AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರದ ಹಳ್ಳಿಯೊಂದರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ವ್ಯಕ್ತಿ; ಪೂಜೆಗಾಗಿ ಹಿಂದು ಅರ್ಚಕರ ನೇಮಕ

ನಮಗೆ ಅಲ್ಲಾ ಹೇಗೆ ದೇವರೋ, ಹಾಗೇ ಗಣೇಶ ಹಿಂದುಗಳಿಗೆ ದೇವರು. ಎಲ್ಲರ ರಕ್ತವೂ ಕೆಂಪು. ನನಗೆ ಯಾವುದೇ ಬೇಧವೂ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ ರೆಹಮಾನ್​,

ಚಾಮರಾಜನಗರದ ಹಳ್ಳಿಯೊಂದರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ವ್ಯಕ್ತಿ; ಪೂಜೆಗಾಗಿ ಹಿಂದು ಅರ್ಚಕರ ನೇಮಕ
ಗಣೇಶ ದೇಗುಲ
Follow us
TV9 Web
| Updated By: Lakshmi Hegde

Updated on: Apr 09, 2022 | 1:25 PM

ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದು-ಮುಸ್ಲಿಂ ಹಗ್ಗ-ಜಗ್ಗಾಟ ತುಸು ಜೋರಾಗಿಯೇ ನಡೆಯುತ್ತಿದೆ. ಹಿಜಾಬ್ ವಿವಾದದಿಂದ ಶುರುವಾಗಿದ್ದು, ಇದೀಗ ಮುಸ್ಲಿಂ ಚಾಲಕರ ವಾಹನದ ಮೇಲೆ ಹಿಂದುಗಳು ಪ್ರಯಾಣ ಮಾಡಬಾರದು ಎಂಬಲ್ಲಿವರೆಗೆ ಬಂದುನಿಂತಿದೆ. ಹಿಂದುಗಳ ಉತ್ಸವ, ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿ ಇಡಬಾರದು, ಮುಸ್ಲಿಮರ ಹಬ್ಬಗಳಲ್ಲಿ ಹಿಂದುಗಳು ಅಂಗಡಿ ಹಾಕಬಾರದು, ಮುಸ್ಲಿಮರು ಕೆತ್ತಿದ ಹಿಂದು ದೇವತೆಗಳ ವಿಗ್ರಹ ಪೂಜೆಗೆ ಯೋಗ್ಯವಲ್ಲ..ಹೀಗೆ ಒಂದರ ಬೆನ್ನಿಗೆ ಒಂದರಂತೆ ಸಂಘರ್ಷಗಳು ವರದಿಯಾಗುತ್ತಲೇ ಇವೆ. ಇದೆಲ್ಲದರ ಮಧ್ಯೆಯೊಂದು ಪಾಸಿಟಿವ್​ ವಿಷಯ ಬೆಳಕಿಗೆ ಬಂದಿದೆ.  

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಚಿಕ್ಕಹೊಳೆಯ ಪಿ.ರೆಹಮಾನ್​  ಎಂಬುವರು ಗಣಪತಿಯ ದೇವಸ್ಥಾನವನ್ನೊಂದನ್ನು ಕಟ್ಟಿ, ಅದಕ್ಕೆ ಪೂಜೆ ಸಲ್ಲಿಸಲು ಹಿಂದು ಅರ್ಚಕರನ್ನೇ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪಿಂಚಣಿ ಹಣದಲ್ಲಿ ಅರ್ಚಕರಿಗೆ ತಿಂಗಳಿಗೆ 4 ಸಾವಿರ ರೂಪಾಯಿ ಸಂಬಳವನ್ನೂ ನೀಡುತ್ತಿದ್ದಾರೆ. ಈ ವಿಚಾರ ಈಗ ಬೆಳಕಿಗೆ ಬಂದಿದ್ದು, ಅದೆಷ್ಟೋ ಜನ ಹುಬ್ಬೇರಿಸಿದ್ದಾರೆ. ರೆಹಮಾನ್​ರನ್ನು ಶ್ಲಾಘಿಸಿದ್ದಾರೆ.

ಅಂದಹಾಗೆ ಪಿ.ರೆಹಮಾನ್​ ಅವರು ಚಿಕ್ಕಹೊಳೆ ಜಲಾಶಯದಲ್ಲಿ ಗೇಟ್ ಆಪರೇಟರ್​ ಆಗಿದ್ದರು. 2018ರಲ್ಲಿ ಇವರು ನಿವೃತ್ತಗೊಂಡಿದ್ದಾರೆ. ಅದೇ ವರ್ಷ ಒಂದು ವಿಶಿಷ್ಟ ಘಟನೆ ನಡೆಯಿತು ಮತ್ತು ಅದೇ ಘಟನೆಯೇ ರೆಹಮಾನ್ ಅವರು ದೇವಸ್ಥಾನ ನಿರ್ಮಿಸಿ, ಅದರಲ್ಲಿ ಗಣೇಶನ ವಿಗ್ರಹ ಸ್ಥಾಪಿಸಲು ಕಾರಣವಾಯಿತು. 2018ರ ಹೊತ್ತಲ್ಲಿ, ರೆಹಮಾನ್ ನಿವೃತ್ತಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದಾಗ ಅಲ್ಲೇ ಚಿಕ್ಕಹೊಳೆ ಸಮೀಪದ ದೇವಸ್ಥಾನವೊಂದರಲ್ಲಿ ಇದ್ದ ಗಣೇಶನ ವಿಗ್ರಹವೊಂದು ಕಾಣೆಯಾಗಿತ್ತು. ಈ ದೇಗುಲ ರೆಹಮಾನ್ ಕೆಲಸ ಮಾಡುತ್ತಿದ್ದ ಜಲಾಶಯದ ಸಮೀಪವೇ ಇತ್ತು. ಆ ವಿಗ್ರಹವನ್ನು ರೆಹಮಾನ್ ಕೂಡ ನೋಡಿದ್ದರು.

ದೇವಾಲಯದಿಂದ ಕಾಣೆಯಾದ ವಿಗ್ರಹವನ್ನು ಪೊಲೀಸರು, ಸಾರ್ವಜನಿಕರು ಹುಡುಕಿದ್ದೇ ಬಂತು. ಆದರೆ ಅದು ಪತ್ತೆಯಾಗಲೇ ಇಲ್ಲ. ಹೀಗೆ ನಾನೊಂದು ದಿನ ರಾತ್ರಿ ಮಲಗಿದ್ದಾಗ ನನಗೊಂದು ಕನಸು ಬಿತ್ತು. ಅದರಲ್ಲಿ ಭಗವಂತ ಗಣಪತಿ ಬಂದು, ನನಗಾಗಿ ಒಂದು ದೇಗುಲ ಕಟ್ಟು ಎಂದು ಹೇಳಿದ. ನಾನು ಕೂಡಲೇ ಎದ್ದು ಕುಳಿತೆ. ನನಗೆ  ಆ ಕನಸನ್ನು ತಲೆಯಿಂದ ತೆಗೆದು ಹಾಕಲು ಸಾಧ್ಯವಾಗಲೇ ಇಲ್ಲ. ಹೀಗೆ ಯೋಚಿಸುತ್ತಲೇ ಇದ್ದೆ..ಅದಾಗಿ ಕೆಲವು ದಿನಗಳ ನಂತರ ನನಗೆ ನಿವೃತ್ತಿಯಾಯಿತು. ಈ ವೇಳೆ ನನಗೆ ಒಂದಷ್ಟು ಗ್ರಾಚ್ಯುಟಿ ಹಣವೂ ಬಂತು. ಕೂಡಲೇ ಒಂದು ದೇಗುಲ ನಿರ್ಮಾಣ ಮಾಡಿಸಿ, ಅದರಲ್ಲಿ ಗಣೇಶನ ವಿಗ್ರಹ ಸ್ಥಾಪಿಸಿದೆ ಎಂದು ರೆಹಮಾನ್ ಹೇಳಿದ್ದಾರೆ.

ನಮಗೆ ಅಲ್ಲಾ ಹೇಗೆ ದೇವರೋ, ಹಾಗೇ ಗಣೇಶ ಹಿಂದುಗಳಿಗೆ ದೇವರು. ಎಲ್ಲರ ರಕ್ತವೂ ಕೆಂಪು. ನನಗೆ ಯಾವುದೇ ಬೇಧವೂ ಕಾಣಿಸುತ್ತಿಲ್ಲ ಎಂದು ಹೇಳುವ ರೆಹಮಾನ್​, ಗಣಪತಿ ವಿಗ್ರಹಕ್ಕೆ ನಡೆಯಬೇಕಾದ ಪೂಜೆಯ ವಿಧಾನ ಬೇರೆ ಇರುತ್ತದೆ. ಹಾಗಾಗಿ ಒಬ್ಬ ಹಿಂದು ಅರ್ಚಕರನ್ನು ನೇಮಿಸಿಕೊಂಡಿದ್ದೇನೆ. ಪ್ರತಿನಿತ್ಯ ಈ ದೇಗುಲದಲ್ಲಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿರುತ್ತವೆ. ಜನರೂ ಬರುತ್ತಾರೆ. ನಾನು ಅರ್ಚಕರಿಗೆ ನನ್ನ ಪಿಂಚಣಿ ಹಣದಲ್ಲಿಯೇ 4 ಸಾವಿರ ರೂಪಾಯಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯ ದಾರುಣ ಘಟನೆ: ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದ ನವಜಾತ ಶಿಶು

ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ