ಭಾರತದ ಯುಪಿಐ ಪಾವತಿ ವ್ಯವಸ್ಥೆ ಅಳವಡಿಕೆಗೆ ಮುಂದಾದ ಜಪಾನ್; ಧನ್ಯವಾದ ಹೇಳಿದ ಅಶ್ವಿನಿ ವೈಷ್ಣವ್

ಭಾರತೀಯ ಯುಪಿಐ ಪಾವತಿ ವ್ಯವಸ್ಥೆಗೆ ಸೇರುವ ಬಗ್ಗೆ ದೇಶವು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಜಪಾನಿನ ಡಿಜಿಟಲ್ ಸಚಿವ ಕೊನೊ ತಾರೊ ಅಲ್ಲಿನ ಮಾಧ್ಯಮ ‘ವಿಯಾನ್​​’ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತದ ಯುಪಿಐ ಪಾವತಿ ವ್ಯವಸ್ಥೆ ಅಳವಡಿಕೆಗೆ ಮುಂದಾದ ಜಪಾನ್; ಧನ್ಯವಾದ ಹೇಳಿದ ಅಶ್ವಿನಿ ವೈಷ್ಣವ್
ಸಾಂದರ್ಭಿಕ ಚಿತ್ರ

Updated on: May 19, 2023 | 8:35 PM

ನವದೆಹಲಿ: ಜಿ 20, ಎಸ್‌ಸಿಒ ಅಥವಾ ಜಿ7 ಆಗಿರಲಿ, ಪ್ರತಿಯೊಂದು ಜಾಗತಿಕ ವೇದಿಕೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ (Digital India) ದೃಷ್ಟಿಕೋನದತ್ತ ಸೆಳೆತ ಹೊಂದಿವೆ ಎಂದು ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದರು. ಮೋದಿ ಅವರು ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಪ್ರಜಾಪ್ರಭುತ್ವಗೊಳಿಸಿದ್ದಾರೆ ಎಂಬುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ಮೋದಿಯವರ ‘ಡಿಜಿಟಲ್ ಇಂಡಿಯಾ’ದ ದೂರದೃಷ್ಟಿತ್ವದ ದೃಷ್ಟಿಕೋನವನ್ನು ಒಪ್ಪಿಕೊಂಡು ಯುಪಿಐ ಪಾವತಿ ವ್ಯವಸ್ಥೆಯನ್ನು (UPI) ಸ್ವೀಕರಿಸುತ್ತಿರುವುದಕ್ಕೆ ಜಪಾನಿನ ಡಿಜಿಟಲ್ ಸಚಿವ ಕೊನೊ ತಾರೊ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭಾರತದ ಯುಪಿಐ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಜಪಾನಿನ ಡಿಜಿಟಲ್ ಸಚಿವ ಕೊನೊ ತಾರೊ ಅಲ್ಲಿನ ಮಾಧ್ಯಮ ‘ವಿಯಾನ್​​’ಗೆ ನೀಡಿರುವ ಹೇಳಿಕೆಯ ವಿಡಿಯೋ ತುಣುಕನ್ನೂ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಜತೆಗೆ, ಭಾರತವು ಜಗತ್ತಿಗೆ ನೀಡಿದ ಕೊಡುಗೆ ಇದು ಎಂದು ಉಲ್ಲೇಖಿಸಿದ್ದಾರೆ.


ಜಪಾನ್‌ನ ಹಿರೋಷಿಮಾದಲ್ಲಿ ಜಿ7 ಶೃಂಗಸಭೆಗೆ ಮುನ್ನ ಮಾತನಾಡಿದ ಕೊನೊ ತಾರೊ, ಭಾರತೀಯ ಯುಪಿಐ ಪಾವತಿ ವ್ಯವಸ್ಥೆಗೆ ಸೇರುವ ಬಗ್ಗೆ ದೇಶವು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಎರಡೂ ರಾಷ್ಟ್ರಗಳು ತಮ್ಮ ಡಿಜಿಟಲ್ ಸಂಬಂಧಗಳನ್ನು ವಿಸ್ತರಿಸಲು ಸಜ್ಜಾಗಿವೆ. ಯುಪಿಐ ವ್ಯವಸ್ಥೆಯು ಗಡಿಯಾಚೆಗಿನ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PLI scheme: ಮೋದಿ ಸರ್ಕಾರದಿಂದ ಐಟಿ ಕ್ಷೇತ್ರಕ್ಕೆ ಪಿಎಲ್​ಐ ಯೋಜನೆಯಡಿ 17,000 ಕೋಟಿ ರೂ; ಅಶ್ವಿನಿ ವೈಷ್ಣವ್

ಭಾರತೀಯ ಯುಪಿಐ ಪಾವತಿ ವ್ಯವಸ್ಥೆಗೆ ಸೇರಲು ಗಂಭೀರವಾಗಿ ಚಿಂತನೆ ಮಾಡಲಾಗುತ್ತಿದೆ. ಡಿಜಿಟಲ್ ಮಾಹಿತಿಯ ವಿನಿಮಯವನ್ನು ಹೆಚ್ಚಿಸಲು ರಾಷ್ಟ್ರವು ಇ-ಐಡಿಯನ್ನು ಪರಸ್ಪರ ಗುರುತಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಜಪಾನ್ ಸಚಿವರು ಹೇಳಿದ್ದಾರೆ. ಕಳೆದ ತಿಂಗಳು ಸಚಿವ ಅಶ್ವಿನಿ ವೈಷ್ಣವ್ ಭಾಗವಹಿಸಿದ್ದ ಜಿ-7 ಡಿಜಿಟಲ್ ಸಚಿವರ ಸಭೆಯನ್ನು ಪ್ರಸ್ತಾಪಿಸಿದ ಕೊನೊ ತಾರೊ, ಡಿಜಿಟಲ್ ಸಹಕಾರವನ್ನು ಉತ್ತೇಜಿಸಲು ಉಭಯ ದೇಶಗಳು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us