AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪು ಸುಲ್ತಾನನನ್ನು ಸಮಾಧಿಯಿಂದ ಮತ್ತೆ ಜೀವಂತಗೊಳಿಸಲಾಗುತ್ತಿದೆ: ಬಿಜೆಪಿ ವಿರುದ್ಧ ಶಿವಸೇನೆ ಟೀಕೆ

ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರದಿಂದ ವಿವಾದ ಭುಗಿಲೆದ್ದಿದೆ. ಈ ಕುರಿತು ಶಿವಸೇನೆ (ಯುಬಿಟಿ) ಬಿಜೆಪಿ ವಿರುದ್ಧ ತೀವ್ರ ಟೀಕೆ ಮಾಡಿದೆ, ಟಿಪ್ಪುವನ್ನು ಸಮಾಧಿಯಿಂದ ಮತ್ತೆ ಜೀವಂತಗೊಳಿಸಲಾಗುತ್ತಿದೆ ಎಂದು ಆರೋಪಿಸಿದೆ. ಟಿಪ್ಪುವನ್ನು ಛತ್ರಪತಿ ಶಿವಾಜಿಗೆ ಹೋಲಿಸುವುದನ್ನು ಖಂಡಿಸಿದ ಶಿವಸೇನೆ, ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ಬಳಸಿಕೊಳ್ಳುವ ಬಗ್ಗೆ ಬೆಳಕು ಚೆಲ್ಲುತ್ತದೆ.

ಟಿಪ್ಪು ಸುಲ್ತಾನನನ್ನು ಸಮಾಧಿಯಿಂದ ಮತ್ತೆ ಜೀವಂತಗೊಳಿಸಲಾಗುತ್ತಿದೆ: ಬಿಜೆಪಿ ವಿರುದ್ಧ ಶಿವಸೇನೆ ಟೀಕೆ
ಉದ್ಧವ್ ಠಾಕ್ರೆ, ಫಡ್ನವಿಸ್
ನಯನಾ ರಾಜೀವ್
|

Updated on: Feb 16, 2026 | 11:01 AM

Share

ಪುಣೆ, ಫೆಬ್ರವರಿ 16: ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಸುಲ್ತಾನ್​​(Tipu Sultan) ನ ಫೋಟೊ ಹಾಕಿದ್ದ ಬಗ್ಗೆ ವಿವಾದ ಭುಗಿಲೆದ್ದಿದೆ. ಶಿವಸೇನೆ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ. ಶಿವಸೇನೆ (ಯುಬಿಟಿ) ತನ್ನ ಮುಖವಾಣಿ ಸಾಮ್ನಾದಲ್ಲಿ ಟಿಪ್ಪು ಸುಲ್ತಾನ್ ವಿವಾದದ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ. ಔರಂಗಜೇಬ್ ಮತ್ತು ಅಫ್ಜಲ್ ಖಾನ್ ಅವರಂತೆ ಟಿಪ್ಪು ಸುಲ್ತಾನನನ್ನು ಈಗ ಸಮಾಧಿಯಿಂದ ಮತ್ತೆ ಜೀವಂತಗೊಳಿಸಲಾಗುತ್ತಿದೆ ಎಂದು ಅದು ಹೇಳಿದೆ.

ಔರಂಗಜೇಬ್ ಮತ್ತು ಅಫ್ಜಲ್ ಖಾನ್ ಅವರಂತೆ ಮೈಸೂರಿನ ಟಿಪ್ಪು ಸುಲ್ತಾನ್  ಅವರ ಸಮಾಧಿಯಿಂದ ಹೊರಬಂದಿದ್ದಾರೆ ಎಂದು ಸಾಮ್ನಾ ಬರೆದಿದೆ. ಮಾಲೇಗಾಂವ್ ಮಹಾನಗರ ಪಾಲಿಕೆಯ ಉಪ ಮೇಯರ್ ಅವರ ಶಾನ್-ಎ-ಹಿಂದ್ ಹಾಲ್‌ನಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ಇರಿಸಲಾಗಿತ್ತು. ಆದರೆ ವಿವಾದ ಉಲ್ಬಣಗೊಳ್ಳುವ ಮೊದಲು ಭಾವಚಿತ್ರವನ್ನು ಗೋಡೆಯಿಂದ ತೆಗೆದುಹಾಕಲಾಗಿತ್ತು.

ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮಾನವೆಂದು ಪರಿಗಣಿಸಬೇಕು ಎಂದು ಕಾಂಗ್ರೆಸ್​​ನ ಸಪ್ಕಲ್ ಹೇಳಿದ್ದಾರೆ. ಟಿಪ್ಪು ಮತ್ತು ಛತ್ರಪತಿಯ ಕೆಲಸಗಳು ಸಮಾನವೆಂದು ಹೇಳುವ ಮೂಲಕ ಸಪ್ಕಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಈ ಹೋಲಿಕೆ ಊಹಿಸಲೂ ಸಾಧ್ಯವಿಲ್ಲ. ದೇವೇಂದ್ರ ಫಡ್ನವೀಸ್ ಮತ್ತು ಅವರ ಪಕ್ಷವು ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿತು.

ಮುಖ್ಯಮಂತ್ರಿ ಫಡ್ನವೀಸ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಸಪ್ಕಲ್ ಅವರು ಟಿಪ್ಪುವಿನಂತಹ ವ್ಯಕ್ತಿಯನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿರುವುದು ಖಂಡನೀಯ ಎಂದು ಹೇಳಿದರು.

ಮತ್ತಷ್ಟು ಓದಿ: KRS​ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್‌: ಮಹದೇವಪ್ಪ ಹೇಳಿಕೆಗೆ ಯದುವೀರ್ ತಿರುಗೇಟು

ಟಿಪ್ಪುವಿನ ಇತಿಹಾಸವನ್ನು ಚರ್ಚಿಸುವುದರಲ್ಲಿ ಅರ್ಥವಿಲ್ಲ. ಟಿಪ್ಪು ಮೈಸೂರಿನ ರಾಜರಾಗಿದ್ದ. ಹೈದರ್ ಅಲಿ ಕೂಡ ಒಬ್ಬ ರಾಜರಾಗಿದ್ದರು. ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಅವರು ಯೋಧರಾಗಿದ್ದರು, ಆದರೆ ಅವರು ತಮ್ಮ ರಾಜ್ಯ ಮತ್ತು ಸಾಮ್ರಾಜ್ಯವನ್ನು ರಕ್ಷಿಸಲು ಹೋರಾಡುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಹಾಗಿರಲಿಲ್ಲ ಎಂದು ಹೇಳಿದೆ.

ಮೊಘಲ್ ಆಕ್ರಮಣವನ್ನು ತಡೆಯಲು ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ ಅನ್ನು ಸ್ಥಾಪಿಸಿದರು. ಅವರು ತಮ್ಮದೇ ಆದ ರಾಜ್ಯವನ್ನು ಸೃಷ್ಟಿಸಿದರು. ಟಿಪ್ಪು ಈ ರಾಜ್ಯವನ್ನು ಆನುವಂಶಿಕವಾಗಿ ಪಡೆದರು. ಛತ್ರಪತಿ ಸ್ವರಾಜ್ಯದ ಶತ್ರುಗಳನ್ನು ಇದೇ ಮಣ್ಣಿನಲ್ಲಿ ಸಮಾಧಿ ಮಾಡಿದರು. ಅವರು ಮೇ 4, 1799 ರಂದು ಶ್ರೀರಂಗಪಟ್ಟಣ ಕದನದಲ್ಲಿ ನಿಧನರಾದರು.

ಟಿಪ್ಪುವಿನ ಮೇಲೆ ಬಲವಂತದ ಮತಾಂತರ ಮತ್ತು ಹಿಂದೂಗಳ ವಿರುದ್ಧ ದೌರ್ಜನ್ಯದ ಆರೋಪ ಹೊರಿಸಲಾಗಿದೆ ಎಂದು ಸಂಪಾದಕೀಯವು ಹೇಳಿದೆ. ಇದು ವಿವಾದಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ಕಾಲಕಾಲಕ್ಕೆ ಟಿಪ್ಪು ಸುಲ್ತಾನನ ಹೆಸರನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿವೆ, ಕೆಲವೊಮ್ಮೆ ಅವರನ್ನು ವೈಭವೀಕರಿಸುತ್ತವೆ ಮತ್ತು ಕೆಲವೊಮ್ಮೆ ಅವರನ್ನು ವಿರೋಧಿಸುತ್ತವೆ ಎಂದು ಅದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ