AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಣಾ ಪಡೆಗಳ 2 ಡ್ರೋನ್​ ಹೊಡೆದುರುಳಿಸಿದ್ದಾಗಿ ಆಡಿಯೋ  ಬಿಡುಗಡೆ ಮಾಡಿದ ನಕ್ಸಲರು; ಅವರಲ್ಲಿ ಭಯ ಶುರುವಾಗಿದೆ ಎಂದ ಐಜಿ

ರಕ್ಷಣಾ ಪಡೆಗಳ ಡ್ರೋಣ್​ ವಿರುದ್ಧ ಏಪ್ರಿಲ್​ 19ರಂದು ನಾವು ಏರ್​​ಸ್ಟ್ರೈಕ್​ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ನಕ್ಸಲರು, ಈ ಡ್ರೋಣ್​ಗಳನ್ನು ನಮ್ಮ ಮೇಲೆ ಅಟ್ಯಾಕ್​ ಮಾಡಲೆಂದೇ ಸಿದ್ಧಪಡಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ರಕ್ಷಣಾ ಪಡೆಗಳ 2 ಡ್ರೋನ್​ ಹೊಡೆದುರುಳಿಸಿದ್ದಾಗಿ ಆಡಿಯೋ  ಬಿಡುಗಡೆ ಮಾಡಿದ ನಕ್ಸಲರು; ಅವರಲ್ಲಿ ಭಯ ಶುರುವಾಗಿದೆ ಎಂದ ಐಜಿ
ನಕ್ಸಲರು ಬಿಡುಗಡೆ ಮಾಡಿದ ಡ್ರೋನ್​ ಫೋಟೋ (ಕೃಪೆ-ಇಂಡಿಯಾ ಟುಡೆ)
Lakshmi Hegde
|

Updated on:Apr 22, 2021 | 4:52 PM

Share

ಚತ್ತೀಸ್​ಗಡ್​: ಇತ್ತೀಚೆಗಷ್ಟೇ 22 ಯೋಧರನ್ನು ಹತ್ಯೆ ಮಾಡಿದ್ದ ಚತ್ತೀಸ್​ಗಡ್​ ನಕ್ಸಲರು ಈಗೊಂದು ಹೇಳಿಕೆ ಬಿಡುಗಡೆ ಮಾಡಿದ್ದು, ತಾವು ರಕ್ಷಣಾ ಪಡೆಗೆ ಸೇರಿದ ಎರಡು ಡ್ರೋನ್​​ಗಳನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಆ ಫೋಟೋವನ್ನೂ ಬಿಡುಗಡೆ ಮಾಡಿದ್ದಾರೆ. ತಾವು ಹೊಡೆದುರುಳಿಸಿದ್ದೇವೆ ಎಂದು ಹೇಳಿರುವ ಕ್ವಾಡ್​ಕಾಪ್ಟರ್​​ನ ಫೋಟೋದೊಂದಿಗೆ ಆಡಿಯೋ ಸಂದೇಶವನ್ನೊಂದನ್ನು ಬಿಡುಗಡೆ ಮಾಡಿರುವ ನಕ್ಸಲರ ದಂಡಕಾರಣ್ಯ ವಿಶೇಷ ವಲಯ ಸಮಿತಿ ಪೊಲೀಸರಿಗೆ, ರಕ್ಷಣಾ ಸಿಬ್ಬಂದಿಗೆ ಸವಾಲನ್ನೂ ಹಾಕಿದೆ.

ಬಾಂಬ್​ ಸ್ಫೋಟಿಸಿ ಡ್ರೋಣ್​​ನ್ನು ಕೆಡವಲಾಗಿದೆ. ಈ ಸ್ಥಳಕ್ಕೆ ಬಸ್ತಾರಾದ ಐಜಿ, ಪೊಲೀಸ್ ಸಿಬ್ಬಂದಿಯನ್ನು ಕಳಿಸಿ ಪರಿಶೀಲನೆ ಮಾಡಬೇಕು. ಅದು ರಕ್ಷಣಾ ಪಡೆಯ ಡ್ರೋನ್​​ ಹೌದೋ, ಅಲ್ಲವೋ ಎಂಬುದನ್ನು ದೃಢೀಕರಿಸಬೇಕು ಎಂದು ನಕ್ಸಲ್​ ಮುಖಂಡರು ಹೇಳಿದ್ದು ಆಡಿಯೋದಲ್ಲಿ ಕೇಳುತ್ತದೆ. ಇನ್ನು, ಕೇಂದ್ರೀಯ ಮತ್ತು ರಾಜ್ಯ ರಕ್ಷಣಾ ಪಡೆಗಳು ಜಂಟಿಯಾಗಿ ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಈ ಪ್ರಯತ್ನದ ಭಾಗವಾಗಿ ಬಿಜಾಪುರ ಜಿಲ್ಲೆಯ ಎರಡು ಹಳ್ಳಿಗಳ ಸಮೀಪ ಬಾಂಬ್​ ಹಾಕಿವೆ ಎಂದು ನಕ್ಸಲರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಪೊಲೀಸ್ ಇಲಾಖೆ ಅಲ್ಲಗಳೆದಿದೆ.

ರಕ್ಷಣಾ ಪಡೆಗಳ ಡ್ರೋಣ್​ ವಿರುದ್ಧ ಏಪ್ರಿಲ್​ 19ರಂದು ನಾವು ಏರ್​​ಸ್ಟ್ರೈಕ್​ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ನಕ್ಸಲರು, ಈ ಡ್ರೋಣ್​ಗಳನ್ನು ನಮ್ಮ ಮೇಲೆ ಅಟ್ಯಾಕ್​ ಮಾಡಲೆಂದೇ ಸಿದ್ಧಪಡಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದರುವ ಬಸ್ತಾರ್​ ವಲಯದ ಐಜಿ ಸುಂದರ್ ರಾಜ್​ ಪಿ, ನಕ್ಸಲರು ಡ್ರೋಣ್​​ಗಳನ್ನು ಹೊಡೆದಿದ್ದೇವೆ ಎಂದು ಹೇಳುತ್ತಿರುವುದು ಸುಳ್ಳು. ಅವರಲ್ಲಿ ಭಯ ಕಾಡುತ್ತಿದೆ. ಹಾಗಾಗಿ ಇಂಥ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದಿದ್ದಾರೆ.

ನಕ್ಸಲಪೀಡಿತ ಚತ್ತೀಸ್​ಗಡ್​ದಲ್ಲಿ ಇದುವರೆಗೆ ನಕ್ಸಲರ ದಾಳಿಗೆ ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗಿವೆ. ಪೊಲೀಸ್​ ಸಿಬ್ಬಂದಿ, ಯೋಧರ ಪ್ರಾಣ ಹೋಗಿದೆ. ಇತ್ತೀಚೆಗಷ್ಟೇ ಸುಕ್ಮಾದಲ್ಲಿ ನಡೆದ ಎನ್​​ಕೌಂಟರ್​​ನಲ್ಲಿ 22ಕ್ಕೂ ಹೆಚ್ಚು ಸಿಆರ್​ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: ವೇಗವಾಗಿ ಆಕ್ಸಿಜನ್ ಪೂರೈಕೆ ಮಾಡುವಂತೆ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ ಪ್ರಧಾನಿ ಮೋದಿ

ಈ ಮೋದಿ ಸರ್ಕಾರ ಸರಿ ಇಲ್ಲ, ಕಾಮನ್​ ಮ್ಯಾನ್ ಜೀವನ ನೋಡಿ ಅಂತಾ ಸರ್ಕಾರದ ವಿರುದ್ಧ ಜನ ಕಿಡಿ

Naxals in Chhattisgarh claim that they shoot down police drones

Published On - 4:52 pm, Thu, 22 April 21

Follow Us
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!