AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊಲ್ಲಲು ಹಾವಾಡಿಗರಿಗೆ ಸುಪಾರಿ ಕೊಟ್ಟ ಕಾನ್​ಸ್ಟೆಬಲ್, ಹಾವು ಕಚ್ಚಿದ್ರೂ ಬದುಕುಳಿದ ಮಹಿಳೆ

ಪತ್ನಿಯನ್ನು ತನ್ನ ಜೀವನದಿಂದ ದೂರಮಾಡಬೇಕೆಂದು ಕಾನ್​ಸ್ಟೆಬಲ್ ಪ್ಲ್ಯಾನ್​ ಮಾಡಿದ್ದ, ಆದರೆ ವಿಧಿಯಾಟವೇ ಬೇರೆ ಇತ್ತು. ಹಾಆಡಿಗರನ್ನು ಕರೆಸಿ ಆಕೆಗೆ ಹಾವು ಕಚ್ಚಿಸಿದರೂ ಪವಾಡವೆಮಬಂತೆ ಬದುಕುಳಿದಿದ್ದಾಳೆ. ಅಂಶಿಕಾ ಎಂಬ ಮಹಿಳೆ ದೂರು ನೀಡಿದ್ದು, ನಾಲ್ಕು ವರ್ಷಗಳ ಹಿಂದೆ ಕಾನ್​ಸ್ಟೆಬಲ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ಆಗ ಅನಿವಾರ್ಯವಾಗಿ ಆಕೆಯನ್ನು ಮದುವೆಯಾಗಬೇಕಾಯಿತು ಇದು ಒತ್ತಡದ ಸಂಬಂಧವಾಗಿತ್ತು ಎಂಬುದನ್ನು ತಿಳಿಸಿದ್ದಾಳೆ.

ಪತ್ನಿ ಕೊಲ್ಲಲು ಹಾವಾಡಿಗರಿಗೆ ಸುಪಾರಿ ಕೊಟ್ಟ ಕಾನ್​ಸ್ಟೆಬಲ್, ಹಾವು ಕಚ್ಚಿದ್ರೂ ಬದುಕುಳಿದ ಮಹಿಳೆ
ಕಾನ್​ಸ್ಟೆಬಲ್ Image Credit source: India Today
ನಯನಾ ರಾಜೀವ್
|

Updated on: Mar 25, 2025 | 7:53 AM

Share

ಕಾನ್ಪುರ, ಮಾರ್ಚ್​ 25: ಪತಿ-ಪತ್ನಿ ನಡುವಿನ ಸಂಬಂಧ ಹಳಸಿತ್ತು, ಇಬ್ಬರೂ ದೂರವಾಗುವ ಬದಲು ಆಕೆಯನ್ನು ಹತ್ಯೆ ಮಾಡಲು ಕಾನ್​ಸ್ಟೆಬಲ್​ ಆಲೋಚಿಸಿದ್ದ. ಹಾಗಾಗಿ ಬೇರೆ ರೀತಿ ಕೊಲೆ ಮಾಡಿದರೆ ಅನುಮಾನ ಬರಬಹುದೆಂದು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಬೇಕೆಂದುಕೊಂಡಿದ್ದ, ಆತನ ಆಲೋಚನೆ ಪ್ರಕಾರ ಹಾವು ಕೂಡ ಕಚ್ಚಿದೆ, ಆದರೂ ಆಕೆ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಅಂಶಿಕಾ ಎಂಬ ಮಹಿಳೆ ದೂರು ನೀಡಿದ್ದು, ನಾಲ್ಕು ವರ್ಷಗಳ ಹಿಂದೆ ಕಾನ್​ಸ್ಟೆಬಲ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ಆಗ ಅನಿವಾರ್ಯವಾಗಿ ಆಕೆಯನ್ನು ಮದುವೆಯಾಗಬೇಕಾಯಿತು ಇದು ಒತ್ತಡದ ಸಂಬಂಧವಾಗಿತ್ತು ಎಂಬುದನ್ನು ತಿಳಿಸಿದ್ದಾಳೆ.

ಕಾನೂನಿಂದ ತಪ್ಪಿಸಿಕೊಳ್ಳಲು ಆತ ದೇವಸ್ಥಾನಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ, ಆರಂಭದಲ್ಲಿ ತನ್ನ ಸಹೋದರಿ ಮನೆಯಲ್ಲಿ ಆಕೆಯನ್ನು ಇರಿಸಿದ್ದ. ಬಳಿಕ ಆತ ಉತ್ತರ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ಬಳಿಕ ಆಕೆಯನ್ನು ಪತ್ನಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದ.

ಮತ್ತಷ್ಟು ಓದಿ:ಅಕ್ರಮ ಸಂಬಂಧ ಮುಚ್ಚಿಟ್ಟುಕೊಳ್ಳಲು ಹುಟ್ಟಿದ ಕೂಸು ತಿಪ್ಪೆಗೆ: ಇಬ್ಬರು ಅರೆಸ್ಟ್​

ಈ ಕುರಿತು ಅಂಶಿಕಾ ದೂರು ನೀಡಿದ ಬಳಿಕ ಆತ ಆಕೆಯನ್ನು ಒಪ್ಪಿಕೊಂಡಿದ್ದ, ತನ್ನ ಮನೆಗೂ ಕರೆದುಕೊಂಡು ಹೋಗಿದ್ದ, ಅದಾದ ಬಳಿಕ ದೈಹಿಕ ಕಿರುಕುಳ, ಬೆದರಿಕೆಗಳು ಆರಂಭವಾಗಿದ್ದವು. ಫೆಬ್ರವರಿ 19ರಂದು ಅನುಜ್ ಇಬ್ಬರು ಹಾವಾಡಿಗರನ್ನು ನೇಮಿಸಿ ಆಕೆಗೆ ಹಾವು ಕಚ್ಚಿಸಿದ್ದಾನೆ. ಬಳಿಕ ಆಕೆ ಪ್ರಜ್ಞೆ ತಪ್ಪಿದ್ದಾಳೆ, ಸತ್ತಿದ್ದಾಳೆಮುದ ತಿಳಿದು ಅಲ್ಲಿಂದ ಹೋಗಿದ್ದಾನೆ.

ಅಂಶಿಕಾಗೆ ಪ್ರಜ್ಞೆ ಬಂದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ ತನ್ನ ಹೆತ್ತವರ ಮನೆಗೆ ಓಡಿಹೋಗಿದ್ದಳು. ಆದರೆ, ಪೊಲೀಸರು ಆರಂಭದಲ್ಲಿ ದೂರನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಅಂಶಿಕಾಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಬಿಡುಗಡೆಯ ನಂತರ, ಅವರು ಮತ್ತು ಅವರ ತಂದೆ ಕಾನ್ಪುರದ ಉಪ ಪೊಲೀಸ್ ಆಯುಕ್ತರನ್ನು (ಡಿಸಿಪಿ) ಸಂಪರ್ಕಿಸಿದರು, ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು, (ಎಫ್‌ಐಆರ್) ದಾಖಲಿಸಲು ಆದೇಶಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ