ರುದ್ರಾಕ್ಷಿ ಮಾಲೆ ಧರಿಸಿ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮುಸ್ಲಿಂ ವ್ಯಕ್ತಿ

ಸನಾತನ ಧರ್ಮವನ್ನು ನಂಬುವ ಜನರು ಮಹಾ ಕುಂಭದಲ್ಲಿ ನಂಬಿಕೆಯ ಸ್ನಾನ ಮಾಡಲು ಬರುತ್ತಿದ್ದಾರೆ, ಆದರೆ ಇಸ್ಲಾಂ ಧರ್ಮವನ್ನು ನಂಬುವ ಜನರು ಕೂಡ ಕುಂಭಕ್ಕೆ ಬರುತ್ತಿದ್ದಾರೆ. ಅದೇ ರೀತಿ ಸನಾತನ ಸಂಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ಶೇಖ್ ರಫೀಕ್ ಕೂಡ ಒರಿಸ್ಸಾದ ಬಾಳೇಶ್ವರ್ ಜಿಲ್ಲೆಯ ನಿವಾಸಿ ರಫೀಕ್ ಎಂಬುವವರು ಕೂಡ ಬಂದಿದೆ. ತಾವು ಚಹಾ ಕುಡಿಯುತ್ತಿದ್ದ ಟೀ ಅಂಗಡಿಯಲ್ಲಿ ಪ್ರತಿದಿನ ಮಹಾಕುಂಭದ ಮಹಿಮೆಯನ್ನು ಕೇಳುತ್ತಿದ್ದರು ಹಾಗಾಗಿ ಒಂದು ದಿನ ಹೋಗಲೇಬೇಕೆಂದು ನಿರ್ಧರಿಸಿ ಬಂದಿದ್ದಾರೆ.

ರುದ್ರಾಕ್ಷಿ ಮಾಲೆ ಧರಿಸಿ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮುಸ್ಲಿಂ ವ್ಯಕ್ತಿ
ರಫೀಕ್
Image Credit source: ABP Live

Updated on: Jan 22, 2025 | 10:38 AM

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಮಹಾಕುಂಭ ಮೇಳ ಆರಂಭಗೊಂಡಿದೆ. ಇಲ್ಲಿಯವರೆಗೆ 8.5 ಕೋಟಿಗೂ ಹೆಚ್ಚು ಜನರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಸನಾತನ ಧರ್ಮದಲ್ಲಿ ನಂಬಿಕೆಯಿರುವ ಜನರು ಕುಂಭಕ್ಕೆ ಬರುತ್ತಿದ್ದಾರೆ. ಮಹಾಕುಂಭದಲ್ಲಿ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಲಾಗಿದೆ, ಆದರೂ ಜನರು ಅಲ್ಲಿಗೆ ಬಂದು ಸ್ನಾನ ಮಾಡುತ್ತಿದ್ದಾರೆ. ಶೇಖ್ ರಫೀಕ್ ಕೂಡ ಒಡಿಶಾದಿಂದ ಮಹಾ ಕುಂಭಕ್ಕೆಂದು ಆಗಮಿಸಿದ್ದಾರೆ.

ನಾನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ನಿವಾಸಿ ಎಂದು ಶೇಖ್ ರಫೀಕ್ ಹೇಳಿದ್ದಾರೆ. ನಾನು ಪ್ರತಿದಿನ ಬೆಳಿಗ್ಗೆ ಟೀ ಸ್ಟಾಲ್‌ನಲ್ಲಿ ಮಹಾ ಕುಂಭದ ಬಗ್ಗೆ ಕೇಳುತ್ತಿದ್ದೆ. ಅದರ ಮಹಿಮೆಯನ್ನು ಕೇಳಿ ತಡೆದುಕೊಳ್ಳಲಾಗದೆ ಹೋಗಲೇಬೇಕು ಎಂದು ನಿರ್ಧರಿಸಿದೆ. ಮನೆಯವರೊಂದಿಗೆ ಮಾತನಾಡಿ ಮಹಾ ಕುಂಭ ತಲುಪಿದೆ.

ಮಹಾಕುಂಭಕ್ಕೆ ಮುಸ್ಲಿಮರು ಬರುವಂತಿಲ್ಲ ಎಂದು ಈ ಜನರು ಹೇಳಿದ್ದರು, ಈ ಬಗ್ಗೆ ರಫೀಕ್ ದೇವರು ಒಬ್ಬನೇ, ಹಾಗಾಗಿ ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿಗೆ ಬಂದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದರು.
ರಫೀಕ್ ಅವರು ಸಂತರಿಂದ ಆಶೀರ್ವಾದ ಪಡೆಯುತ್ತಿದ್ದಾರೆ ಎಂದು ಹೇಳಿದರು. ಕಳೆದ ಮೂರು ದಿನಗಳಿಂದ ತ್ರಿವೇಣಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಜನರ ಕೊರಳಲ್ಲಿ ರುದ್ರಾಕ್ಷಿ ಮಣಿಗಳನ್ನು ಕಂಡಾಗ ನಾನೇ ಒಂದನ್ನು ಖರೀದಿಸಿ ಧರಿಸಿದ್ದೇನೆ.

ಮತ್ತಷ್ಟು ಓದಿ: Mahakumbh 2025: ಮಹಾಕುಂಭ ಮೊದಲ ಬಾರಿ ನಡೆದಿದ್ದು ಎಲ್ಲಿ ಮತ್ತು ಯಾವಾಗ?

ಇನ್ನು ಒಂದೋ ಎರಡೋ ದಿನ ಇದ್ದು ಬಿಡುತ್ತೇನೆ. ನಾನು ಇಲ್ಲಿ ಆನಂದವನ್ನು ಕಂಡುಕೊಂಡಿದ್ದೇನೆ, ಆದ್ದರಿಂದ ನಾನು ಕಳೆದ ಮೂರು ದಿನಗಳಿಂದ ಇಲ್ಲಿಯೇ ಕುಳಿತಿದ್ದೇನೆ. ಶೇಖ್ ರಫೀಕ್ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದಾರೆ. ಮನೆಯವರೆಲ್ಲ ಸೇರಿ ಬರಬೇಕೆಂದಿದ್ದರೂ ಮಗಳು ಚಿಕ್ಕವಳಾದ ಕಾರಣ ಚಳಿಯಿಂದಾಗಿ ಬರಲಾಗಲಿಲ್ಲ. ಸಿಎಂ ಯೋಗಿ ಎಲ್ಲಾ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us