Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ

ಆರು ವರ್ಷಗಳ ಹಿಂದೆ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲು ತೊಳೆಯುವುದನ್ನು ಬಿಟ್ಟ ವ್ಯಕ್ತಿಯೊಬ್ಬ ಅದೇ ತನ್ನ ಕೂದಲು ಉದುರುವುದನ್ನು ನಿಲ್ಲಿಸಲು ಕಾರಣವಾಯಿತು ಎಂದು ಹೇಳಿದ್ದಾನೆ.

Shocking News: ತಲೆಕೂದಲು ಉದುರದಂತೆ ತಡೆಯಲು ಈ ವ್ಯಕ್ತಿ ಮಾಡಿದ ಪ್ಲಾನ್ ಏನು ಗೊತ್ತಾ?; ಕೇಳಿದ್ರೆ ಶಾಕ್ ಆಗ್ತೀರ
6 ವರ್ಷದಿಂದ ತಲೆಸ್ನಾನ ಮಾಡದ ನಿಕ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 10, 2022 | 1:06 PM

ಧೂಳು, ರಾಸಾಯನಿಕಯುಕ್ತ ಆಹಾರ, ಒತ್ತಡದ ಜೀವನಶೈಲಿಯಿಂದಾಗಿ ತಲೆಕೂದಲು ಉದುರುವುದು ಸಾಮಾನ್ಯವಾಗಿದೆ. ಕೂದಲು ಉದುರುವುದನ್ನು ನಿಲ್ಲಿಸುವುದು ಹೇಗೆಂಬ ಬಗ್ಗೆ ನೀವೇನಾದರೂ ತಲೆಕೆಡಿಸಿಕೊಂಡಿದ್ದರೆ ಇಲ್ಲೊಬ್ಬ ವ್ಯಕ್ತಿ ಹೊಸ ಉಪಾಯವೊಂದನ್ನು ನೀಡಿದ್ದಾನೆ. ಆದರೆ, ಈ ಉಪಾಯವನ್ನು ಪಾಲಿಸುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಈತ ಕಳೆದ 6 ವರ್ಷಗಳಿಂದ ತಲೆಗೆ ಸ್ನಾನವೇ ಮಾಡಿಲ್ಲವಂತೆ. ಇದೇ ಕಾರಣದಿಂದ ಆತನಿಗೆ ಕೂದಲು ಉದುರುವ ಸಮಸ್ಯೆ ದೂರವಾಗಿದೆಯಂತೆ!

ಆರು ವರ್ಷಗಳ ಹಿಂದೆ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲು ತೊಳೆಯುವುದನ್ನು ಬಿಟ್ಟ ವ್ಯಕ್ತಿಯೊಬ್ಬ ಅದೇ ತನ್ನ ಕೂದಲು ಉದುರುವುದನ್ನು ನಿಲ್ಲಿಸಲು ಕಾರಣವಾಯಿತು ಎಂದು ಹೇಳಿದ್ದಾನೆ. ನಿಕ್ ಕೋಟ್ಜಿ ಎಂಬ ವ್ಯಕ್ತಿ ವಿದ್ಯಾರ್ಥಿಯಾಗಿದ್ದಾಗ ಆತನಿಗೆ ಸಿಕ್ಕಾಪಟ್ಟೆ ಕೂದಲು ಉದುರುತ್ತಿತ್ತು. ಅವನ ಕೂದಲು ಉದುರಲು ಪ್ರಾರಂಭಿಸಿ, ಒಂದುಕಡೆಯಿಂದ ತಲೆ ಬೋಳಾಗತೊಡಗಿತು.

ಈ ಬಗ್ಗೆ ಟಿಕ್​ಟಾಕ್ ವಿಡಿಯೋ ಮಾಡಿರುವ ಆ ವ್ಯಕ್ತಿ ನಾನು 6 ವರ್ಷಗಳ ಹಿಂದೆ ಪ್ರತಿದಿನ ಶಾಂಪೂ ಮತ್ತು ಕಂಡೀಷನಿಂಗ್ ಮಾಡುವ ಮೂಲಕ ದಿನವೂ ತಲೆಸ್ನಾನ ಮಾಡುತ್ತಿದ್ದೆ. ಆದರೆ, ಅದರಿಂದ ಕೂದಲು ಉದುರತೊಡಗಿತು. ಶಾಂಪೂ ಹಾಕಿಕೊಂಡು ಸ್ನಾನ ಮಾಡಿದ್ದಕ್ಕೇ ತಲೆಕೂದಲು ಉದುರುತ್ತಿದೆ ಎಂದು ಭಾವಿಸಿದ ನಿಕ್ ಅಂದಿನಿಂದ ತನ್ನ ಕೂದಲನ್ನು ತೊಳೆಯುವುದನ್ನು ನಿಲ್ಲಿಸಲು ನಿರ್ಧರಿಸಿದನು.

“ಆಶ್ಚರ್ಯಕರವಾಗಿ ನನ್ನ ಕೂದಲು ಸಾಕಷ್ಟು ಆರೋಗ್ಯಕರವಾಗಿದೆ. ಕೂದಲು ಉದುರುವುದು ನಿಂತು, ಬೋಳಾದ ಭಾಗದಲ್ಲಿ ತಲೆಕೂದಲು ಹುಟ್ಟತೊಡಗಿತು ಎಂಬುದು ನನ್ನ ಗಮನಕ್ಕೆ ಬಂದಿದೆ” ಎಂದು ನಿಕ್ ಹೇಳಿದ್ದಾನೆ. “ನೀವು ನಿಮ್ಮ ಕೂದಲನ್ನು ತೊಳೆಯುವುದನ್ನು ನಿಲ್ಲಿಸಿದರೆ ಅದು ಜಿಡ್ಡಿನಿಂದ ಕೂಡುತ್ತದೆ ಎಂದು ನೀವು ಭಾವಿಸಬಹುದು. ಸುಮಾರು ಎರಡು ಅಥವಾ ಮೂರು ವಾರಗಳವರೆಗೆ ತಲೆಕೂದಲಲ್ಲಿ ಜಿಡ್ಡಿನಂಶ ಇರುತ್ತದೆ. ಆದರೆ ಅದರ ನಂತರ ನಿಮ್ಮ ತಲೆಯಲ್ಲಿ ನೈಸರ್ಗಿಕ ತೈಲ ಉತ್ಪತ್ತಿಯಾಗುತ್ತದೆ. ನಂತರ ನಿಮ್ಮ ಕೂದಲನ್ನು ತೊಳೆಯದೆ ಅತ್ಯಂತ ಆರೋಗ್ಯಕರವಾಗಿರಬಹುದು.” ಎಂದು ನಿಕ್ ಹೇಳಿದ್ದಾರೆ.

ಆತನ ಈ ಅಭಿಪ್ರಾಯಕ್ಕೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ತಲೆಸ್ನಾನ ಮಾಡದಿದ್ದರೆ ಕೂದಲು ಆರೋಗ್ಯದಿಂದಿರಲು ಹೇಗೆ ಸಾಧ್ಯ? ಕೂದಲು ಬೆವರಿ ಗಬ್ಬುವಾಸನೆ ಬರುವುದಿಲ್ಲವೇ? ಎಂದು ಕೂಡ ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Hair Care: ಕೂದಲಿಗೆ ಆಲಿವ್ ಎಣ್ಣೆ ಏಕೆ ಒಳ್ಳೆಯದು ಗೊತ್ತಾ..!

Splits Hair: ಸ್ಲ್ಪಿಟ್ ಆಗಿರುವ ಕೂದಲಿಗೆ ಮನೆ ಮದ್ದು ಇಲ್ಲಿದೆ

Published On - 1:05 pm, Sun, 10 April 22

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ