AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vizhinjam Protest ವಿಝಿಞಂ ಬಂದರು ವಿರುದ್ಧ ನಡೆಯುತ್ತಿದ್ದ ಮುಷ್ಕರ ಹಿಂಪಡೆದ ಹೋರಾಟ ಸಮಿತಿ; ಬಂದರು ನಿರ್ಮಾಣ ನಿಲ್ಲಿಸುವುದಿಲ್ಲ ಎಂದ ಕೇರಳ ಸರ್ಕಾರ

ಮಂಗಳವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ನಡೆದ ಚರ್ಚೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯಕ್ಕೆ ಧರಣಿ ನಿಲ್ಲಿಸುವುದಾಗಿ ಹೋರಾಟ ಸಮಿತಿ ಘೋಷಿಸಿದೆ

Vizhinjam Protest ವಿಝಿಞಂ ಬಂದರು ವಿರುದ್ಧ ನಡೆಯುತ್ತಿದ್ದ ಮುಷ್ಕರ ಹಿಂಪಡೆದ ಹೋರಾಟ ಸಮಿತಿ; ಬಂದರು ನಿರ್ಮಾಣ ನಿಲ್ಲಿಸುವುದಿಲ್ಲ ಎಂದ ಕೇರಳ ಸರ್ಕಾರ
ಪ್ರತಿಭಟನೆಯ ದೃಶ್ಯ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 06, 2022 | 8:49 PM

ತಿರುವನಂತಪುರಂ: ಕೇರಳದ (Kerala) ವಿಝಿಞಂ ಬಂದರಿನ (Vizhinjam port) ವಿರುದ್ಧ ನಡೆದು ಬರುತ್ತಿದ್ದ ಮುಷ್ಕರ ಹಿಂಪಡೆಯಲಾಗಿದೆ. ಮಂಗಳವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಜತೆ ನಡೆದ ಚರ್ಚೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯಕ್ಕೆ ಧರಣಿ ನಿಲ್ಲಿಸುವುದಾಗಿ ಹೋರಾಟ ಸಮಿತಿ ಘೋಷಿಸಿದೆ. ಅದೇ ವೇಳೆ ಬಂದರು ನಿರ್ಮಾಣ ನಿಲ್ಲಿಸುವುದಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ವಿಝಿಞಂ ಬಂದರು ನಿರ್ಮಾಣದ ವಿರುದ್ಧ 138 ದಿನಗಳ ಸುದೀರ್ಘ ಪ್ರತಿಭಟನೆ ಸದ್ಯಕ್ಕೆ ಹಿಂಪಡೆಯಲಾಗಿದೆ ಎಂದು ಆಂದೋಲನದ ನಾಯಕರು ಹೇಳಿದ್ದಾರೆ .ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಲಾಗಿದೆ ಎಂದು ಫಾದರ್ ಯುಜಿನ್ ಪೆರೇರಾ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ. ಜನರಿಗೆ ಕರಾವಳಿ ಸವೆತ ಮತ್ತು ಯೋಜನೆಯ ಪರಿಣಾಮಗಳ ಬಗ್ಗೆ ಸಾಕಷ್ಟು ಅರಿವಿಲ್ಲ. ಅಧ್ಯಯನ ನಡೆಸಿ ಪರಿಣಾಮಗಳನ್ನು ಅರಿತುಕೊಂಡರೆ ಮುಷ್ಕರವನ್ನು ಮುಂದಕ್ಕೆ ಕೊಂಡೊಯ್ಯಲಾಗುವುದು ಎಂದು ಫಾದರ್ ಯುಜೀನ್ ಪೆರೇರಾ ಹೇಳಿದ್ದಾರೆ.

ಮುಷ್ಕರದ 139ನೇ ದಿನದಂದು(ಮಂಗಳವಾರ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಬುಧವಾರ ಅದಾನಿ ಗ್ರೂಪ್ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಲಿದ್ದು, ಅದಕ್ಕಿಂತ ಮುಂಚೆ ಮುಷ್ಕರ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬಂದರು ನಿರ್ಮಾಣ ನಿಲ್ಲಿಸಬೇಕೆಂಬ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಆದರೆ ಮನೆ ಕಳೆದುಕೊಂಡವರಿಗೆ ಸರ್ಕಾರ 5,500 ರೂ.ಬಾಡಿಗೆ ನೀಡಲಿದೆ. ಧರಣಿ ನಿರತರು 8 ಸಾವಿರ ರೂ ನೀಡಬೇಕೆಂದು ಬೇಡಿಕೆಯೊಡ್ಡಿದ್ದಾರೆ. ಅದೇ ವೇಳೆ ಅಧ್ಯಯನ ಸಮಿತಿಯಲ್ಲಿ ಸ್ಥಳೀಯ ಪ್ರತಿನಿಧಿ ಇರಬೇಕೆಂಬ ಬೇಡಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ

ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಮೀನುಗಾರ ಸಮುದಾಯದ ಕಲ್ಯಾಣ ಕ್ರಮಗಳ ಅನುಷ್ಠಾನವನ್ನು ಪರಿಶೀಲಿಸುತ್ತದೆ. ಕರಾವಳಿ ಸವೆತ ನಿರಾಶ್ರಿತರಾದ ಕುಟುಂಬಗಳಿಗೆ ಬಾಡಿಗೆಯನ್ನು 5500 ರೂ.ಗಳಿಂದ ಹೆಚ್ಚಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಹೆಚ್ಚುವರಿಯಾಗಿ 2500 ರೂ.ಗಳನ್ನು ಅದಾನಿ ಗ್ರೂಪ್‌ನ ಸಿಎಸ್‌ಆರ್ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದಾಗ ನಾವು ನಿರಾಕರಿಸಿದ್ದೇವೆ. ತಜ್ಞರ ಸಮಿತಿಯಲ್ಲಿ ಸ್ಥಳೀಯ ಪ್ರತಿನಿಧಿಯನ್ನು ಸೇರಿಸಬೇಕೆಂಬ ಪ್ರತಿಭಟನಾಕಾರರ ಬೇಡಿಕೆಯನ್ನು ಸರ್ಕಾರವೂ ಒಪ್ಪಲಿಲ್ಲ. ಆದಾಗ್ಯೂ, ತಜ್ಞರ ಸಮಿತಿಯು ತಮ್ಮ ಅಭಿಪ್ರಾಯಗಳನ್ನು ಸೇರಿಸಲು ಪ್ರತಿಭಟನಾ ಸಮಿತಿಯನ್ನು ಭೇಟಿ ಮಾಡುತ್ತದೆ. ತಜ್ಞ ಸಮಿತಿಯು ರಚನೆಯಾಗಿ ನಾಲ್ಕು ವಾರಗಳ ನಂತರವೂ ಅದರ ಉಲ್ಲೇಖದ ನಿಯಮಗಳ ಬಗ್ಗೆ ಸರ್ಕಾರ ನಿರ್ಧರಿಸಿಲ್ಲ. ಏತನ್ಮಧ್ಯೆ, ಕರಾವಳಿ ಪ್ರದೇಶದ ಮೇಲೆ ನಿರ್ಮಾಣದ ಪರಿಣಾಮಗಳ ಅಧ್ಯಯನಕ್ಕಾಗಿ ನಾವು ಏಳು ಸದಸ್ಯರ ಸಮಿತಿಯನ್ನು ನೇಮಿಸಿದ್ದೇವೆ ಎಂದು ಫಾದರ್ ಪಿರೇರಾ ಹೇಳಿದರು.

ಇದನ್ನೂ ಓದಿ
Image
ವಿಝಿಞಂ ಬಂದರು ನಿರ್ಮಾಣಕ್ಕೆ ತಡೆಯೊಡ್ಡುವುದು ದೇಶ ವಿರೋಧಿ ಚಟುವಟಿಕೆ: ಕೇರಳ ಸರ್ಕಾರ
Image
ಕೇರಳದ ವಿಝಿಞಂನಲ್ಲಿ ಅದಾನಿ ಬಂದರು ವಿರುದ್ಧ ಪ್ರತಿಭಟನೆ: ಯೋಜನೆ, ಆಕ್ರೋಶ ಮತ್ತು ಈವರೆಗಿನ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಮಾಹಿತಿ
Image
ಸೀಪೋರ್ಟ್ ವಿರೋಧಿ ಪ್ರತಿಭಟನಾಕಾರರಿಂದ ಪೊಲೀಸ್ ಠಾಣೆ ಮೇಲೆ ದಾಳಿ: 29 ಪೊಲೀಸರು ಆಸ್ಪತ್ರೆಗೆ ದಾಖಲು

ಪಾದ್ರಿ ಸೇರಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಪ್ರತಿಭಟನಾ ಸಮಿತಿ ತಿಳಿಸಿದೆ. ಬುಧವಾರ ಬೆಳಿಗ್ಗೆ ಬಂದರಿನ ಮುಂಭಾಗದಲ್ಲಿರುವ ಡೇರೆಗಳನ್ನು ಕೆಡವುವುದಾಗಿ ಲ್ಯಾಟಿನ್ ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರದಂದು ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸುವುದಾಗಿ ಅದಾನಿ ಗ್ರೂಪ್ ತಿಳಿಸಿದೆ.

ಆಂದೋಲನವು ನವೆಂಬರ್ 27 ರಂದು ವಿಝಿಞಂ ಪೊಲೀಸ್ ಠಾಣೆಯ ವಿರುದ್ಧ ಗುಂಪು ದಾಳಿ ಸೇರಿದಂತೆ ಹಲವಾರು ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿದೆ.

ಕರಾವಳಿ ಸವೆತ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಮುಷ್ಕರ ಸಮಿತಿ ಹೇಳಿದೆ. ಮುಷ್ಕರ ಸಮಿತಿಯೊಂದಿಗೆ ಮುಖ್ಯ ಕಾರ್ಯದರ್ಶಿ ಹಾಗೂ ಸಚಿವ ಸಂಪುಟ ಉಪ ಸಮಿತಿ ಚರ್ಚೆ ನಡೆಸಿತು. ಇದಾದ ಬಳಿಕ ಪ್ರತಿಭಟನಾಕಾರರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Tue, 6 December 22

ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್