Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡು ಗುರುತು: ಬುಲೆಟ್​ ಮೇಲೆ QR ಕೋಡ್​ ನಮೂದಿಸಲು ಖಾಕಿ ಸೂಪರ್​ ಐಡಿಯಾ!

ಭೋಪಾಲ್​: ಕರ್ನಾಟಕ ರಾಜ್ಯದಲ್ಲಿ ಅಪರಾಧಗಳ ಇತಿಹಾಸದಲ್ಲೇ ಅತ್ಯಂತ ಕ್ಲಿಷ್ಟಕರ ಹಾಗು ರೋಚಕ ಪ್ರಕರಣಗಳಲ್ಲಿ ಒಂದೆಂದರೆ ಅದು ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣ ಎಂದು ಹೇಳಿದರು ಅದು ತಪ್ಪಾಗಲಾರದು. 2017ರ ಸೆಪ್ಟಂಬರ್ 5ರಂದು ಸಂಜೆ ವೇಳೆ ತಮ್ಮ ನಿವಾಸದ ಬಳಿಯಿದ್ದ ಪತ್ರಕರ್ತೆಯನ್ನು ಅಪರಿಚಿತ ಹಂತಕರು ಪಿಸ್ತೂಲ್​ನಿಂದ ಗುಂಡಿಕ್ಕಿ ಕೊಲೆಗೈದಿದ್ದರು. ಗೌರಿ ಲಂಕೇಶ್​ರ ಮೃತದೇಹದಲ್ಲಿದ್ದ ಗುಂಡು ಮತ್ತು ಅವರ ನಿವಾಸದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳು ಬಿಟ್ಟರೇ ಬೇಱವ ಸುಳಿವು ಖಾಕಿ ಪಡೆಗೆ ಸಿಕ್ಕಿರಲಿಲ್ಲ. ಸರಿಸುಮಾರು 2 ವರ್ಷಗಳ […]

ಗುಂಡು ಗುರುತು: ಬುಲೆಟ್​ ಮೇಲೆ QR ಕೋಡ್​ ನಮೂದಿಸಲು ಖಾಕಿ ಸೂಪರ್​ ಐಡಿಯಾ!
ಸಾಂದರ್ಭಿಕ ಚಿತ್ರ
Follow us
KUSHAL V
|

Updated on:Oct 17, 2020 | 6:07 PM

ಭೋಪಾಲ್​: ಕರ್ನಾಟಕ ರಾಜ್ಯದಲ್ಲಿ ಅಪರಾಧಗಳ ಇತಿಹಾಸದಲ್ಲೇ ಅತ್ಯಂತ ಕ್ಲಿಷ್ಟಕರ ಹಾಗು ರೋಚಕ ಪ್ರಕರಣಗಳಲ್ಲಿ ಒಂದೆಂದರೆ ಅದು ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣ ಎಂದು ಹೇಳಿದರು ಅದು ತಪ್ಪಾಗಲಾರದು. 2017ರ ಸೆಪ್ಟಂಬರ್ 5ರಂದು ಸಂಜೆ ವೇಳೆ ತಮ್ಮ ನಿವಾಸದ ಬಳಿಯಿದ್ದ ಪತ್ರಕರ್ತೆಯನ್ನು ಅಪರಿಚಿತ ಹಂತಕರು ಪಿಸ್ತೂಲ್​ನಿಂದ ಗುಂಡಿಕ್ಕಿ ಕೊಲೆಗೈದಿದ್ದರು. ಗೌರಿ ಲಂಕೇಶ್​ರ ಮೃತದೇಹದಲ್ಲಿದ್ದ ಗುಂಡು ಮತ್ತು ಅವರ ನಿವಾಸದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳು ಬಿಟ್ಟರೇ ಬೇಱವ ಸುಳಿವು ಖಾಕಿ ಪಡೆಗೆ ಸಿಕ್ಕಿರಲಿಲ್ಲ.

ಸರಿಸುಮಾರು 2 ವರ್ಷಗಳ ಸತತ ತನಿಖೆಯ ಬಳಿಕ ಬಳಿಕ SIT ಅಧಿಕಾರಿಗಳಿಗೆ ಹಂತಕರ ಜಾಡನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು. ಆದರೆ, ಒಂದು ವೇಳೆ ಪತ್ರಕರ್ತೆ ಗೌರಿ ಲಂಕೇಶ್​ರ ದೇಹವನ್ನು ಹೊಕ್ಕ ಗುಂಡಿನ ಮೇಲೆ ಯಾವುದೇ ಗುರುತು ಅಥವಾ ಐಡೆಂಟಿಫಿಕೇಷನ್​ ಸಾಧನಗಳಿದಿದ್ದರೆ ತನಿಖಾಧಿಕಾರಿಗಳ ಕೆಲಸ ಮತ್ತಷ್ಟು ಸುಲಭವಾಗುತ್ತಿತ್ತು.

ಇದೀಗ, ಮಧ್ಯಪ್ರದೇಶದ ಖಾಕಿ ಪಡೆ ಅಂಥದ್ದೇ ಯೋಚನೆಗೆ ಮುಂದಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮಧ್ಯಪ್ರದೇಶದ ಭಿಂಡ್​ ಪೊಲೀಸರು ಪ್ರತಿ ಗುಂಡು ಅಥವಾ ಬುಲೆಟ್​ನ ಮೇಲೆ QR ಕೋಡ್​ ನಮೂದಿಸಲು ಮುಂದಾಗಿದೆ. ಇದರಿಂದ, ಭಿಂಡ್​ನಲ್ಲಿ ಎಲ್ಲೇ ಅಪರಾಧ ಚಟುವಟಿಕೆಗಳಲ್ಲಿ ಬಂದೂಕು ಬಳಸಿದರೂ ಅದರಿಂದ ಫೈರ್​ ಆದ ಗುಂಡಿನ ಮೇಲಿರುವ QR ಕೋಡ್​ ಮುಖಾಂತರ ಅಪರಾಧಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದಲ್ಲದೆ, ರಾಜ್ಯದಲ್ಲಿ ಕೆಲ ದಿನಗಳಲ್ಲಿ ಉಪಚುನಾವಣೆ ನಡೆಯಲಿದ್ದು ಈ ವೇಳೆ ಗನ್​ ಬಳಕೆಯನ್ನು ಕಂಡುಹಿಡಿಯಲು ನೆರವಾಗಲಿದೆ. ಭಿಂಡ್​ನಲ್ಲಿ ಕಳೆದ 5 ವರ್ಷಗಳಲ್ಲಿ ಬಂದೂಕುಗಳನ್ನು ಬಳಸಿ ಸುಮಾರು 150 ಕೊಲೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ಈ ನೂತನ ಯೋಜನೆ ಅಪರಾಧಿಗಳನ್ನು ಮಟ್ಟಹಾಕಲು ಸಹಾಯ ಮಾಡಲಿದೆ.

Published On - 5:56 pm, Sat, 17 October 20

ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು