AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರಣೆಗಾಗಿ ಮೋದಿ 12 ಗಂಟೆ ಕುಳಿತಿದ್ದರು; ಅರವಿಂದ ಕೇಜ್ರಿವಾಲ್ ವಿರುದ್ಧ ಗುಡುಗಿದ ಮೀನಾಕ್ಷಿ ಲೇಖಿ

ದೆಹಲಿ ಸಿಎಂ ಕೇಜ್ರಿವಾಲ್ ಪ್ರಧಾನಿಯವರನ್ನು ನೋಡಿ ಕಲಿಯಬೇಕು. ಮೋದಿಯವರು (ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ) "ಪ್ರಶ್ನೆಗಳಿಗೆ ಉತ್ತರಿಸಲು 12 ಗಂಟೆಗಳ ಕಾಲ ಕುಳಿತುಕೊಂಡಿದ್ದರು" ಎಂದು ಲೇಖಿ ಹೇಳಿದ್ದಾರೆ. 2002 ರ ಗುಜರಾತ್ ಗಲಭೆಗಳ ತನಿಖೆ ನಡೆಸುತ್ತಿರುವ ವಿಶೇಷ ತಂಡವು ಪ್ರಧಾನಿಯನ್ನು ವಿಚಾರಣೆಗೊಳಪಡಿಸಿದ್ದನ್ನು ಮೀನಾಕ್ಷಿ ಲೇಖಿ ಇಲ್ಲಿ ಉಲ್ಲೇಖಿಸಿದ್ದಾರೆ. ಕೇಜ್ರಿವಾಲ್ ಅವರಂತೆ ನಾಟಕ ಮತ್ತು ಭ್ರಷ್ಟಾಚಾರದ ಬದಲಿಗೆ ವಿಚಾರಣೆ ಎದುರಿಸುವುದು ಹೀಗೆ ಎಂದಿದ್ದಾರೆ ಲೇಖಿ.

ವಿಚಾರಣೆಗಾಗಿ ಮೋದಿ 12 ಗಂಟೆ ಕುಳಿತಿದ್ದರು; ಅರವಿಂದ ಕೇಜ್ರಿವಾಲ್ ವಿರುದ್ಧ ಗುಡುಗಿದ ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 06, 2024 | 4:11 PM

ದೆಹಲಿ ಫೆಬ್ರುವರಿ 06: ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ (Meenakshi Lekhi )ಅವರು ಮಂಗಳವಾರ ಆಮ್ ಆದ್ಮಿ ಪಕ್ಷ (AAP) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal)ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಗರದ ಮದ್ಯ ಅಬಕಾರಿ ನೀತಿ ಮತ್ತು ಜಲ ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಪ್ರಧಾನಿಯವರನ್ನು ನೋಡಿ ಕಲಿಯಬೇಕು. ಮೋದಿಯವರು (ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ) “ಪ್ರಶ್ನೆಗಳಿಗೆ ಉತ್ತರಿಸಲು 12 ಗಂಟೆಗಳ ಕಾಲ ಕುಳಿತುಕೊಂಡಿದ್ದರು” ಎಂದು ಲೇಖಿ ಹೇಳಿದ್ದಾರೆ. 2002 ರ ಗುಜರಾತ್ ಗಲಭೆಗಳ ತನಿಖೆ ನಡೆಸುತ್ತಿರುವ ವಿಶೇಷ ತಂಡವು ಪ್ರಧಾನಿಯನ್ನು ವಿಚಾರಣೆಗೊಳಪಡಿಸಿದ್ದನ್ನು ಮೀನಾಕ್ಷಿ ಲೇಖಿ ಇಲ್ಲಿ ಉಲ್ಲೇಖಿಸಿದ್ದಾರೆ. ಕೇಜ್ರಿವಾಲ್ ಅವರಂತೆ ನಾಟಕ ಮತ್ತು ಭ್ರಷ್ಟಾಚಾರದ ಬದಲಿಗೆ ವಿಚಾರಣೆ ಎದುರಿಸುವುದು ಹೀಗೆ ಎಂದಿದ್ದಾರೆ ಲೇಖಿ.

ಎಎಪಿ ಮತ್ತು ಜಾರಿ ನಿರ್ದೇಶನಾಲಯದ ನಡುವಿನ ಹಗ್ಗಜಗ್ಗಾಟದ ನಡುವೆಯೇ ಕೇಂದ್ರ ಸಚಿವೆ ಕೇಜ್ರಿವಾಲ್ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ ಕೇಜ್ರಿವಾಲ್​​ಗೆ ಐದು ಬಾರಿ ಸಮನ್ಸ್ ನೀಡಿದ್ದರೂ ದೆಹಲಿ ಸಿಎಂ ಅದಕ್ಕೆ ಹಾಜರಾಗಿಲ್ಲ. ಹೀಗಿರುವಾಗ ಕೇಂದ್ರೀಯ ಸಂಸ್ಥೆ ಕೇಜ್ರಿವಾಲ್ ನ್ನು ಬಂಧಿಸಬಹುದು.

ಎಎಪಿ ಮತ್ತು ಇತರ ವಿರೋಧ ಪಕ್ಷಗಳು ಹೇಳುವ ಪ್ರಕಾರ ಬಿಜೆಪಿಯು ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು, ವಿಶೇಷವಾಗಿ ಚುನಾವಣೆಗಳಿಗೆ ಮುನ್ನ 2021 ಅಬಕಾರಿ ನೀತಿಯಲ್ಲಿ ಮದ್ಯದ ಕಾರ್ಟೆಲ್‌ಗಳಿಗೆ “ಅನಾವಶ್ಯಕ ಪ್ರಯೋಜನಗಳನ್ನು” ಉಲ್ಲೇಖಿಸಿ, ಅಪರಾಧದ ಆದಾಯದ ಆಪಾದಿತ ಮನಿ ಲಾಂಡರಿಂಗ್ ಬಗ್ಗೆ ತನಿಖೆ ನಡೆಸುತ್ತಿದೆ.

ಲೇಖಿ ಅವರ ವಾಗ್ದಾಳಿಗೆ ಮುಂಚೆ ದೆಹಲಿ ಸಚಿವ ಅತಿಶಿ ಅವರು ಎಎಪಿ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಆರೋಪಿ-ಅನುಮೋದಕರು ನೀಡಿದ ಹೇಳಿಕೆಗಳ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದಾರೆ. ಎಎಪಿ ನಾಯಕರಿಗೆ ಈ ಮದ್ಯದ ಹಗರಣ ಎಂದು ಕರೆಯಲ್ಪಡುವ ಈ ಪ್ರಕರಣದಲ್ಲಿ ಬೆದರಿಕೆ ಹಾಕಲಾಗಿದೆ. ಎರಡು ವರ್ಷಗಳಲ್ಲಿ ನೂರಾರು ದಾಳಿಗಳ ನಂತರವೂ ಇಡಿ ಒಂದು ರೂಪಾಯಿಯನ್ನು ವಸೂಲಿ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಯಾವುದೇ ದೃಢವಾದ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ.

ದೆಹಲಿ ಜಲ ಮಂಡಳಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆಯೂ ಲೇಖಿ ವಾಗ್ದಾಳಿ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿದಂತೆ ಕಳೆದ ವಾರ ನಿವೃತ್ತ ಮುಖ್ಯ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಬಂಧಿಸಲಾಯಿತು. ಇದಲ್ಲದೆ, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಎಪಿ ಹಿರಿಯ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿದೆ.

ದೆಹಲಿಯ ಆಡಳಿತದ ಮಾದರಿಯು ವೆಂಟಿಲೇಟರ್‌ನಲ್ಲಿದೆ. ಅಬಕಾರಿ ನೀತಿಯು ಒಬ್ಬರು ಯೋಚಿಸಬಹುದಾದ ದೊಡ್ಡ ಹಗರಣವಾಗಿದೆ. ಈಗ ಮುಖ್ಯಮಂತ್ರಿ ಇಡಿ ಸಮನ್ಸ್‌ಗೆ ಉತ್ತರಿಸುವುದನ್ನು ತಪ್ಪಿಸುತ್ತಿರುವಾಗ, ಮತ್ತೊಂದು ಹಗರಣವು ಮುಂದೆ ಬಂದಿದೆ ಎಂದಿದ್ದಾರೆ.  ನಿನ್ನೆ ದೆಹಲಿ ಹೈಕೋರ್ಟ್ ಸುಳ್ಳು ಅಫಿಡವಿಟ್ ಸಲ್ಲಿಸಿರುವುದನ್ನು ಕಂಡುಹಿಡಿದಿದೆ. ಇದು ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕೆಲವು ಟೀಕೆಗಳನ್ನು ಒಳಗೊಂಡಿದೆ. ಆಡಿಟ್ ವರದಿಯು ಕೇಂದ್ರ ಖರೀದಿ ಪ್ರಕ್ರಿಯೆಗಳು ಕಾನೂನನ್ನು ಉಲ್ಲಂಘಿಸಿವೆ ಮತ್ತು ಖರೀದಿಸಿದ ಔಷಧಗಳು ಗುಣಮಟ್ಟವಲ್ಲ ಮತ್ತು ನಿಯಮಗಳಿಗೆ ಬದ್ಧವಾಗಿಲ್ಲ ಎಂದು ಕಂಡುಬಂದಿದೆ.

ಇದನ್ನೂ ಓದಿ: 5 ಬಾರಿ ಸಮನ್ಸ್​​​ಗೆ ಗೈರಾದ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಇಡಿ

ದೆಹಲಿ ಸರ್ಕಾರ ಕೇವಲ ಪ್ರಚಾರದ ಬಗ್ಗೆ ತಲೆಕೆಡಿಸಿಕೊಂಡಿದೆ. ಅವರು ಯಾವುದೇ ಬೆಲೆ ತೆತ್ತಾದರೂ ಅಧಿಕಾರದಲ್ಲಿ ಉಳಿಯಲು ಹವಣಿಸುತ್ತಿದ್ದಾರೆ. ಅವರಿಗೆ ಭ್ರಷ್ಟಾಚಾರದ ಹಸಿವು ಮತ್ತು ದುರಾಸೆ ಇದೆ ಎಂದು ಲೇಖಿ ವಾಗ್ದಾಳಿ ನಡೆಸಿದ್ದಾರೆ. ಏತನ್ಮಧ್ಯೆ, ಕೇಜ್ರಿವಾಲ್, ಕಳೆದ ವಾರ ಬಿಜೆಪಿ ತನ್ನ ಪಕ್ಷದ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಅವರು ಏನು ಬೇಕಾದರೂ ಮಾಡಬಹುದು. ಏನೂ ಆಗುವುದಿಲ್ಲ. ನಾನು ಅವರಿಗೆ ತಲೆಬಾಗಲು ಹೋಗುವುದಿಲ್ಲ. ‘ಬಿಜೆಪಿಗೆ ಬನ್ನಿ, ನಾವು ನಿಮಗೆ ತೊಂದರೆ ಕೊಡುವುದಿಲ್ಲ’ ಎನ್ನುತ್ತಾರೆ. ಇಲ್ಲ… ನಾನು ಸೇರುವುದಿಲ್ಲ. ಅವರು ನಮ್ಮನ್ನು ಕ್ಷಮಿಸಲು ನಾವು ಯಾವ ಅಪರಾಧವನ್ನು ಮಾಡಿದ್ದೇವೆ ಎಂದು ಕೇಜ್ರಿವಾಲ್ ಕೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಮಾಡಿರುವ ದೆಹಲಿ ಪೊಲೀಸರ ಅಪರಾಧ ವಿಭಾಗವು ಶನಿವಾರ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದ್ದು, ಮೂರು ದಿನಗಳೊಳಗೆ ಉತ್ತರಿಸುವಂತೆ ಕೇಳಿದೆ. ಅದೇ ರೀತಿ ಅತಿಶಿಗೂ ನೋಟಿಸ್ ನೀಡಲಾಗಿದೆ. ಶಾಸಕರ ಖರೀದಿ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದ್ದು, ಅವುಗಳನ್ನು “ಸುಳ್ಳು” ಮತ್ತು “ಆಧಾರರಹಿತ” ಎಂದು ಕರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ