AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರ ಫೈಲ್ಸ್​​ನ್ನು ಹೊಗಳಿದ ಮಧ್ಯಪ್ರದೇಶ ಸಿಎಂ; ನರಮೇಧ ನೆನಪಿಸುವ ಮ್ಯೂಸಿಯಂ ನಿರ್ಮಿಸಲು ಜಾಗ ನೀಡುತ್ತೇವೆ ಎಂದ ಚೌಹಾಣ್

"ಇದು ನಮ್ಮ ಕಾಶ್ಮೀರಿ ಪಂಡಿತ್ ಸಹೋದರ ಸಹೋದರಿಯರ ನೋವನ್ನು ಹೊರತರಲು ಒಂದು ದಿಟ್ಟ ಕಾರ್ಯವಾಗಿದೆ, ಅದು ಎಂದಿಗೂ ಪ್ರಪಂಚದ ಮುಂದೆ ಬರಲಿಲ್ಲ. ವಿವೇಕ್ ಅಗ್ನಿಹೋತ್ರಿ ಅವರ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ಚೌಹಾಣ್ ಹೇಳಿದ್ದಾರೆ.

ಕಾಶ್ಮೀರ ಫೈಲ್ಸ್​​ನ್ನು ಹೊಗಳಿದ ಮಧ್ಯಪ್ರದೇಶ ಸಿಎಂ; ನರಮೇಧ ನೆನಪಿಸುವ ಮ್ಯೂಸಿಯಂ ನಿರ್ಮಿಸಲು ಜಾಗ ನೀಡುತ್ತೇವೆ ಎಂದ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
TV9 Web
| Edited By: |

Updated on: Mar 25, 2022 | 9:46 PM

Share

“ದಿ ಕಾಶ್ಮೀರ್ ಫೈಲ್ಸ್” (The Kashmir Files) ಚಲನಚಿತ್ರವು ವಲಸೆ ಹೋದ ಕಾಶ್ಮೀರಿ ಪಂಡಿತ್ ಸಮುದಾಯದ ನೋವು ಮತ್ತು ಸಂಕಟಗಳನ್ನು ತೋರಿಸುತ್ತದೆ ಎಂದು ಹೇಳಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ರಾಜ್ಯದಲ್ಲಿ ನರಮೇಧ ನೆನಪಿಸುವ ಮ್ಯೂಸಿಯಂ (genocide museum) ಸ್ಥಾಪಿಸಲು ತಮ್ಮ ಸರ್ಕಾರವು ಭೂಮಿಯನ್ನು ನೀಡಲಿದೆ ಎಂದು ಶುಕ್ರವಾರ ಹೇಳಿದ್ದಾರೆ. ಚೌಹಾಣ್ ಶುಕ್ರವಾರ ಸ್ಮಾರ್ಟ್ ಸಿಟಿ ಪಾರ್ಕ್‌ನಲ್ಲಿ ಚಿತ್ರದ ಬರಹಗಾರ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಭೋಪಾಲ್‌ನಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತ್ ಸಮುದಾಯದ ಕೆಲವು ಸದಸ್ಯರೊಂದಿಗೆ ಸಸಿಗಳನ್ನು ನೆಟ್ಟರು. ಕಾಶ್ಮೀರದಿಂದ ವಲಸೆ ಹೋದ ಪಂಡಿತ್ ಕುಟುಂಬಗಳ ನೋವು ಮತ್ತು ಸಂಕಟಗಳ ಬಗ್ಗೆ ಚಿತ್ರದ ಮೂಲಕ ಜಗತ್ತಿಗೆ ತಿಳಿಯಿತು. ವಿವೇಕ್ ಅಗ್ನಿಹೋತ್ರಿ ಅವರು ಮಧ್ಯಪ್ರದೇಶದಲ್ಲಿ ನರಮೇಧದ ಮ್ಯೂಸಿಯಂ’ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕಾಗಿ ನಮ್ಮ ಸರ್ಕಾರ ಭೂಮಿ ಮತ್ತು ಅಗತ್ಯ ಸಹಾಯವನ್ನು ನೀಡುತ್ತದೆ ಎಂದು ಚೌಹಾಣ್ ನಂತರ ಸುದ್ದಿಗಾರರಿಗೆ ತಿಳಿಸಿದರು. 1990 ರ ದಶಕದ ಆರಂಭದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸಮುದಾಯವನ್ನು ಗುರಿಯಾಗಿಸಿಕೊಂಡಾಗ ಕಾಶ್ಮೀರದಿಂದ ಕಾಶ್ಮೀರಿ ಪಂಡಿತರ ವಲಸೆ ಸಮಸ್ಯೆಯನ್ನು ತೆರೆ ಮೇಲೆ ತಂದಿದ್ದಕ್ಕಾಗಿ ಅಗ್ನಿಹೋತ್ರಿ ಅವರ “ಧೈರ್ಯ” ವನ್ನು ಚೌಹಾಣ್ ಶ್ಲಾಘಿಸಿದ್ದಾರೆ.

“ಇದು ನಮ್ಮ ಕಾಶ್ಮೀರಿ ಪಂಡಿತ್ ಸಹೋದರ ಸಹೋದರಿಯರ ನೋವನ್ನು ಹೊರತರಲು ಒಂದು ದಿಟ್ಟ ಕಾರ್ಯವಾಗಿದೆ, ಅದು ಎಂದಿಗೂ ಪ್ರಪಂಚದ ಮುಂದೆ ಬರಲಿಲ್ಲ. ವಿವೇಕ್ ಅಗ್ನಿಹೋತ್ರಿ ಅವರ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ಚೌಹಾಣ್ ಹೇಳಿದ್ದಾರೆ.

ಇದಕ್ಕೂ ಮೊದಲು ಅಗ್ನಿಹೋತ್ರಿ ಇಲ್ಲಿ “ನರಮೇಧ ನೆನಪಿಸುವ ಮ್ಯೂಸಿಯಂ” ಸ್ಥಾಪಿಸುವ ಬಗ್ಗೆ ಮಾತನಾಡಿದರು. “ಭಾರತವು ಮಾನವೀಯತೆಯ ಸಂಕೇತವಾಗಿದೆ. ಮಾನವೀಯತೆಯ ಗುರುತಿನ ಮೂಲಕವೇ ನಾವು `ವಿಶ್ವ ಗುರುಗಳಾಗುತ್ತೇವೆ. ಮಧ್ಯಪ್ರದೇಶ ಶಾಂತಿಪ್ರಿಯ ಜನರ ನಾಡು. ಇಲ್ಲಿ ನರಮೇಧದ ಮ್ಯೂಸಿಯಂ ನಿರ್ಮಿಸಲು ಅವಕಾಶ ನೀಡಿದರೆ ಅದು ಇಡೀ ವಿಶ್ವಕ್ಕೆ ಮಾನವೀಯತೆಯ ಪ್ರತೀಕವಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಿದ್ದಕ್ಕಾಗಿ ಚೌಹಾಣ್ ಅವರಿಗೆ ಧನ್ಯವಾದ ಅರ್ಪಿಸುತ್ತಾ, ಅಗ್ನಿಹೋತ್ರಿ, ನಾನು ಭೋಪಾಲ್‌ನವನು. ಚಿತ್ರದಲ್ಲಿ ಕಾಣಿಸಿಕೊಂಡಿರುವ ಅವರ ಪತ್ನಿ ಮತ್ತು ನಟಿ ಪಲ್ಲವಿ ಜೋಶಿ ಇಂದೋರ್‌ಗೆ ಸೇರಿದವರು ಎಂದು ಹೇಳಿದರು.

ಇದನ್ನೂ ಓದಿ: ಯೋಗಿ ಆದಿತ್ಯನಾಥ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ್ದು ಸಮಾಜವಾದಿ ಪಾರ್ಟಿ ನಿರ್ಮಿಸಿದ ಕ್ರೀಡಾಂಗಣದಲ್ಲಿ: ಅಖಿಲೇಶ್ ಯಾದವ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ