
ಧರ್ಮಪುರಿ, ಡಿಸೆಂಬರ್ 12: ಗರ್ಭಿಣಿಯೊಬ್ಬರ ಅನಿರೀಕ್ಷಿತ ಸಾವು ಪೊಲೀಸರ ನಿದ್ರೆಗೆಡಿಸಿತ್ತು. ಆಕೆ ಮೆಟ್ಟಿಲಿನಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಗಂಡ ಪೊಲೀಸರಿಗೆ ತಿಳಿಸಿದ್ದ. ಆದರೆ, ಅಸಲಿ ಸಂಗತಿ ಬೇರೆಯೇ ಇತ್ತು. ಧರ್ಮಪುರಿಯಲ್ಲಿ ಈ ತಿಂಗಳ ಆರಂಭದಲ್ಲಿ ಮನೆಯಲ್ಲಿಯೇ ಗರ್ಭಪಾತ (Abortion) ಮಾಡುವಾಗ ಆಕೆ ಸಾವನ್ನಪ್ಪಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ.
ಎರಿಯೂರು ಬಳಿಯ ಪೂಚೂರಿನ 26 ವರ್ಷದ ಕೆ. ರಮ್ಯಾ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದು, ಇತ್ತೀಚೆಗೆ ಮತ್ತೆ ಗರ್ಭಿಣಿಯಾಗಿದ್ದರು. ಡಿಸೆಂಬರ್ 1ರಂದು ಆಕೆ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅವರ ಪತಿ ಕಣ್ಣನ್ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದರು. ಆದರೆ, ಆಕೆಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಎರಿಯೂರು ಪೊಲೀಸರು ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ಅರ್ಜಿ ನ್ಯಾಯಾಲಯದಲ್ಲಿ ಬಾಕಿ, ಮಗುವಿಗೆ ಜನ್ಮಕೊಟ್ಟ 15ರ ಬಾಲಕಿ
ಆ ಮಹಿಳೆಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ರಮ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಈಗ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿರುವುದರಿಂದ ಕಣ್ಣನ್ ಅವರಿಗೆ ಯಾವ ರೀತಿಯ ಮಗು ಜನಿಸುತ್ತದೆ ಎಂದು ನೋಡಲು ಕುತೂಹಲ ಹೆಚ್ಚಾಗಿತ್ತು. ಕಣ್ಣನ್ ತನಗೆ ಮಗನೇ ಬೇಕೆಂದು ಹಠ ಹಿಡಿದಿದ್ದ. ಆದರೆ, ಅವರಿಗೆ ಹೆಣ್ಣುಮಗು ಹುಟ್ಟಲಿದೆ ಎಂಬುದು ಸ್ಕ್ಯಾನಿಂಗ್ ವೇಳೆ ಗೊತ್ತಾಗಿತ್ತು. ಹೀಗಾಗಿ, ಆಕೆಯ ಗರ್ಭಪಾತ ಮಾಡಲು ನಿರ್ಧರಿಸಿದ್ದ.
ಮನೆಯಲ್ಲೇ ಆಕೆಗೆ ಗರ್ಭಪಾತ ಮಾಡಿಸುವಾಗ ಆಕೆ ಮೃತಪಟ್ಟಿದ್ದರು. ಅವರು ನರ್ಸ್ ಸುಕನ್ಯಾ (35) ಮತ್ತು ಸೇಲಂನ ಬ್ರೋಕರ್ ವನಿತಾ (35) ಅವರನ್ನು ಸಂಪರ್ಕಿಸಿದ ಮನೆಯಲ್ಲಿಯೇ ರಮ್ಯಾಗೆ ಗರ್ಭಪಾತ ಮಾಡಲು ಸಲಹೆ ಕೇಳಿದ್ದ. ಅವರು ಆ ಬಗ್ಗೆ ಕಣ್ಣನ್ಗೆ ವಿವರಿಸಿದ್ದರು. ಗರ್ಭಪಾತ ಮಾಡಿಸಿದ ನಂತರ ರಮ್ಯಾ ಅವರ ಆರೋಗ್ಯ ಹದಗೆಟ್ಟಿತು. ಬಳಿಕ ಅವರು ನಿಧನರಾದರು. ಇದನ್ನು ಮರೆಮಾಡಲು, ಕಣ್ಣನ್ ರಮ್ಯಾ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದರು.
ಇದನ್ನೂ ಓದಿ: ಅತ್ಯಾಚಾರವೆಸಗಿ ಬಾಲಕಿಯ ಗರ್ಭಪಾತ ಮಾಡಿಸಲು ಮುಂದಾಗಿದ್ದ ಅಣ್ಣ ಸೇರಿ ಇಬ್ಬರ ಬಂಧನ
ಕಣ್ಣನ್ ತನ್ನ ಸಂಬಂಧಿಕರಿಗೆ ರಮ್ಯಾ ಅನಿರೀಕ್ಷಿತವಾಗಿ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾಗಿ ಹೇಳಿದ್ದರು. ನಂತರ, ಆ ಮಹಿಳೆಯ ಕುಟುಂಬ ಮತ್ತು ಸಂಬಂಧಿಕರು ಅದನ್ನು ನಂಬಿ ದುಃಖದಿಂದ ಆಕೆಯ ಅಂತ್ಯಕ್ರಿಯೆಯನ್ನು ನೆರವೇರಿಸಿ ಕಳುಹಿಸಿದರು. ಆದರೆ, ಅವರಿಗೆ ಕಣ್ಣನ್ ಬಗ್ಗೆ ಸ್ವಲ್ಪ ಅನುಮಾನವಿತ್ತು.
ಇದರ ನಂತರ, ಅವರು ತಮ್ಮ ಮಗಳ ಸಾವು ಅನುಮಾನಾಸ್ಪದವಾಗಿದೆ ಎಂದು ಆ ಮಹಿಳೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ, ಕಣ್ಣನ್ ಇದು ಅಪಘಾತ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಪೊಲೀಸರಿಗೂ ಅನುಮಾನ ವ್ಯಕ್ತವಾಗಿತ್ತು. ಇದರ ನಂತರ, ಅವರು ತನಿಖೆ ಆರಂಭಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ