AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Nath Kovind: ಐಷಾರಾಮಿ ಬಂಗಲೆ, 1.5 ಲಕ್ಷ ರೂ. ಪೆನ್ಷನ್; ನಿವೃತ್ತರಾದ ರಾಷ್ಟ್ರಪತಿಗೆ ಏನೆಲ್ಲ ಸೌಲಭ್ಯ ಸಿಗುತ್ತೆ ಗೊತ್ತಾ?

ನಿವೃತ್ತರಾಗುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೊಸ ನಿವಾಸವು ಟೈಪ್-8 ಬಂಗಲೆಯಾಗಿದ್ದು, 7 ಕೊಠಡಿಗಳಿವೆ. ಇದರಲ್ಲಿ ಮನೆಕೆಲಸದವರಿಗೆ 1 ಪ್ರತ್ಯೇಕ ಕ್ವಾರ್ಟರ್ ಕೂಡ ಇರಲಿದೆ.

Ram Nath Kovind: ಐಷಾರಾಮಿ ಬಂಗಲೆ, 1.5 ಲಕ್ಷ ರೂ. ಪೆನ್ಷನ್; ನಿವೃತ್ತರಾದ ರಾಷ್ಟ್ರಪತಿಗೆ ಏನೆಲ್ಲ ಸೌಲಭ್ಯ ಸಿಗುತ್ತೆ ಗೊತ್ತಾ?
ರಾಮನಾಥ್ ಕೋವಿಂದ್
TV9 Web
| Updated By: ಸುಷ್ಮಾ ಚಕ್ರೆ|

Updated on:Jul 22, 2022 | 2:30 PM

Share

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ram Nath Kovind) ಜುಲೈ 24ರಂದು ನಿವೃತ್ತರಾಗಲಿದ್ದಾರೆ. ಈಗಾಗಲೇ ಅವರ ಸ್ಥಾನಕ್ಕೆ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು (Droupadi Murmu) ಆಯ್ಕೆಯಾಗಿದ್ದಾರೆ. ನಿವೃತ್ತರಾಗಲಿರುವ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi)  ಔತಣಕೂಟ ನೀಡಲಿದ್ದಾರೆ. ಭಾರತ ದೇಶದ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಉಚಿತ ವೈದ್ಯಕೀಯ, ವಸತಿ ಮತ್ತು ಪ್ರಯಾಣದ ಸೌಲಭ್ಯಗಳ ಜೊತೆಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಡೆದಿದ್ದರು. ಇವುಗಳಲ್ಲಿ ಅನೇಕ ಸವಲತ್ತುಗಳು ರಾಮನಾಥ್ ಕೋವಿಂದ್ ಅವರ ನಿವೃತ್ತಿಯ ನಂತರವೂ ಮುಂದುವರಿಯುತ್ತವೆ.

ನಿವೃತ್ತಿಯ ನಂತರ ಮಾಜಿ ರಾಷ್ಟ್ರಪತಿಗಳಿಗೆ ನೀಡಲಾಗುವ ಸೌಲಭ್ಯಗಳ ಪಟ್ಟಿ ಇಲ್ಲಿದೆ: ಬಂಗಲೆ: ನಿವೃತ್ತಿಯ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 12 ಜನಪಥ್‌ನಲ್ಲಿ ವಾಸವಾಗಲಿದ್ದಾರೆ. ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಈ ಬಂಗಲೆಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸವಾದ 10 ಜನಪಥ್ ಪಕ್ಕದಲ್ಲಿಯೇ ಇದೆ. ಜುಲೈ 25ರಂದು ರಾಮನಾಥ್ ಕೋವಿಂದ್ ಈ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.

ನಿವೃತ್ತರಾಗುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೊಸ ನಿವಾಸವು ಟೈಪ್-8 ಬಂಗಲೆಯಾಗಿದ್ದು, 7 ಕೊಠಡಿಗಳಿವೆ. ಇದರಲ್ಲಿ ಮನೆಕೆಲಸದವರಿಗೆ 1 ಪ್ರತ್ಯೇಕ ಕ್ವಾರ್ಟರ್ ಕೂಡ ಇರಲಿದೆ. ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಾಯುವವರೆಗೂ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು. ನಂತರ ಅದನ್ನು ಅವರ ಮಗ ಚಿರಾಗ್ ಪಾಸ್ವಾನ್ ಆಕ್ರಮಿಸಿಕೊಂಡಿದ್ದರು. ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಅವರು ಆ ಬಂಗಲೆಯನ್ನು ತೆರವುಗೊಳಿಸಬೇಕಾಯಿತು. ನಂತರ ಅದನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನೀಡಲಾಯಿತು. ಆದರೆ ಅವರು ಆ ಬಂಗಲೆಗೆ ಶಿಫ್ಟ್​ ಆಗಲಿಲ್ಲ.

ಇದನ್ನೂ ಓದಿ: ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು

ಪಿಂಚಣಿ: ರಾಷ್ಟ್ರಪತಿಗಳ ವೇತನ ಮತ್ತು ಪಿಂಚಣಿ (ತಿದ್ದುಪಡಿ) ಕಾಯಿದೆ, 2008ರ ಪ್ರಕಾರ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿವೃತ್ತಿಯ ನಂತರ 1.5 ಲಕ್ಷ ರೂ. ಪೆನ್ಷನ್ ಪಡೆಯುತ್ತಾರೆ. 2008ರ ತಿದ್ದುಪಡಿಗೂ ಮುನ್ನ ಪಿಂಚಣಿ ಮೊತ್ತ 50,000 ರೂ. ಇತ್ತು. ಈಗ ಇನ್ನೂ 1 ಲಕ್ಷ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗಿದೆ.

ಇತರೆ ಸೌಲಭ್ಯಗಳು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡು ಲ್ಯಾಂಡ್​​ಲೈನ್​ಗಳು, ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ, ಉಚಿತ ವಿದ್ಯುತ್ ಮತ್ತು ನೀರು ಒದಗಿಸಲಾಗುವುದು. ಕಾರು ಮತ್ತು ಕಾರಿನ ಚಾಲಕನ ಸೇವೆಯನ್ನು ಅವರಿಗೆ ಒದಗಿಸಲಾಗುವುದು. ಅವರಿಗೆ ಇಬ್ಬರು ಕಾರ್ಯದರ್ಶಿಗಳು ಮತ್ತು ದೆಹಲಿ ಪೊಲೀಸರ ಭದ್ರತೆಯೂ ಸಿಗಲಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿವೃತ್ತಿಯ ನಂತರವೂ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರೆ. ಅವರ ಪ್ರಯಾಣಕ್ಕಾಗಿ ಉಚಿತ ಪ್ರಥಮ ದರ್ಜೆ ರೈಲು ಟಿಕೆಟ್ ಮತ್ತು ವಿಮಾನ ಟಿಕೆಟ್ ಅನ್ನು ಸಹ ಪಡೆಯಬಹುದು.

Published On - 2:30 pm, Fri, 22 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ