ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಶಿವಸೇನೆಯ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆ

ಶಿವಸೇನೆಯ ರಾಜನ್ ಸಾಲ್ವಿ ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ನಿನ್ನೆ ರಾಹುಲ್ ನಾರ್ವೇಕರ್ ಅವರನ್ನು ಅಭ್ಯರ್ಥಿಯನ್ನು ಘೋಷಿಸಿದೆ. ಇದೇ ವೇಳೆ ವಿಧಾನಸಭೆ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಶಿವಸೇನೆಯ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆ
Rajan Salvi
Updated By: ನಯನಾ ರಾಜೀವ್

Updated on: Jul 02, 2022 | 12:35 PM

ಶಿವಸೇನೆಯ ರಾಜನ್ ಸಾಲ್ವಿ ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ನಿನ್ನೆ ರಾಹುಲ್ ನಾರ್ವೇಕರ್ ಅವರನ್ನು ಅಭ್ಯರ್ಥಿಯನ್ನು ಘೋಷಿಸಿದೆ. ಇದೇ ವೇಳೆ ವಿಧಾನಸಭೆ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಮತ್ತೊಂದೆಡೆ, ಎನ್‌ಸಿಪಿ ಈಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ನಾಯಕ‌ ಬಾಳಾ ಸಾಹೇಬ್ ಥೋರಟ್, ಅಶೋಕ್ ಚವ್ಹಾಣ್, NCP ನಾಯಕ ಜಯಂತ್ ಪಾಟೀಲ್, ಧನಂಜಯ ಮುಂಡೆ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಶಿವಸೇನೆಯ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಸ್ಪೀಕರ್ ಹುದ್ದೆಗೆ ಚುನಾವಣೆ ಅನಿವಾರ್ಯವಾಗಿದೆ. ನಾಳೆ ಮಹಾರಾಷ್ಟ್ರ ಸ್ಪೀಕರ್ ಹುದ್ದೆಗೆ ಚುನಾವಣೆ ನಿಗದಿಯಾಗಿದೆ.

ಶಿವಸೇನೆಯಲ್ಲಿ ಏಕನಾಥ್ ಶಿಂದೆ ಬಂಡಾಯವೆದ್ದು ಅವರನ್ನು 39 ಶಾಸಕರು ಬೆಂಬಲಿಸಿದ್ದರು. ಆದರೆ ರಾಜನ್ ಸಾಲ್ವಿ ಶಿವಸೇನೆಯಲ್ಲೇ ಉಳಿದರು. ಹೀಗಾಗಿ ಅವರಿಗೆ ವಿಧಾನಸಭೆ ಸ್ಪೀಕರ್ ಹುದ್ದೆಗೆ ಸ್ಪರ್ಧಿಸಲು ಶಿವಸೇನೆ ದೊಡ್ಡ ಅವಕಾಶ ನೀಡಿದೆ.
ಇದೀಗ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಸಿದ್ದಾರೆ. ಮಹಾವಿಕಾಸ್ ಅಘಾಡಿ ಅವರು ಶಿವಸೇನೆಯ ರಾಜಪುರ ಶಾಸಕ ರಾಜನ್ ಸಾಲ್ವಿ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ.

ಬಿಜೆಪಿಯಿಂದ ರಾಹುಲ್ ನಾರ್ವೇಕರ್ ಕಣದಲ್ಲಿದ್ದಾರೆ. ಹೀಗಾಗಿ ಇದೀಗ ರಾಜನ್ ಸಾಲ್ವಿ ಹಾಗೂ ರಾಹುಲ್ ನಾರ್ವೇಕರ್ ನಡುವೆ ಹಣಾಹಣಿ ನಡೆಯುವುದು ಖಚಿತವಾಗಿದೆ.

ಅರ್ಜಿ ಭರ್ತಿ ಮಾಡುವಾಗ ಸುನೀಲ್ ಪ್ರಭು, ಅರವಿಂದ ಸಾವಂತ್, ಅಶೋಕ್ ಚವ್ಹಾಣ, ಜಯಂತ್ ಪಾಟೀಲ್, ಬಾಳಾಸಾಹೇಬ್ ಥೋರಟ್ ಹಾಗೂ ಮಹಾವಿಕಾಸ ಅಘಾಡಿ ಮುಖಂಡರು ಉಪಸ್ಥಿತರಿದ್ದರು.

Published On - 12:35 pm, Sat, 2 July 22