AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಟ್​ಕ್ಯಾಟ್​ ಚಾಕೋಲೆಟ್ ಮೇಲೆ ಜಗನ್ನಾಥ ಸ್ವಾಮಿಯ ಫೋಟೋ ಹಾಕಿದ್ದಕ್ಕೆ ಜನರ ತರಾಟೆ; ಕ್ಷಮೆ ಕೋರಿದ ನೆಸ್ಲೆ

ಚಾಕೋಲೇಟ್ ತಿಂದ ನಂತರ ಆ ಕವರ್ ಅನ್ನು ರಸ್ತೆಗಳು, ಚರಂಡಿ ಮತ್ತು ಡಸ್ಟ್‌ಬಿನ್‌ಗಳಲ್ಲಿ ಜನರು ಬಿಸಾಡುತ್ತಾರೆ. ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ, ಚಾಕೋಲೇಟ್ ಕವರ್ ಮೇಲಿನ ದೇವರ ಚಿತ್ರಗಳನ್ನು ತೆಗೆದುಹಾಕಲು ನೆಟ್ಟಿಗರು ವಿನಂತಿಸಿದ್ದಾರೆ.

ಕಿಟ್​ಕ್ಯಾಟ್​ ಚಾಕೋಲೆಟ್ ಮೇಲೆ ಜಗನ್ನಾಥ ಸ್ವಾಮಿಯ ಫೋಟೋ ಹಾಕಿದ್ದಕ್ಕೆ ಜನರ ತರಾಟೆ; ಕ್ಷಮೆ ಕೋರಿದ ನೆಸ್ಲೆ
ಕಿಟ್​ಕ್ಯಾಟ್ ಚಾಕೋಲೇಟ್
TV9 Web
| Edited By: |

Updated on: Jan 20, 2022 | 7:11 PM

Share

ನೆಸ್ಲೆ ಇಂಡಿಯಾ (Nestle India) ತನ್ನ ಪ್ರಸಿದ್ಧ ಉತ್ಪನ್ನವಾದ ಕಿಟ್‌ಕ್ಯಾಟ್‌ (KitKat) ಚಾಕೋಲೆಟ್​ನ ಕವರ್ ಮೇಲೆ ಜಗನ್ನಾಥಸ್ವಾಮಿಯ ಫೋಟೋವನ್ನು ಪ್ರಿಂಟ್ ಮಾಡಿದೆ. ಈ ಮೂಲಕ ಸಾಮಾಜಿಕ ಮಾಧ್ಯಮದ ಕೋಪಕ್ಕೆ ಗುರಿಯಾಗಿದೆ. ಕಿಟ್​ಕ್ಯಾಟ್​ ಚಾಕೋಲೆಟ್ ಕವರ್ ಮೇಲೆ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರೆಯ ಚಿತ್ರಗಳನ್ನು ಪ್ರಿಂಟ್ ಮಾಡಲಾಗಿದೆ. ಇದು ಅನೇಕರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಟ್ವಿಟ್ಟಿಗರು ಕಿಡಿ ಕಾರಿದ್ದಾರೆ. ಚಾಕೋಲೆಟ್ ಮೇಲೆ ದೇವರ ಫೋಟೋ ಹಾಕಿರುವುದು ವಿವಾದ ಸೃಷ್ಟಿಸುತ್ತಿದ್ದಂತೆ ನೆಸ್ಲೆ ಇಂಡಿಯಾ ಆ ಚಾಕೋಲೇಟ್ ಕವರ್ ವಿನ್ಯಾಸವನ್ನು ಹಿಂಪಡೆದಿದೆ.

ಹಿಂದೂ ಧರ್ಮದ ಪೂಜ್ಯ ದೇವತೆಗಳ ಚಿತ್ರಗಳನ್ನು ಚಾಕೋಲೇಟ್​ ಮೇಲೆ ಮುದ್ರಿಸುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಚಾಕೋಲೇಟ್ ತಿಂದ ನಂತರ ಆ ಕವರ್ ಅನ್ನು ರಸ್ತೆಗಳು, ಚರಂಡಿ ಮತ್ತು ಡಸ್ಟ್‌ಬಿನ್‌ಗಳಲ್ಲಿ ಜನರು ಬಿಸಾಡುತ್ತಾರೆ. ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ, ಚಾಕೋಲೇಟ್ ಕವರ್ ಮೇಲಿನ ದೇವರ ಚಿತ್ರಗಳನ್ನು ತೆಗೆದುಹಾಕಲು ಎಫ್‌ಎಂಸಿಜಿ ಬ್ರಾಂಡ್‌ಗೆ ನೆಟ್ಟಿಗರು ವಿನಂತಿಸಿದ್ದಾರೆ.

ದಯವಿಟ್ಟು ನಿಮ್ಮ ಕಿಟ್​ಕ್ಯಾಟ್​ ಚಾಕೊಲೇಟ್ ಕವರ್‌ನಲ್ಲಿರುವ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರಾ ಫೋಟೋಗಳನ್ನು ತೆಗೆದುಹಾಕಿ. ಜನರು ಚಾಕೊಲೇಟ್ ಅನ್ನು ತಿಂದ ನಂತರ ಕವರ್ ಅನ್ನು ರಸ್ತೆ, ಚರಂಡಿ, ಡಸ್ಟ್‌ಬಿನ್ ಇತ್ಯಾದಿಗಳ ಮೇಲೆ ಎಸೆಯುತ್ತಾರೆ. ಆದ್ದರಿಂದ ದಯವಿಟ್ಟು ಫೋಟೋಗಳನ್ನು ತೆಗೆದುಹಾಕಿ” ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಧಾರ್ಮಿಕ ಭಾವನೆಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ನೆಸ್ಲೆ ಕಂಪನಿಯನ್ನು ಟೀಕಿಸಿದ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, ಭಾರತದ ಎಲ್ಲಾ ಬಹು ರಾಷ್ಟ್ರೀಯ ಕಂಪನಿಗಳು ಹಿಂದೂಗಳ ಧಾರ್ಮಿಕ ಭಾವನೆಯನ್ನು ಲಘುವಾಗಿ ಪರಿಗಣಿಸಿವೆ. ಇದೇ ರೀತಿ ಬೇರೆ ಧರ್ಮದ ದೇವರಿಗೆ ಅವಮಾನ ಮಾಡಿದರೆ ಏನಾಗುತ್ತದೆ ಎಂದು ಒಮ್ಮೆ ಪ್ರಯತ್ನಿಸಿ ನೋಡಿ!! ಎಂದು ಟೀಕಿಸಿದ್ದಾರೆ.

ಭಾರತದ ಕಲೆ ಮತ್ತು ಅದರ ಕುಶಲಕರ್ಮಿಗಳ ಬಗ್ಗೆ ತಿಳಿದುಕೊಳ್ಳಲು ಜನರನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ನಾವು ಈ ವಿಷಯದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಅಜಾಗರೂಕತೆಯಿಂದ ಜನರ ಭಾವನೆಗಳಿಗೆ ನೋವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತೇವೆ ಎಂದು ನೆಸ್ಲೆ ಇಂಡಿಯಾ ಕಂಪನಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Shocking Video: ಗರ್ಭಿಣಿಯಾಗಿದ್ದ ಫಾರೆಸ್ಟ್​ ರೇಂಜರ್​ ಕೂದಲು ಹಿಡಿದೆಳೆದು, ಥಳಿಸಿದ ದಂಪತಿ; ಶಾಕಿಂಗ್ ವಿಡಿಯೋ ವೈರಲ್

Shocking Video: ಕೊರೊನಾ ಲಸಿಕೆಯಿಂದ ಪಾರಾಗಲು ಮರವೇರಿ ಕುಳಿತ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್