ಮುಸ್ಲಿಮರು ಹಿಂದೂಗಳಿಂದ ಶಿಸ್ತು ಕಲಿಯಬೇಕು, ರಸ್ತೆ ನಮಾಜ್‌ಗೆ ಮೀಸಲಾಗಿಲ್ಲ; ಯೋಗಿ ಆದಿತ್ಯನಾಥ್

|

Updated on: Apr 01, 2025 | 9:56 PM

ಉತ್ತರ ಪ್ರದೇಶದ ಮೀರತ್‌ನಲ್ಲಿ ಪೊಲೀಸರು ಬೀದಿಗಳಲ್ಲಿ ನಮಾಜ್ ಮಾಡದಂತೆ ಎಚ್ಚರಿಕೆ ನೀಡಿದ್ದು, ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ನೋಂದಣಿ, ಪಾಸ್‌ಪೋರ್ಟ್ ಮತ್ತು ಪರವಾನಗಿಗಳನ್ನು ರದ್ದುಗೊಳಿಸುವ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಸ್ತೆಗಳು ನಡೆಯಲು ಮೀಸಲಾಗಿವೆಯೇ ವಿನಃ ನಮಾಜ್‌ಗಾಗಿ ಅಲ್ಲ ಎಂದು ಸಿಎಂ ಹೇಳಿದ್ದಾರೆ.

ಮುಸ್ಲಿಮರು ಹಿಂದೂಗಳಿಂದ ಶಿಸ್ತು ಕಲಿಯಬೇಕು, ರಸ್ತೆ ನಮಾಜ್‌ಗೆ ಮೀಸಲಾಗಿಲ್ಲ; ಯೋಗಿ ಆದಿತ್ಯನಾಥ್
Cm Yogi Adityanath
Follow us on

ನವದೆಹಲಿ, ಏಪ್ರಿಲ್ 1: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಸ್ತೆಗಳಲ್ಲಿ ನಮಾಜ್ ಮಾಡದಂತೆ ಮೀರತ್‌ನಲ್ಲಿ ಯುಪಿ ಸರ್ಕಾರದ ಆದೇಶದ ಪರವಾಗಿ ಸ್ಪಷ್ಟಪಡಿಸಿದ್ದಾರೆ. ಈ ಆದೇಶದಲ್ಲಿ ಯಾವುದೇ ತಪ್ಪಿಲ್ಲ. ರಸ್ತೆಗಳು ನಡೆಯಲು ಮೀಸಲಾಗಿವೆಯೇ ವಿನಃ ನಮಾಜ್‌ಗಾಗಿ ಅಲ್ಲ ಎಂದು ಸಿಎಂ ಹೇಳಿದ್ದಾರೆ. ಮುಸ್ಲಿಮರು ಮಹಾಕುಂಭಮೇಳದಲ್ಲಿ (Mahakumbh) ಭಾಗವಹಿಸಿದ ಹಿಂದೂಗಳಿಂದ ಯಾವುದೇ ಅಪರಾಧ ಅಥವಾ ಕಿರುಕುಳದ ಘಟನೆಯಿಲ್ಲದೆ ಧಾರ್ಮಿಕ ಶಿಸ್ತನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ರಸ್ತೆಗಳು ನಡೆಯಲು ಮೀಸಲಾಗಿವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ನಿರ್ಧಾರದ ವಿರುದ್ಧ ಮಾತನಾಡುವವರು ಹಿಂದೂಗಳಿಂದ ಶಿಸ್ತು ಕಲಿಯಬೇಕು. ಪ್ರಯಾಗ್‌ರಾಜ್‌ಗೆ 66 ಕೋಟಿ ಜನರು ಮಹಾಕುಂಭಕ್ಕೆ ಆಗಮಿಸಿದರು. ಅಲ್ಲಿ ಯಾವುದೇ ದರೋಡೆ, ಆಸ್ತಿ ನಾಶ, ಬೆಂಕಿ ಹಚ್ಚುವಿಕೆ, ಅಪಹರಣ ನಡೆದಿಲ್ಲ. ಇದನ್ನು ಧಾರ್ಮಿಕ ಶಿಸ್ತು ಎಂದು ಕರೆಯಲಾಗುತ್ತದೆ. ಮುಸ್ಲಿಮರು ಕೂಡ ಈ ಶಿಸ್ತನ್ನು ಅನುಸರಿಸಬೇಕು” ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ಇದನ್ನೂ ಓದಿ: Explainer: ವಕ್ಫ್ ತಿದ್ದುಪಡಿ ಮಸೂದೆಯಲ್ಲೇನಿದೆ? ಪ್ರತಿಭಟನೆ, ವಿವಾದಕ್ಕೆ ಕಾರಣವಾದ ಅಂಶಗಳೇನು?

ಭವಿಷ್ಯದ ಪ್ರಧಾನಿ ರೇಸ್​ನಲ್ಲಿ ನೀವಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್, “ನೋಡಿ, ನಾನು ರಾಜ್ಯದ ಮುಖ್ಯಮಂತ್ರಿ. ಬಿಜೆಪಿ ನನ್ನನ್ನು ಉತ್ತರ ಪ್ರದೇಶದ ಜನರಿಗಾಗಿ ಇಲ್ಲಿ ಇರಿಸಿದೆ. ರಾಜಕೀಯ ನನಗೆ ಪೂರ್ಣ ಸಮಯದ ಕೆಲಸವಲ್ಲ. ಪ್ರಸ್ತುತ, ನಾನು ಸಿಎಂ ಆಗಿ ಇಲ್ಲಿ ಕೆಲಸ ಮಾಡುತ್ತಿದ್ದೇನಾದರೂ ವಾಸ್ತವದಲ್ಲಿ ನಾನು ಯೋಗಿ” ಎಂದು ಮುಖ್ಯಮಂತ್ರಿ ಹೇಳಿದರು.


“ರಾಜಕೀಯವು ಸ್ವಾರ್ಥದಿಂದ ನಡೆಸಲ್ಪಡುತ್ತಿದ್ದರೆ, ಅದು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದರೆ ಅದು ಹೆಚ್ಚಿನ ಒಳಿತಿಗಾಗಿ ಆಗಿದ್ದರೆ, ಅದು ಪರಿಹಾರಗಳನ್ನು ಒದಗಿಸುತ್ತದೆ. ಸಮಸ್ಯೆಯ ಭಾಗವಾಗಿರುವುದು ಅಥವಾ ಪರಿಹಾರದ ನಡುವೆ ನಾವು ಆರಿಸಿಕೊಳ್ಳಬೇಕು ಮತ್ತು ಧರ್ಮವು ನಮಗೆ ಕಲಿಸುವುದು ಇದನ್ನೇ ಎಂದು ನಾನು ನಂಬುತ್ತೇನೆ. ಸ್ವಾರ್ಥಕ್ಕಾಗಿ ಧರ್ಮವನ್ನು ಅನುಸರಿಸಿದಾಗ, ಅದು ಹೊಸ ಸವಾಲುಗಳನ್ನು ಸೃಷ್ಟಿಸುತ್ತದೆ. ಉನ್ನತ ಉದ್ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಾಗ, ಅದು ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.” ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ