AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kailasagiri Hill: ರಾತ್ರಿಯ ವೇಳೆ ಬೆಳಗಲಿದೆ ಶಿವನ ದಿವ್ಯ ಆಯುಧ; ಕೈಲಾಸಗಿರಿಯ ಮೇಲೆ 2.5 ಕೋಟಿ ವೆಚ್ಚದ ಬೃಹತ್ ತ್ರಿಶೂಲ ನಾಳೆ ಉದ್ಘಾಟನೆ

ಆಂಧ್ರಪ್ರದೇಶದ ವೈಜಾಗ್‌ನ ಕೈಲಾಸಗಿರಿ ಬೆಟ್ಟದಲ್ಲಿ 65 ಅಡಿ ಎತ್ತರದ ಬೃಹತ್ 'ತ್ರಿಶೂಲ' ಸ್ಥಾಪಿಸಲಾಗಿದೆ. ಇದು ವಿಶಾಖಪಟ್ಟಣಂ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆಯಾಗಿದೆ. 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ತ್ರಿಶೂಲ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಫೈಬರ್ ಬಲವರ್ಧಿತ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಇದರ ವಿಶೇಷತೆಯೆಂದರೆ, ವಿಶಾಖಪಟ್ಟಣಂ ನಗರದ ಯಾವುದೇ ಮೂಲೆಯಿಂದ ಕೈಲಾಸಗಿರಿಯತ್ತ ಕಣ್ಣು ಹಾಯಿಸಿದರೂ ಈ ತ್ರಿಶೂಲ ಭವ್ಯವಾಗಿ ಗೋಚರಿಸುತ್ತದೆ.

Kailasagiri Hill: ರಾತ್ರಿಯ ವೇಳೆ ಬೆಳಗಲಿದೆ ಶಿವನ ದಿವ್ಯ ಆಯುಧ; ಕೈಲಾಸಗಿರಿಯ ಮೇಲೆ 2.5 ಕೋಟಿ ವೆಚ್ಚದ ಬೃಹತ್ ತ್ರಿಶೂಲ ನಾಳೆ ಉದ್ಘಾಟನೆ
65 ಅಡಿ ಎತ್ತರದ ಬೃಹತ್‌ ತ್ರಿಶೂಲ
ಅಕ್ಷತಾ ವರ್ಕಾಡಿ
|

Updated on: May 08, 2026 | 6:32 PM

Share

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪ್ರವಾಸೋದ್ಯಮ ಭೂಪಟದಲ್ಲಿ ಕೈಲಾಸಗಿರಿ ಬೆಟ್ಟವು ಈಗಾಗಲೇ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದೀಗ ಈ ಪ್ರಸಿದ್ಧ ತಾಣದ ಮುಕುಟಕ್ಕೆ ಮತ್ತೊಂದು ಸುಂದರ ಗರಿ ಸೇರ್ಪಡೆಯಾಗಿದೆ. ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಲು 65 ಅಡಿ ಎತ್ತರದ ಬೃಹತ್‌ ಮತ್ತು ಅತ್ಯಾಧುನಿಕ ‘ತ್ರಿಶೂಲ‘ ಕೈಲಾಸಗಿರಿಯ ಮೇಲೆ ತಲೆ ಎತ್ತಿ ನಿಂತಿದೆ. ಶನಿವಾರ (ಮೇ 9) ನಡೆಯಲಿರುವ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಸಚಿವ ನಾರಾಯಣ್ ಮತ್ತು ವಿಎಂಆರ್‌ಡಿಎ ಅಧ್ಯಕ್ಷ ಪ್ರಣವ್ ಗೋಪಾಲ್ ಭಾಗವಹಿಸಲಿದ್ದು, ವೈಜಾಗ್ ಪ್ರವಾಸಿಗರಿಗೆ ಈ ವಾರಾಂತ್ಯದಿಂದಲೇ ಹೊಸ ಅನುಭವ ಸಿಗಲಿದೆ.

ವೈಜಾಗ್‌ನ ಹೊಸ ಸಂಕೇತ 65 ಅಡಿಯ ಬೃಹತ್ ತ್ರಿಶೂಲ:

ವಿಶಾಖಪಟ್ಟಣಂ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (VMRDA) ಕೈಲಾಸಗಿರಿ ಬೆಟ್ಟದ ಮೇಲೆ ಈ ಬೃಹತ್ ತ್ರಿಶೂಲವನ್ನು ಸ್ಥಾಪಿಸಿದೆ. ಶಿವ ಮತ್ತು ಪಾರ್ವತಿಯ ವಿಗ್ರಹಗಳ ಪಕ್ಕದಲ್ಲೇ ನಿರ್ಮಾಣವಾಗಿರುವ ಈ ತ್ರಿಶೂಲವು 65 ಅಡಿ ಎತ್ತರವಿದೆ. ಇದರ ವಿಶೇಷತೆಯೆಂದರೆ, ವಿಶಾಖಪಟ್ಟಣಂ ನಗರದ ಯಾವುದೇ ಮೂಲೆಯಿಂದ ಕೈಲಾಸಗಿರಿಯತ್ತ ಕಣ್ಣು ಹಾಯಿಸಿದರೂ ಈ ತ್ರಿಶೂಲ ಭವ್ಯವಾಗಿ ಗೋಚರಿಸುತ್ತದೆ.

2.50 ಕೋಟಿ ರೂ. ವೆಚ್ಚದ ಯೋಜನೆ:

ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಬೃಹತ್ ತ್ರಿಶೂಲದ ವಿನ್ಯಾಸವನ್ನು ಪುಣೆಯಲ್ಲಿ ಸಿದ್ಧಪಡಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಅರೆಪಾರದರ್ಶಕ ಫೈಬರ್ ಬಲವರ್ಧಿತ ಪ್ಲಾಸ್ಟಿಕ್‌ನಿಂದ (Fiber Reinforced Plastic) ಇದನ್ನು ತಯಾರಿಸಲಾಗಿದ್ದು, ಕರಾವಳಿ ತೀರದಲ್ಲಿ ಸಂಭವಿಸುವ ಬಲವಾದ ಗಾಳಿ ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ.

ರಾತ್ರಿಯ ವೇಳೆಯಲ್ಲಿ ಬೆಳಗಲಿದೆ ಶಿವನ ಆಯುಧ:

ಹಗಲಿಗಿಂತಲೂ ರಾತ್ರಿಯ ಸಮಯದಲ್ಲಿ ಈ ತ್ರಿಶೂಲದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತ್ರಿಶೂಲದ ಮೇಲ್ಭಾಗದಲ್ಲಿ 25 ಅಡಿ ಎತ್ತರದ ಗುಮ್ಮಟವಿದ್ದು, ಅದರ ಮೇಲೆ 110 ವ್ಯಾಟ್‌ನ ಶಕ್ತಿಯುತ ಎಲ್‌ಇಡಿ (LED) ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಕಡು ಕತ್ತಲೆಯಲ್ಲಿಯೂ ಬೆಟ್ಟದ ಮೇಲೆ ಬೆಳಗುವ ಈ ತ್ರಿಶೂಲವು ಸಮುದ್ರ ತೀರದ ಪ್ರವಾಸಿಗರಿಗೆ ದಿವ್ಯ ಅನುಭವವನ್ನು ನೀಡಲಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಸೆಲ್ಫಿ ಪ್ರಿಯರಿಗಾಗಿ ವಿಶೇಷ ವೇದಿಕೆ:

ಪ್ರವಾಸಿಗರ ಅನುಕೂಲಕ್ಕಾಗಿ ತ್ರಿಶೂಲದ ಸುತ್ತಲೂ 30 ಅಡಿ ಅಗಲದ ಸುಂದರ ವೇದಿಕೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರವಾಸಿಗರು ಆರಾಮವಾಗಿ ವಿಶ್ರಾಂತಿ ಪಡೆಯಬಹುದು ಮತ್ತು ಸುಂದರವಾದ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು. ವಿಶೇಷವೆಂದರೆ, ಈ ತ್ರಿಶೂಲವನ್ನು ವೀಕ್ಷಿಸಲು ಪ್ರವಾಸಿಗರಿಗೆ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಲಾಗುವುದಿಲ್ಲ, ಇದು ಸಂಪೂರ್ಣ ಉಚಿತವಾಗಿದೆ.

ಕೈಲಾಸಗಿರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ:

ಕೈಲಾಸಗಿರಿಯಲ್ಲಿ ಈಗಾಗಲೇ ರೋಪ್‌ವೇ, ಗಾಜಿನ ಸೇತುವೆ, ಟಾಯ್ ಟ್ರೈನ್ ಮತ್ತು ವಸ್ತುಸಂಗ್ರಹಾಲಯಗಳಂತಹ ಆಕರ್ಷಣೆಗಳಿವೆ. ಈಗ ಸೇರ್ಪಡೆಯಾಗಿರುವ ಈ ತ್ರಿಶೂಲವು ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮ ಎರಡನ್ನೂ ಬೆಸೆಯುವ ಪ್ರಯತ್ನವಾಗಿದೆ. ಪ್ರತಿ ವರ್ಷ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಬೆಟ್ಟಕ್ಕೆ, ಈ ಹೊಸ ಯೋಜನೆಯಿಂದಾಗಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ