Modi on Swadeshi: ಸ್ವದೇಶೀ ಮತ್ತು ಸ್ವಾವಲಂಬನೆ; ದೇಶದ ಅಭ್ಯುದಯಕ್ಕೆ ಪ್ರಧಾನಿ ಮೋದಿ ಮಂತ್ರ

PM Narendra Modi speech: ನರೇಂದ್ರ ಮೋದಿ ಸೆಪ್ಟೆಂಬರ್ 21ರಂದು ಮಾಡಿದ ಭಾಷಣದಲ್ಲಿ ಸ್ವಾವಲಂಬನೆ ಮತ್ತು ಸ್ವದೇಶೀ ಮಂತ್ರ ಮುಂದಿಟ್ಟಿದ್ದಾರೆ. ದೇಶದ ಜನರು ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು ಮತ್ತು ಮಾರಬೇಕು. ವಿದೇಶೀ ಸರಕುಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

Modi on Swadeshi: ಸ್ವದೇಶೀ ಮತ್ತು ಸ್ವಾವಲಂಬನೆ; ದೇಶದ ಅಭ್ಯುದಯಕ್ಕೆ ಪ್ರಧಾನಿ ಮೋದಿ ಮಂತ್ರ
ನರೇಂದ್ರ ಮೋದಿ

Updated on: Sep 21, 2025 | 7:04 PM

ನವದೆಹಲಿ, ಸೆಪ್ಟೆಂಬರ್ 21: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನವರಾತ್ರಿ ಸಂದೇಶವಾಗಿ ದೇಶದ ಜನರಿಗೆ ಸ್ವದೇಶೀ ವಸ್ತುಗಳನ್ನು ಖರೀದಿಸುವಂತೆ ಕರೆ ನೀಡಿದರು. ಭಾನುವಾರ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಸ್ವದೇಶೀ ವಸ್ತುಗಳನ್ನು ಜನರು ಹೆಮ್ಮೆಯಿಂದ ಖರೀದಿಸಬೇಕು ಮತ್ತು ಮಾರಬೇಕು. ಭಾರತದ ಅಭ್ಯುದಯವು ಸ್ವಾವಲಂಬನೆಯ ಮೇಲೆ ಅವಲಂಬಿತವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಈಡೇರಬೇಕಾದರೆ ಸ್ವಾವಲಂಬನೆಯ ಪಥದಲ್ಲಿ ನಾವು ಸಾಗಬೇಕು. ನಮ್ಮ ಎಂಎಸ್​ಎಂಇಗಳು ಭಾರತವನ್ನು ಸ್ವಾವಲಂಬನೆಯ ಹಾದಿಯಲ್ಲಿ ಕರೆದೊಯ್ಯುವ ಗುರುತರ ಜವಾಬ್ದಾರಿ ಹೊಂದಿವೆ’ ಎಂದು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ: ಜಿಎಸ್​ಟಿ ಬಗ್ಗೆ ಹೇಳುವಾಗ ಪ್ರಧಾನಿ ಮೋದಿ ಬೆಂಗಳೂರನ್ನು ಪ್ರಸ್ತಾಪಿಸಿದ್ದು ಯಾಕೆ? ಇಲ್ಲಿದೆ ಅದರ ಹಿನ್ನೆಲೆ

ದೇಶೀಯ ತಯಾರಿಕೆಗೆ ಉತ್ತೇಜನ

ಭಾರತದಲ್ಲೇ ತಯಾರಿಸಲು ಸಾಧ್ಯ ಇರುವಂತಹ ಯಾವುದೇ ಸರಕುಗಳನ್ನು ತಯಾರಿಸುವತ್ತ ಜನರು ಗನ ಹರಿಸಬೇಕು ಎಂದು ಎಂಎಸ್​ಎಂಇಗಳಿಗೆ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.

‘ಈ ದೇಶದಲ್ಲಿ ನಾವು ಯಾವುದನ್ನು ತಯಾರಿಸಲು ಸಾಧ್ಯವೋ, ಅದನ್ನು ನಾವು ತಯಾರಿಸಬೇಕು. ಈ ದೇಶದ ಜನರಿಗೆ ಇದು ಅಗತ್ಯವಾಗಿದೆ’ ಎಂದು ನರೇಂದ್ರ ಮೋದಿ ತಿಳಿಸಿದರು.

‘ಸ್ವಾವಲಂಬನೆಯ ಮಂತ್ರವು ದೇಶದ ಸ್ವಾತಂತ್ರ್ಯವನ್ನು ಹೇಗೆ ಬಲಪಡಿಸಿದೆಯೋ, ಅದೇ ರೀತಿ ಸ್ವಾವಲಂಬನೆಯ ಮಂತ್ರದಿಂದಲೇ ದೇಶದ ಅಭಿವೃದ್ಧಿಗೆ ಪುಷ್ಟಿ ಸಿಗುತ್ತದೆ’ ಎಂದು ಮೋದಿ ಅಭಿಪ್ರಾಯಪಟ್ಟದರು.

ಇದನ್ನೂ ಓದಿ: PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

ವಿದೇಶೀ ಸರಕುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಜನರಿಗೆ ಈ ಸಂದರ್ಭದಲ್ಲಿ ಅವರು ಕರೆ ನೀಡಿದರು.

‘ಇವತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವು ವಿದೇಶೀ ಉತ್ಪನ್ನಗಳು ನಮ್ಮ ನಿತ್ಯ ಜೀವನದ ಭಾಗಗಳಾಗಿವೆ. ಜನರು ಸ್ಥಳೀಯ ಉದ್ದಿಮೆಗಳನ್ನು ಬೆಂಬಲಿಸಬೇಕು. ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹಿಂದೆ ದೇಶದ ಯುವಜನರ ಶ್ರಮ ಇರುತ್ತದೆ. ಜನರು ಈ ಉತ್ಪನ್ನಗಳನ್ನು ಖರೀದಿಸಬೇಕು. ಪ್ರತಿಯೊಂದು ಮನೆಯೂ ಸ್ವದೇಶೀಯತೆಗೆ ಸಂಕೇತವಾಗಿರಬೇಕು. ಪ್ರತಿಯೊಂದು ಅಂಗಡಿಯೂ ಸ್ವದೇಶೀ ಎಂದು ಗರ್ವದಿಂದ ಹೇಳಬೇಕು’ ಎಂದು ಪ್ರಧಾನಿಗಳು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ