AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

XE Variant: ವಾಸನೆ ಬರೋದಿಲ್ಲ, ರುಚಿ ತಿಳಿಯೋದಿಲ್ಲ-ಎಕ್ಸ್​​ಇ ಸೋಂಕು ತರುವ ಸಮಸ್ಯೆಗಳಿವು !

ಎಕ್ಸ್​ಇ ಮಾರಣಾಂತಿಕವಲ್ಲ ಎಂದು ಹೇಳಲಾಗಿದ್ದರೂ, ಅದು ತುಂಬ ಸೌಮ್ಯ ಎಂದೂ ಭಾವಿಸಬೇಕಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಲ್ಲೂ ಕೊವಿಡ್​ 19 ಲಸಿಕೆ ಪೂರ್ಣಪ್ರಮಾಣದಲ್ಲಿ ತೆಗೆದುಕೊಂಡವರಿಗೆ ಈ ವೈರಾಣು ಅಷ್ಟೇನೂ ಬಾಧಿಸದು.

XE Variant: ವಾಸನೆ ಬರೋದಿಲ್ಲ, ರುಚಿ ತಿಳಿಯೋದಿಲ್ಲ-ಎಕ್ಸ್​​ಇ ಸೋಂಕು ತರುವ ಸಮಸ್ಯೆಗಳಿವು !
ಸಾಂಕೇತಿಕ ಚಿತ್ರ
TV9 Web
| Edited By: |

Updated on:Apr 10, 2022 | 2:16 PM

Share

ಕೊರೊನಾದ ಒಂದು ರೂಪಾಂತರ ಸ್ವಲ್ಪ ತಗ್ಗುತ್ತಿದೆ ಎನ್ನುವಷ್ಟರಲ್ಲಿ ಮತ್ತೊಂದು ತಳಿ ಧುತ್ತನೆ ಏಳುತ್ತಿದೆ. ಸದ್ಯ ಹೊಸದಾಗಿ ಶುರುವಾಗಿರುವುದು ಎಕ್ಸ್​​ಇ ಎಂಬ ರೂಪಾಂತರಿ ವೈರಾಣು. ಇದು ಕೊರೊನಾದ ತಳಿಗಳಲ್ಲೇ ಅತ್ಯಂತ ಹೆಚ್ಚು ಪ್ರಸರಣ ಸಾಮರ್ಥ್ಯ ಇರುವ ವೈರಸ್ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗೇ, ವಿಶ್ವ ಆರೋಗ್ಯ ಸಂಸ್ಥೆಯೂ ಇದೇ ಎಚ್ಚರಿಕೆಯನ್ನು ನೀಡಿದೆ. ಎಕ್ಸ್​ಇ ವೈರಾಣು, ಒಮಿಕ್ರಾನ್​ಗಿಂತಲೂ ವಿಭಿನ್ನ ಲಕ್ಷಣಗಳನ್ನು ಉಂಟು ಮಾಡುತ್ತದೆ.  ಎಕ್ಸ್​ಇ ಸೋಂಕಿಗೆ ಒಳಗಾದವರು ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅಂದಹಾಗೇ, ಈ ವಾಸನೆ ಮತ್ತು ರುಚಿಯ ಅನುಭವವನ್ನು ಕಳೆದುಕೊಳ್ಳುವುದು ಡೆಲ್ಟಾ ರೂಪಾಂತರಿ ವೈರಾಣುವಿನ ಪ್ರಮುಖ ಲಕ್ಷಣ. 

ಈ ಎಕ್ಸ್​ಇ ವೈರಸ್​ ಭಾರತದಲ್ಲಿ ಮುಂಬೈನಲ್ಲಿ ಮೊದಲು ಕಾಣಿಸಿಕೊಂಡಿತು. ಅದಾದ ಮೇಲೆ ಗುಜರಾತ್​​ನಲ್ಲಿ ಕೂಡ ಒಂದು ಕೇಸ್ ದಾಖಲಾಗಿದೆ. ಅಂದಹಾಗೇ, ಮುಂಬೈನಲ್ಲಿ ಎಕ್ಸ್​ಇ ಕೇಸ್​ ದಾಖಲಾಗಿದ್ದಾಗಿ ಅಲ್ಲಿನ ನಗರಾಡಳಿತ ತಿಳಿಸಿದ್ದರೂ, ಕೇಂದ್ರ ಸರ್ಕಾರ ಅದನ್ನು ದೃಢಪಡಿಸಿಲ್ಲ. ದಾಖಲಾದ ಕೇಸ್​​ನಲ್ಲಿ ಆ ಮಹಿಳೆಯ ರಕ್ತ, ಗಂಟಲು ದ್ರವದ ಮಾದರಿಯನ್ನು ಪುಣೆಗೆ ತಪಾಸಣೆಗೆ ಕಳಿಸಲಾಗಿದ್ದು, ಅದಿನ್ನೂ ವರದಿ ಬರಬೇಕಿದೆ. ಅಲ್ಲಿಯವರೆಗೂ ಅದು ಎಕ್ಸ್​ಇ ಪ್ರಕರಣ ಎಂದು ದೃಢವಾಗಿ ಹೇಳಲಾಗದು ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ಹೇಳಿದೆ.

ಒಮಿಕ್ರಾನ್​ನ ತಳಿಗಳಾದ ಬಿಎ.1 ಮತ್ತು ಬಿಎ.2ಗಳು ಮರುಸಂಯೋಜನೆಗೊಂಡು ಮಾರ್ಪಾಡಾಗಿದ್ದೇ ಈ ಎಕ್ಸ್​ಇ ಹುಟ್ಟಲು ಕಾರಣ. ಇದರ ಬೆಳವಣಿಗೆ ದರ ಬಿಎ.2ಗಿಂತಲೂ ಶೇ.9.8ರಷ್ಟು ಹೆಚ್ಚು. ಇದನ್ನು ಪತ್ತೆ ಹಚ್ಚಲು ತುಸು ಕಷ್ಟವಾಗಿರುವ ಕಾರಣ ರಹಸ್ಯ ಚಲನವಲನ ರೂಪಾಂತರಿ ಎಂದೂ ಕರೆಯಲಾಗುತ್ತದೆ. ಆದರೆ ಇದು ಗಂಭೀರ ಕಾಯಿಲೆಯನ್ನು ಉಂಟು ಮಾಡುವ ವೈರಾಣು ಅಲ್ಲ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. ಜನವರಿ 19ರಂದು ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಎಕ್ಸ್​ಇ ಪತ್ತೆಯಾಯಿತು. ಅದಾದ ಮೇಲೆ ಇಲ್ಲಿಯವರೆಗೆ 600 ಕೇಸ್​ಗಳು ದಾಖಲಾಗಿವೆ. ನ್ಯೂಜಿಲ್ಯಾಂಡ್, ಥೈಲ್ಯಾಂಡ್​ಗಳಲ್ಲೂ ಎಕ್ಸ್​ಇ ಕಾಣಿಸಿಕೊಂಡಿದೆ.  ಡೆಲ್ಟಾ ರೂಪಾಂತರಿಯಿಂದ ಎದ್ದಿದ್ದ ಕೊವಿಡ್​ 19 ಎರಡನೇ ಅಲೆ ವೇಳೆ ಅನೇಕ ಜನರು ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡಿದ್ದರು.  ಅದೇ ರೀತಿ ಅನುಭವ ಎಕ್ಸ್​ಇ ಸೋಂಕಿತರಿಗೂ ಆಗುತ್ತಿದೆ. ಅದರೊಂದಿಗೆ ಸಾಮಾನ್ಯವಾಗಿ ಕೊರೊನಾ ಬಂದಾಗ ಉಂಟಾಗುವ ಜ್ವರ, ಗಂಟಲು ನೋವು, ಗಂಟಲು ತುರಿಕೆ, ಕೆಮ್ಮು, ಶೀತ, ಚರ್ಚ ಕೆಂಪಾಗುವುದು, ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆಯೂ ಕಾಣಿಸಿಕೊಳ್ಳುತ್ತಿದೆ.

ಲಸಿಕೆ ತೆಗೆದುಕೊಂಡಿದ್ರೆ ಸೇಫ್​ !

ಎಕ್ಸ್​ಇ ಮಾರಣಾಂತಿಕವಲ್ಲ ಎಂದು ಹೇಳಲಾಗಿದ್ದರೂ, ಅದು ತುಂಬ ಸೌಮ್ಯ ಎಂದೂ ಭಾವಿಸಬೇಕಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಲ್ಲೂ ಕೊವಿಡ್​ 19 ಲಸಿಕೆ ಪೂರ್ಣಪ್ರಮಾಣದಲ್ಲಿ ತೆಗೆದುಕೊಂಡವರಿಗೆ ಈ ವೈರಾಣು ಅಷ್ಟೇನೂ ಬಾಧಿಸದು. ಎಂದೂ ಭಾರತೀಯ ಆರೋಗ್ಯ ತಜ್ಞರು ಹೇಳಿದ್ದಾರೆ. ಭಾರತದಲ್ಲಿ ಬಹುತೇಕರಿಗೆ ಕೊರೊನಾ ಲಸಿಕೆ ಎರಡೂ ಡೋಸ್ ನೀಡಲಾಗಿದ್ದು, ಸದ್ಯ ಇಂದಿನಿಂದ ಮೂರನೇ ಡೋಸ್​ ನೀಡುವ ಅಭಿಯಾನ ಶುರುವಾಗುತ್ತಿದೆ. ಲಸಿಕೆ ಪೂರ್ತಿ ಪ್ರಮಾಣದಲ್ಲಿ ಪಡೆದವರಿಗೆ ಎಕ್ಸ್​ಇ ಅತ್ಯಂತ ಸೌಮ್ಯವಾಗಿರಲಿದೆ. ಆದರೆ ಲಸಿಕೆ ಪಡೆಯದೆ ಇರುವವರು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು  ವೈದ್ಯ ಭಾಸ್ಕರ್ ನಾರಾಯಣ್​ ಚೌಧರಿ ಹೇಳಿದ್ದಾಗಿ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ

Published On - 1:23 pm, Sun, 10 April 22

Follow Us
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!
ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ
ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ
ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು?
ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು?