ಹರ್ಯಾಣ: ನುಹ್ನಲ್ಲಿ ಆಗಸ್ಟ್ 28ರಂದು ಹಿಂದೂ ಸಂಘಟನೆಗಳ ಮೆರವಣಿಗೆ; ಮೊಬೈಲ್ ಇಂಟರ್ನೆಟ್, ಎಸ್ಎಂಎಸ್ ಸ್ಥಗಿತ
ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡುವುದನ್ನು ತಡೆಯುವ ಉದ್ದೇಶದಿಂದ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು, ಗುಂಪು ಎಸ್ ಎಂಎಸ್ (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.

ಹರ್ಯಾಣ ಆಗಸ್ಟ್ 26: ಬಲಪಂಥೀಯ ಹಿಂದೂ ಸಂಘಟನೆಗಳು ಆಗಸ್ಟ್ 28 ರಂದು ತಮ್ಮ ಧಾರ್ಮಿಕ ಮೆರವಣಿಗೆಯನ್ನು ರದ್ದುಗೊಳಿಸುವುದಿಲ್ಲ ಎಂದು ಘೋಷಿಸಿದ ನಂತರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವುದಕ್ಕಾಗಿ ಹರ್ಯಾಣದ (Haryana) ನುಹ್ನಲ್ಲಿ (Nuh) ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ. ಜಿಲ್ಲಾಡಳಿತವು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಆಗಸ್ಟ್ 28 ರಂದು ನುಹ್ನಲ್ಲಿ ಬ್ರಿಜ್ ಮಂಡಲ್ ಜಲ ಅಭಿಷೇಕ್ ಯಾತ್ರೆಗೆ (Brij Mandal Jal Abhishek Yatra)ಅನುಮತಿ ನಿರಾಕರಿಸಿತ್ತು.
ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡುವುದನ್ನು ತಡೆಯುವ ಉದ್ದೇಶದಿಂದ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು, ಗುಂಪು ಎಸ್ ಎಂಎಸ್ (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.
ವಿಧ್ವಂಸ ಕೃತ್ಯ ಮತ್ತು ಇತರ ರೀತಿಯ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಗಂಭೀರವಾದ ಜೀವಹಾನಿ ಮತ್ತು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯನ್ನುಂಟುಮಾಡುವುದನ್ನು ತಪ್ಪಿಸಲು ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು ಗುಂಪು SMS ಅನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಆಡಳಿತವು ಭಯಪಡುತ್ತದೆ.
ವೈಯಕ್ತಿಕ ಎಸ್ಎಂಎಸ್, ಮೊಬೈಲ್ ರೀಚಾರ್ಜ್, ಬ್ಯಾಂಕಿಂಗ್ ಎಸ್ಎಂಎಸ್, ವಾಯ್ಸ್ ಕರೆಗಳು, ಬ್ರಾಡ್ಬ್ಯಾಂಡ್ ಮತ್ತು ಕಾರ್ಪೊರೇಟ್ ಮತ್ತು ದೇಶೀಯ ಕುಟುಂಬಗಳ ಲೀಸ್ ಲೈನ್ಗಳು ಒದಗಿಸುವ ಇಂಟರ್ನೆಟ್ ಸೇವೆಗಳಿಗೆ ವಿನಾಯಿತಿ ನೀಡುವ ಮೂಲಕ ಸಾರ್ವಜನಿಕ ಅನುಕೂಲಕ್ಕಾಗಿ ರಾಜ್ಯದ ಆರ್ಥಿಕ ಹಿತಾಸಕ್ತಿ ಮತ್ತು ವ್ಯಕ್ತಿಗಳ ಮೂಲಭೂತ ಅಗತ್ಯಗಳ ಬಗ್ಗೆಹೆಚ್ಚಿನ ಕಾಳಜಿ ವಹಿಸಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಆಗಸ್ಟ 26ರಂದು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.
ಈ ಆದೇಶವು ಇಂದು ಮಧ್ಯಾಹ್ನ 12 ರಿಂದ ಜಾರಿಗೆ ಬರಲಿದ್ದು, ಆಗಸ್ಟ್ 28 ರವರೆಗೆ ಜಾರಿಯಲ್ಲಿರುತ್ತದೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಬಜರಂಗ ದಳದ ಸದಸ್ಯರು ಮೆರವಣಿಗೆ ಮಾಡಿದಾಗ ಕಲ್ಲು ತೂರಾಟ ನಡೆದಿತ್ತು. ನಂತರದ ಕೋಮು ಘರ್ಷಣೆಗಳಿಂದ ಆರು ಮಂದಿ ಸಾವಿಗೀಡಾಗಿದ್ದು 88 ಮಂದಿ ಗಾಯಗೊಂಡಿದ್ದರು. ಈ ಬಾರಿ ಅಹಿತಕರ ಘಟನೆಗಳು ನಡೆಯದಂತೆ ವಿಸ್ತೃತ ಯೋಜನೆಗಳನ್ನು ಮಾಡಿದ್ದಾರೆ ಎಂದು ಪ್ರಸ್ತುತ ಸಂಘಟನೆಗಳು ಹೇಳಿವೆ.
ಇದನ್ನೂ ಓದಿ: ನುಹ್ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ, ಬಿಟ್ಟು ಬಜರಂಗಿಯ ಬಂಧನ
ವಿಎಚ್ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಮಾತನಾಡಿ, ಏನೇ ಆದರೂ ಮೆರವಣಿಗೆ ನಡೆಸುತ್ತೇವೆ.ನಮ್ಮ ವೇಳಾಪಟ್ಟಿಯಂತೆ ನಾವು ಯಾತ್ರೆಯನ್ನು ಕೈಗೊಳ್ಳುತ್ತೇವೆ. ಇದು ನಮ್ಮ ಹಕ್ಕು ಮತ್ತು ಅದರಂತೆ ನಾವು ಯೋಜಿಸಿದ್ದೇವೆ. ನಮ್ಮ ಭದ್ರತೆ ಮತ್ತು ಸುರಕ್ಷತೆಯು ಆಡಳಿತ ಮತ್ತು ಪೊಲೀಸರ ಜವಾಬ್ದಾರಿಯಾಗಿದೆ. ಅವರು ನಮಗೆ ಅದನ್ನು ಒದಗಿಸಬೇಕು. ಅಗತ್ಯವಿದ್ದರೆ ಭಕ್ತರ ಸಂಖ್ಯೆಯನ್ನು ನಿಯಂತ್ರಿಸಬಹುದು, ಆದರೆ ನಾವು ಯಾತ್ರೆಯನ್ನು ಪುನರಾರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Sat, 26 August 23