶದಲ್ಲಿ ಮೇ 17ರವರೆಗೂ ಲಾಕ್​ಡೌನ್ ಇದೆ. ಆದ್ರೆ ನಿನ್ನೆಯಿಂದ್ಲೇ ಲಾಕ್​ಡೌನ್ ಅನ್ನೋದು ಆಲ್​ಮೋಸ್ಟ್ ಸಡಿಲಿಕೆಯಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್​ಡೌನ್​ನ ಭಾಗಶಃ ಸಡಿಲಿಸೋ ತೀರ್ಮಾನ ಕೈಗೊಂಡಿದ್ದಾರೆ. ಮೋದಿ ನಿರ್ಧಾರದ ಹಿಂದೆ ಹತ್ತಾರು ಲೆಕ್ಕಾಚಾರಗಳಿವೆ. ಆ ನಿರ್ಧಾರಗಳೇನು? ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆಗೆ ಏನ್ ಕಾರಣ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ.

ಲಾಕ್​​ಡೌನ್ ಸಡಿಲಿಕೆ ಆಯ್ತು ಅಂತಾ ದೇಶದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಭಾರತ ಇನ್ನೂ ಕಿಲ್ಲರ್ ಕೊರೊನಾ ವಿರುದ್ಧ ಗೆದ್ದಿಲ್ಲ. ಆಗಲೇ ಲಾಕ್​ಡೌನ್​ ಸಡಿಲಿಸಿಬಿಟ್ಟಿದ್ದಾರೆ. ಇಷ್ಟು ಬೇಗ ಲಾಕ್​ಡೌನ್ ಸಡಿಲಿಕೆ ಮಾಡೋಕೆ ಕಾರಣವೇನು ಅನ್ನೋದೇ ಹಲವ್ರ ಪ್ರಶ್ನೆಯಾಗಿದೆ.

ಆರ್ಥಿಕತೆ ಚೇತರಿಕೆಗಾಗಿ ಪ್ರಧಾನಿ ಮೋದಿ ಪ್ಲ್ಯಾನ್! ಲಾಕ್‌ಡೌನ್‌ ಸಡಿಲಿಕೆಗೆ ಆರ್ಥಿಕತೆ ಚೇತರಿಕೆಯೇ ಪ್ರಮುಖ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ, ಜಾನ್‌ ಹೈ ತೋ ಜಹಾನ್‌ ಹೈ ಎಂದಿದ್ದ ಮೋದಿ, ಇದ್ದಕ್ಕಿದ್ದಂತೆ ರಿಸ್ಕಿ ನಿರ್ಧಾರ ಕೈಗೊಳ್ಳೋಕೆ ಪ್ರಮುಖ ಕಾರಣವೇ, ಗುಣಮುಖರಾಗ್ತಿರೋರ ಸಂಖ್ಯೆ. ಅದು ಹೇಗೆ ಅಂದ್ರೆ..

‘ಲಾಕ್’ ಸಡಿಲಿಕೆಗೆ ಕಾರಣಗಳೇನು? ದೇಶದಲ್ಲಿ ಕೊರೊನಾದಿಂದ ಶೇ.27.5ರಷ್ಟು ಮಂದಿ ಗುಣಮುಖರಾದ್ರೆ, ಕರ್ನಾಟಕದಲ್ಲಿ 651 ಸೋಂಕಿತರ ಪೈಕಿ 321 ಮಂದಿ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ ಮೇ ಅಂತ್ಯದೊಳಗೆ ಶೇ.50ರಷ್ಟು ಸೋಂಕಿತರು ಗುಣಮುಖರಾಗುವ ಭರವಸೆ ಇದ್ದು, ಇನ್ನುಳಿದವ್ರು ಗುಣಮುಖರಾಗಲು ಜೂನ್​ವರೆಗೂ ಕಾಲಾವಕಾಶ ಬೇಕಾಗಬಹುದು.

ಇದಿಷ್ಟೇ ಅಲ್ಲದೆ ಕೊರೊನಾ ಸೋಂಕಿತರಲ್ಲಿ ಶೇ.3.2ರಷ್ಟು ಮಂದಿ ಮಾತ್ರ ಸಾವಿಗೀಡಾಗಿದ್ದಾರೆ. ಇದು ಇಡೀ ವಿಶ್ವಕ್ಕೆ ಹೋಲಿಸಿದ್ರೆ ಕಡಿಮೆ ಸಾವಿನ ಪ್ರಮಾಣವಾಗಿದೆ. ಇನ್ನು ಕೊರೊನಾ ಪಾಸಿಟಿವ್ ಕೇಸ್ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಜೊತೆಗೆ ರೆಡ್ ಜೋನ್​ಗಳಲ್ಲಿ ದೊಡ್ಡ ಕೈಗಾರಿಕೆ, ಮಧ್ಯಮ & ಸಣ್ಣ ಕೈಗಾರಿಕೆಗಳಿದ್ದು, ಇಲ್ಲೇ ಹೆಚ್ಚು ಆರ್ಥಿಕ ವ್ಯವಹಾರ ನಡೆಯುತ್ತದೆ. ಹೀಗಾಗಿ ಕಂಟೇನ್ಮೆಂಟ್ ಜೋನ್​ಗಳನ್ನ ಮಾತ್ರ ಬಿಟ್ಟು ರೆಡ್ ಜೋನ್​ಗಳಲ್ಲೂ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆ.

ಈ 42ದಿನಗಳ ಲಾಕ್​ಡೌನ್ ದೇಶವನ್ನೇ ಅಲ್ಲಕಲ್ಲೋಲ ಮಾಡಿದೆ. ಆರ್ಥಿಕತೆಯ ಅಧಃಪತನವಾಗಿದೆ. ಲಕ್ಷಾಂತರ ನೌಕರರನ್ನ ಬೀದಿಗೆ ತಂದು ನಿಲ್ಲಿಸಿದೆ. ಸಾವಿರಾರು ಮಂದಿಯನ್ನ ಹಸಿವಿನಿಂದ ಕಂಗೆಡಿಸಿದೆ. ಹೀಗೆ ಒಂದಾ.. ಎರಡಾ.. ಹತ್ತಾರು ಸಮಸ್ಯೆಗಳ ಸುಳಿ ದೇಶದ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಸಂದಿಗ್ಧತೆಯ ಸಂಕೋಲೆಯಲ್ಲಿ ಸಿಲುಕಿಸಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್​​ಡೌನ್​ಗೆ ಭಾಗಶಃ ರಿಲೀಫ್ ಕೊಟ್ಟಿದೆ. ಕೋಮಾಗೆ ಜಾರಿರೋ ದೇಶದ ಆರ್ಥಿಕತೆಯನ್ನ ಮೇಲೆತ್ತಲು ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ.

Published On - 8:22 am, Tue, 5 May 20

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ