ದಿಗ್ವಿಜಯ್ ಸಿಂಗ್​ಗೆ 1 ವರ್ಷ ಜೈಲು ಶಿಕ್ಷೆ ಘೋಷಿಸಿ ಬಳಿಕ ಜಾಮೀನು ನೀಡಿದ ಇಂದೋರ್ ನ್ಯಾಯಾಲಯ; ಏನಿದು ಪ್ರಕರಣ?

| Updated By: shivaprasad.hs

Updated on: Mar 27, 2022 | 9:26 AM

Madhya Pradesh: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್​ ಮತ್ತು ಇತರ ಆರು ಮಂದಿಗೆ ಇಂದೋರ್​ನ ಜಿಲ್ಲಾ ನ್ಯಾಯಾಲಯವು ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ನಂತರ ನ್ಯಾಯಾಲಯವು ಜಾಮೀನನ್ನೂ ನೀಡಿದೆ. ಏನಿದು ಪ್ರಕರಣ?

ದಿಗ್ವಿಜಯ್ ಸಿಂಗ್​ಗೆ 1 ವರ್ಷ ಜೈಲು ಶಿಕ್ಷೆ ಘೋಷಿಸಿ ಬಳಿಕ ಜಾಮೀನು ನೀಡಿದ ಇಂದೋರ್ ನ್ಯಾಯಾಲಯ; ಏನಿದು ಪ್ರಕರಣ?
ದಿಗ್ವಿಜಯ್ ಸಿಂಗ್
Follow us on

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್​ (Digvijay Singh) ಮತ್ತು ಇತರ ಆರು ಮಂದಿಗೆ ಇಂದೋರ್​ನ ಜಿಲ್ಲಾ ನ್ಯಾಯಾಲಯವು ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ದಿಗ್ವಿಜಯ್ ಸಿಂಗ್ ಪ್ರಸ್ತುತ ರಾಜ್ಯಸಭೆ ಕಾಂಗ್ರೆಸ್ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. 2011 ರಲ್ಲಿ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಪ್ರತಿಭಟನಾ ನಿರತ ಕಾರ್ಯಕರ್ತರೊಂದಿಗೆ ಘರ್ಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಗ್ವಿಜಯ್ ಸಿಂಗ್​ಗೆ ಜೈಲು ಶಿಕ್ಷೆ ವಿಧಿಸಲಾಗಿದ್ದು, ಈ ಬಗ್ಗೆ ನ್ಯಾಯಾಲಯ ಶನಿವಾರ ಆದೇಶ ನೀಡಿದೆ. ನಂತರ ನ್ಯಾಯಾಲಯವು ಎಲ್ಲಾ ಅಪರಾಧಿಗಳಿಗೆ ತಲಾ 25,000 ರೂ.ಗಳ ಶ್ಯೂರಿಟಿಯ ಮೇಲೆ ಜಾಮೀನು ನೀಡಿದೆ. ಈ ಬಗ್ಗೆ ಎಎನ್​ಐ ಜತೆ ಮಾತನಾಡಿದ ದಿಗ್ವಿಜಯ್ ಸಿಂಗ್, ‘‘ಇದು 10 ವರ್ಷಗಳ ಹಳೆಯ ಪ್ರಕರಣವಾಗಿದ್ದು, ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ. ಆದರೆ ರಾಜಕೀಯ ಒತ್ತಡದಿಂದ ನಂತರದಲ್ಲಿ ಹೆಸರನ್ನು ಸೇರಿಸಲಾಗಿದೆ. ನಾನು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ’’ ಎಂದು ಹೇಳಿದ್ದಾರೆ.

ದಿಗ್ವಿಜಯ್ ಮಾತಿನ ಬಗ್ಗೆ ಎಎನ್​ಐ ಟ್ವೀಟ್:

ನ್ಯಾಯಾಧೀಶ ಮುಖೇಶ್ ನಾಥ್ ಅವರು ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಉಜ್ಜಯಿನಿ ಸಂಸದ ಪ್ರೇಮಚಂದ್ ಗುಡ್ಡು ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 109 (ಹಲ್ಲೆಗೆ ಪ್ರಚೋದನೆ) ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಅನಂತ್ ನಾರಾಯಣ್, ಜೈಸಿಂಗ್ ದರ್ಬಾರ್, ಅಸ್ಲಾಂ ಲಾಲಾ ಮತ್ತು ದಿಲೀಪ್ ಚೌಧರಿ ಅವರನ್ನು ಐಪಿಸಿ ಸೆಕ್ಷನ್ 325 ಅಡಿಯಲ್ಲಿ ದೋಷಿಗಳೆಂದು ಘೋಷಿಸಲಾಗಿದೆ.

ಮಹೇಶ್ ಪರ್ಮಾರ್ (ತಾರಾನಾದ ಕಾಂಗ್ರೆಸ್ ಶಾಸಕ), ಮುಖೇಶ್ ಭಾಟಿ ಮತ್ತು ಹೇಮಂತ್ ಚೌಹಾಣ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ನ್ಯಾಯಾಲಯವು ಅಪರಾಧಿಗಳಿಗೆ ತಲಾ 5,000 ರೂ. ದಂಡ ವಿಧಿಸಿದೆ.

ಪೊಲೀಸರ ಪ್ರಕಾರ 2011ರ ಜುಲೈ 17ರಂದು ದಿಗ್ವಿಜಯ್ ಸಿಂಗ್ ಅವರ ಬೆಂಗಾವಲು ಪಡೆ ಉಜ್ಜಯಿನಿಯ ಜಿವಾಜಿಗಂಜ್ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ BJYM ಕಾರ್ಯಕರ್ತರು ಕಪ್ಪು ಬಾವುಟವನ್ನು ತೋರಿಸಲು ಪ್ರಯತ್ನಿಸಿದ್ದರು. ಇದು ಘರ್ಷಣೆಗೆ ಕಾರಣವಾಗಿತ್ತು.

ಇದನ್ನೂ ಓದಿ:

ಉಕ್ರೇನ್​ನ ಮತ್ತೊಂದು ನಗರದ ಮೇಲೆ ರಷ್ಯಾ ಬಾಂಬ್ ದಾಳಿ: ಹೋರಾಟಕ್ಕೆ ಸಿದ್ಧ ಎಂದ ಅಮೆರಿಕ, ಸಂಘರ್ಷಕ್ಕೆ ಮತ್ತೊಂದು ತಿರುವು

ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ; ಹಿಜಾಬ್ ಧರಿಸಿಕೊಂಡು ಬಂದರೆ ಎಕ್ಸಾಂಗೆ ಅವಕಾಶ ಇಲ್ಲ

Published On - 9:24 am, Sun, 27 March 22