AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra: ತನ್ನನ್ನು ತಾನು ಮಣ್ಣಿನಲ್ಲಿ ಹೂತುಕೊಂಡು ವಿಚಿತ್ರವಾಗಿ ಪ್ರತಿಭಟನೆ ಮಾಡಿದ ರೈತ

ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಿರುವುದನ್ನು ವಿರೋಧಿಸಿ ರೈತರೊಬ್ಬರು ಮಣ್ಣಿನಲ್ಲಿ ಭಾಗಶಃ ತನ್ನನ್ನು ತಾನು ಮಣ್ಣಿನಲ್ಲಿ ಸಮಾಧಿ ಮಾಡಿಕೊಂಡು ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಾರೆ.

Maharashtra: ತನ್ನನ್ನು ತಾನು ಮಣ್ಣಿನಲ್ಲಿ ಹೂತುಕೊಂಡು ವಿಚಿತ್ರವಾಗಿ ಪ್ರತಿಭಟನೆ ಮಾಡಿದ ರೈತ
ತನ್ನನ್ನು ತಾನು ಮಣ್ಣಿನಲ್ಲಿ ಸಮಾಧಿ ಮಾಡಿಕೊಂಡು ವಿಚಿತ್ರವಾಗಿ ಪ್ರತಿಭಟನೆ ಮಾಡಿದ ರೈತ
TV9 Web
| Edited By: |

Updated on:Jan 03, 2023 | 5:53 PM

Share

ಜಲ್ನಾ: ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ (Maharashtra) ಕಲ್ಯಾಣ ಯೋಜನೆಯಡಿ ಮಂಜೂರು ಮಾಡಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಿರುವುದನ್ನು ವಿರೋಧಿಸಿ ರೈತರೊಬ್ಬರು ಮಣ್ಣಿನಲ್ಲಿ ಭಾಗಶಃ ತನ್ನನ್ನು ತಾನು ಮಣ್ಣಿನಲ್ಲಿ ಹೂತುಕೊಂಡು ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಾರೆ. ಜಲ್ನಾ ಜಿಲ್ಲೆಯ ನಿವಾಸಿ ಸುನಿಲ್ ಜಾಧವ್ ಅವರಿಗೆ 2019 ರಲ್ಲಿ ಕರ್ಮವೀರ್ ದಾದಾಸಾಹೇಬ್ ಗಾಯಕ್ವಾಡ್ ಸಬ್ಲಿಕರಣ್ ಸ್ವಾಭಿಮಾನ್ ಯೋಜನೆಯಡಿ ಭೂಮಿ ಮಂಜೂರು ಮಾಡಲಾಗಿತ್ತು.

ದಾದಾಸಾಹೇಬ್ ಗಾಯಕವಾಡ ಯೋಜನೆಯಡಿ 2019ರಲ್ಲಿ ನಮಗೆ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಇನ್ನೂ ನಮ್ಮ ಕೈಗೆ ಕಾಗದಪತ್ರಗಳು ಬಂದಿಲ್ಲ. ಹೀಗಾಗಿ ನಾನೇ ಸಮಾಧಿ ಆಗುವೇ ಎಂದು ರೈತ ಹೇಳಿದರು. ಜಮೀನು ಸ್ವಾಧೀನ ಪಡಿಸಿಕೊಳ್ಳುವವರೆಗೂ ಪ್ರತಿಭಟನೆ ಕೈಬಿಡಲು ನಿರಾಕರಿಸಿದರು.

ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಮತ್ತು ಜನರ ಮುಂದೆ ಇಡಲು ಆಗಾಗ್ಗೆ ಇಂತಹ ವಿನೂತನ ವಿಚಾರಗಳನ್ನು ಆಶ್ರಯಿಸುತ್ತಾರೆ. ಎರಡು ವರ್ಷಗಳ ಹಿಂದೆ ದೆಹಲಿಯ ಗಡಿಯಲ್ಲಿ ಕೇಂದ್ರವು ಈಗ ಹಿಂಪಡೆದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ, ರೈತರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ವಿನೂತವಾಗಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನು ಓದಿ:Farmers Protest ದೆಹಲಿಯ ಜಂತರ್​​ ಮಂತರ್​​ನಲ್ಲಿ ಮಹಾ ಪಂಚಾಯತ್; ರೈತರ ಬೇಡಿಕೆಗಳು ಏನು?

ಈ ವರ್ಷದ ಆರಂಭದಲ್ಲಿ ಕೇರಳದಲ್ಲಿ ಗುಂಡಿಗಳನ್ನು ವಿರೋಧಿಸಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನೀರು ತುಂಬಿದ ಹಳ್ಳದಲ್ಲಿ ಸ್ನಾನ ಮಾಡಿದರು. ಕಳೆದ ವರ್ಷ, ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ತಮ್ಮ ಸಹೋದ್ಯೋಗಿಯೊಬ್ಬರ ಮೇಲೆ ಸೀಲಿಂಗ್ ಫ್ಯಾನ್ ಬಿದ್ದ ನಂತರ, ಸಾಂಕೇತಿಕ ಪ್ರತಿಭಟನೆಯಲ್ಲಿ, ಜೂನಿಯರ್ ವೈದ್ಯರು ಹೆಲ್ಮೆಟ್ ಧರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Tue, 3 January 23