AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi’s Mission: ಅ.24ರಂದು ಖ್ಯಾತ ಲೇಖಕ ಬೆರ್ಜಿಸ್ ದೇಸಾಯಿ ಬರೆದ ಪುಸ್ತಕ ‘ಮೋದಿಸ್ ಮಿಷನ್’ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಖ್ಯಾತ ಲೇಖಕ ಬರ್ಜಿಸ್ ದೇಸಾಯಿ ಬರೆದಿರುವ ‘ಮೋದಿಸ್ ಮಿಷನ್’ ಎಂಬ ಪುಸ್ತಕ ಅಕ್ಟೋಬರ್ 24ರಂದು ಬಿಡುಗಡೆಗೊಳ್ಳುತ್ತಿದೆ. ಈ ಪುಸ್ತಕವನ್ನು ಅಕ್ಟೋಬರ್ 24ರಂದು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಿಡುಗಡೆ ಮಾಡಲಿದ್ದಾರೆ. ಮೋದಿಸ್ ಮಿಷನ್ ಜೀವನಚರಿತ್ರೆಯಲ್ಲ, ಬದಲಾಗಿ ಒಂದು ಕಲ್ಪನಾತೀತ ಕಥೆ ಎಂದು ಅವರು ವಿವರಿಸಿದ್ದಾರೆ.

Modi’s Mission: ಅ.24ರಂದು ಖ್ಯಾತ ಲೇಖಕ ಬೆರ್ಜಿಸ್ ದೇಸಾಯಿ ಬರೆದ ಪುಸ್ತಕ ‘ಮೋದಿಸ್ ಮಿಷನ್’ ಲೋಕಾರ್ಪಣೆ
ಪುಸ್ತಕ ಮೋದಿಸ್ ಮಿಷನ್
ನಯನಾ ರಾಜೀವ್
|

Updated on: Oct 23, 2025 | 2:13 PM

Share

ನವದೆಹಲಿ, ಅಕ್ಟೋಬರ್ 23: ಖ್ಯಾತ ಲೇಖಕ, ವಕೀಲರಾದ ಬೆರ್ಜಿಸ್ ದೇಸಾಯಿ ಬರೆದಿರುವ ‘ಮೋದಿಸ್ ಮಿಷನ್’ ಎಂಬ ಪುಸ್ತಕವು ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಬಾಲ್ಯದಿಂದ ಹಿಡಿದು ಪ್ರಧಾನಿಯಾಗುವವರೆಗಿನ ಅಸಾಧಾರಣ ಪ್ರಯಾಣವನ್ನು ಕಟ್ಟಿಕೊಡಲಾಗಿದೆ. ಈ ಪುಸ್ತಕವನ್ನು ಅಕ್ಟೋಬರ್ 24ರಂದು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಿಡುಗಡೆ ಮಾಡಲಿದ್ದಾರೆ.

ಮೋದಿಸ್ ಮಿಷನ್ ಜೀವನಚರಿತ್ರೆಯಲ್ಲ. ಹಲವು ಅಡತಡೆಗಳು ಹಾಗೂ ಸವಾಲುಗಳ ಹೊರತಾಗಿಯೂ ಲೇಖಕ ಬೆರ್ಜಿಸ್ ದೇಸಾಯಿ ಈ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಜಾಗೃತಿಯ ಸಾಧನವಾಗಿ ಹೇಗೆ ಬೆಳೆದರು ಎಂಬುದನ್ನು ಸುಂದರವಾಗಿ ವಿವರಿಸಿದ್ದಾರೆ.

ಈ ಪುಸ್ತಕವು ಪ್ರಧಾನಿ ಮೋದಿಯವರ ಬಾಲ್ಯದ ಅನುಭವಗಳನ್ನು ಮತ್ತು ಅವರ ಸಾಮಾಜಿಕ-ಆರ್ಥಿಕ ತತ್ವಶಾಸ್ತ್ರ ಮತ್ತು ಆಡಳಿತದ ವಿಧಾನವನ್ನು ರೂಪಿಸಿದ ಅನುಭವಗಳನ್ನು ತೋರಿಸುತ್ತದೆ. ಪ್ರಧಾನಿ ಮೋದಿಯವರ ಆಡಳಿತದ ದಾರಿ ತಪ್ಪಿಸಲು ಭಾರತದ ಬುದ್ಧಿಜೀವಿಗಳ ಒಂದು ಭಾಗವು ಪ್ರಚಾರ ಮಾಡಿದ ಸುಳ್ಳುಗಳನ್ನು ಈ ಪುಸ್ತಕವು ಬಹಿರಂಗಪಡಿಸುತ್ತದೆ.

ಮತ್ತಷ್ಟು ಓದಿ: ಐಎನ್ಎಸ್ ವಿಕ್ರಾಂತ್‌ನಲ್ಲಿ ಪ್ರಧಾನಿ ಮೋದಿಗಾಗಿ ಆಪರೇಷನ್ ಸಿಂಧೂರ್ ಹಾಡು ಹಾಡಿದ ನೌಕಾಪಡೆಯ ಸಿಬ್ಬಂದಿ

ಪ್ರಧಾನಿ ಮೋದಿಯವರು ಭಾರತದ ಸಾಮೂಹಿಕ ಪ್ರಜ್ಞೆಯನ್ನು ಹೇಗೆ ಹೆಚ್ಚಿಸಿದ್ದಾರೆ ಮತ್ತು ಪಾರದರ್ಶಕ ಮತ್ತು ಫಲಿತಾಂಶ-ಆಧಾರಿತ ಆಡಳಿತವನ್ನು ಹೇಗೆ ಕೊಟ್ಟಿದ್ದಾರೆ ಎಂಬುದನ್ನು ಬೆರ್ಜಿಸ್ ದೇಸಾಯಿ ಬರೆದಿದ್ದಾರೆ.

ಭಾರತೀಯ ಆರ್ಥಿಕತೆಯನ್ನು ಔಪಚಾರಿಕಗೊಳಿಸುವುದರಿಂದ ಹಿಡಿದು 370 ನೇ ವಿಧಿಯನ್ನು ರದ್ದುಗೊಳಿಸುವವರೆಗೆ, ಈ ಪುಸ್ತಕವು ಪ್ರಧಾನಿ ಮೋದಿಯವರ ಸ್ಮರಣೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ರಮಬದ್ಧ ವಿಧಾನವನ್ನು ವಿವರಿಸುತ್ತದೆ.

ಈ ಬರ್ಗಿಸ್ ದೇಸಾಯಿ ಯಾರು? ಲೇಖಕ ಬೆರ್ಜಿಸ್ ದೇಸಾಯಿ ಮುಂಬೈ ಮೂಲದ ವಕೀಲರು. ಅವರು ಪ್ರಮುಖ ಗುಜರಾತಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು. ಅವರು ಭಾರತದ ಪ್ರಮುಖ ಕಾನೂನು ಸಂಸ್ಥೆಗಳಲ್ಲಿ ಒಂದರ ವ್ಯವಸ್ಥಾಪಕ ಪಾಲುದಾರರಾಗಿ ನಿವೃತ್ತರಾದರು. ಅವರು ಪಾರ್ಸಿ ಸಂಸ್ಕೃತಿಯ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಓಹ್! ದೋಸ್ ಪಾರ್ಸಿಸ್ ಮತ್ತು ದಿ ಬವಾಜಿ ಸೇರಿವೆ, ಇವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದವು.

ಆನಂದ್ ಮಹೀಂದ್ರಾ ಅವರ ಪ್ರಶಂಸೆ ಪ್ರಧಾನಿ ನರೇಂದ್ರ ಮೋದಿಯವರ ಉದಯದ ಕುರಿತು ಬೆರ್ಜಿಸ್ ದೇಸಾಯಿ ಬರೆದ ಪುಸ್ತಕವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ 21 ನೇ ಶತಮಾನದ ಅತ್ಯಂತ ಪ್ರಸಿದ್ಧ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಮೇಲಿನ ಅವರ ಸ್ಪಷ್ಟ ಪ್ರೀತಿಯೊಂದಿಗೆ, ಈ ಪುಸ್ತಕವು ಭಾರತವನ್ನು ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ತರಲು ಅವರು ಎಷ್ಟು ಶ್ರಮಿಸಿದ್ದಾರೆ ಎಂಬುದನ್ನು ಹೇಳುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ತೆರೆದ ನಾರಿಯರು!
ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ತೆರೆದ ನಾರಿಯರು!
ಮಾಡಿದ್ದುಣ್ಣೋ ಮಹಾರಾಯ, ಬೆಕ್ಕಿಗೆ ಒದ್ದ ಮಹಿಳೆಗೆ ಏನಾಯ್ತು ನೋಡಿ
ಮಾಡಿದ್ದುಣ್ಣೋ ಮಹಾರಾಯ, ಬೆಕ್ಕಿಗೆ ಒದ್ದ ಮಹಿಳೆಗೆ ಏನಾಯ್ತು ನೋಡಿ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್
ಧೋನಿ ಸ್ಟೈಲ್​​ನಲ್ಲಿ ಸ್ಟಂಪಿಂಗ್; ಸಂಜು-ಕ್ಲಾಸನ್ ಮಧ್ಯೆ ಫುಲ್ ಕಿರಿಕ್
ಧೋನಿ ಸ್ಟೈಲ್​​ನಲ್ಲಿ ಸ್ಟಂಪಿಂಗ್; ಸಂಜು-ಕ್ಲಾಸನ್ ಮಧ್ಯೆ ಫುಲ್ ಕಿರಿಕ್
ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ
ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ
ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?