AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಕೇರಳದಲ್ಲಿ ಎಲ್ಎನ್​ಜಿ ಇಂಧನವಾಗಿ ಬಳಸುವ ಬಸ್ ಸೇವೆಗೆ ಚಾಲನೆ

LNG Bus: ದಶಕಗಳಿಂದ ನಷ್ಟದಲ್ಲಿ ಸಾಗುತ್ತಿರುವ ಬಸ್ ಕಂಪನಿ, ಪೆಟ್ರೋನೆಟ್ ಎಲ್‌ಎನ್‌ಜಿಯಿಂದ ಎರಡು ಎಲ್‌ಎನ್‌ಜಿ ಚಾಲಿತ ಬಸ್‌ಗಳನ್ನು ಮೂರು ತಿಂಗಳ ಕಾಲ ಗುತ್ತಿಗೆಗೆ ನೀಡಿದೆ. ಅಂತಹ ಬಸ್‌ಗಳನ್ನು ದೀರ್ಘ, ನಗರಗಳೊಳಗೆ ವಾಣಿಜ್ಯಿಕವಾಗಿ ಚಾಲನೆ ಮಾಡುವ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಅಧ್ಯಯನಗಳನ್ನು ನಡೆಸುವ ಉದ್ದೇಶದಿಂದ ರಸ್ತೆಗಿಳಿಸಲಾಗಿದೆ.

KSRTC ಕೇರಳದಲ್ಲಿ ಎಲ್ಎನ್​ಜಿ ಇಂಧನವಾಗಿ ಬಳಸುವ ಬಸ್ ಸೇವೆಗೆ ಚಾಲನೆ
ಎಲ್​ಎನ್​ಜಿ ಬಸ್ (ಕೃಪೆ:ಕೆಎಸ್​ಆರ್​ಟಿಸಿ ನೆಡುಮಂಗಾಡ್ ಫೇಸ್​ಬುಕ್ ಪುಟ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 21, 2021 | 6:49 PM

Share

ತಿರುವನಂತಪುರಂ: ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆಯಲ್ಲಿ ಕೇರಳ ಸೋಮವಾರ ದ್ರವೀಕೃತ ನೈಸರ್ಗಿಕ ಅನಿಲದಿಂದ (liquefied natural gas-LNG) ಚಲಿಸುವ ಮೊದಲ ಸಾರ್ವಜನಿಕ ಬಸ್ ಸೇವೆಗೆ ಚಾಲನೆ ನೀಡಿದೆ. ಸಾರಿಗೆ ಸಚಿವ ಆಂಟನಿ ರಾಜು ಅವರು ತಿರುವನಂತಪುರಂ ಸೆಂಟ್ರಲ್ ಬಸ್ ನಿಲ್ದಾಣದಿಂದ ಹಸಿರು ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಬಸ್ ತಿರುವನಂತಪುರಂ-ಎರ್ನಾಕುಲಂ ಮತ್ತು ಎರ್ನಾಕುಲಂ-ಕೋಯಿಕೋಡ್ ಮಾರ್ಗಗಳಲ್ಲಿ ಚಲಿಸಲಿದೆ.

ಹಣದ ಕೊರತೆಯಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎರಡು ಉದ್ದೇಶಗಳಿಂದ ಈ ಬಸ್ ಗಳಿಗೆ ಚಾಲನೆ ನೀಡಿದೆ. ಅದೇನೆಂದರೆ ಅಗ್ಗದ ಇಂಧನಕ್ಕೆ ಬದಲಾಗುವುದರ ಮೂಲಕ ಹೆಚ್ಚುತ್ತಿರುವ ಕಾರ್ಯಾಚರಣೆಯ ನಷ್ಟವನ್ನು ಕಡಿತಗೊಳಿಸುವುದು ಮತ್ತು ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸಲಾದ ಇಂಧನ ಮೂಲವನ್ನು ಉತ್ತೇಜಿಸುವುದು ಆಗಿದೆ.

ಇದು ಕೆಎಸ್‌ಆರ್‌ಟಿಸಿಯು ತನ್ನ ಸಂಪೂರ್ಣ ಫ್ಲೀಟ್ ಅನ್ನು ಕೂಲಂಕಷವಾಗಿ ಪರಿಶೀಲಿಸುವ, ಪ್ರಸ್ತುತ ಡೀಸೆಲ್‌ನಲ್ಲಿ ಚಾಲನೆಯಲ್ಲಿರುವ ಮತ್ತು ಅವುಗಳನ್ನು ಎಲ್‌ಎನ್‌ಜಿ ಮತ್ತು ಕಂಪ್ರೆಸ್ಡ್ ನೈಸರ್ಗಿಕ ಅನಿಲಕ್ಕೆ (ಸಿಎನ್‌ಜಿ) ಬದಲಾಯಿಸುವ ಯೋಜನೆಗಳ ಒಂದು ಭಾಗವಾಗಿದೆ. ತನ್ನ ಹಳೆಯ ಡೀಸೆಲ್ ಚಾಲಿತ 400 ಬಸ್‌ಗಳನ್ನು ಎಲ್‌ಎನ್‌ಜಿಗೆ ಪರಿವರ್ತಿಸುವ ಯೋಜನೆಯನ್ನು ಕೆಎಸ್‌ಆರ್‌ಟಿಸಿ ಈಗಾಗಲೇ ಪ್ರಕಟಿಸಿದೆ. ದಶಕಗಳಿಂದ ನಷ್ಟದಲ್ಲಿ ಸಾಗುತ್ತಿರುವ ಬಸ್ ಕಂಪನಿ, ಪೆಟ್ರೋನೆಟ್ ಎಲ್‌ಎನ್‌ಜಿಯಿಂದ ಎರಡು ಎಲ್‌ಎನ್‌ಜಿ ಚಾಲಿತ ಬಸ್‌ಗಳನ್ನು ಮೂರು ತಿಂಗಳ ಕಾಲ ಗುತ್ತಿಗೆಗೆ ನೀಡಿದೆ. ಅಂತಹ ಬಸ್‌ಗಳನ್ನು ದೀರ್ಘ, ನಗರಗಳೊಳಗೆ ವಾಣಿಜ್ಯಿಕವಾಗಿ ಚಾಲನೆ ಮಾಡುವ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಅಧ್ಯಯನಗಳನ್ನು ನಡೆಸುವ ಉದ್ದೇಶದಿಂದ ರಸ್ತೆಗಿಳಿಸಲಾಗಿದೆ.

ಹೊಸ ಎಲ್‌ಎನ್‌ಜಿ ಬಸ್ ಸೇವೆಯನ್ನು ಮೊದಲ ಹಂತದಲ್ಲಿ ಪ್ರಮುಖ ನಗರಗಳ ನಡುವೆ ನಡೆಸಲಾಗುವುದು. ಆನಂತರ ಅದರ ಕಾರ್ಯಾಚರಣೆಯ ದಕ್ಷತೆಯನ್ನು ಅಳೆಯಲು ಮುನ್ನಾರ್‌ನಂತಹ ಉನ್ನತ-ಶ್ರೇಣಿಯ ಪ್ರದೇಶಗಳಿಗೆ ಕರೆದೊಯ್ಯಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು.

ಇದನ್ನೂ ಓದಿ: Lakshadweep ಲಕ್ಷದ್ವೀಪ ಹೈಕೋರ್ಟ್ ಕಾನೂನು ವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸಲು ಪ್ರಸ್ತಾಪ ಮುಂದಿಟ್ಟ ಪ್ರಫುಲ್ ಪಟೇಲ್

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್