Video: ಪಿಂಚಣಿ ಪಡೆಯಲು ಈ ಬಿಸಿಲ ಝಳದಲ್ಲಿ ಮುರಿದ ಕುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವೃದ್ಧೆ

ಕಿತ್ತು ತಿನ್ನುವ ಬಡತನ, ತಿಂಗಳಿಗೆ ಬರುವ ಪಿಂಚಣಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ವೃದ್ಧೆ. ಪಿಂಚಣಿ ಪಡೆಯಲು ಕಿಲೋಮೀಟರ್​ಗಟ್ಟಲೆ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

Video: ಪಿಂಚಣಿ ಪಡೆಯಲು ಈ ಬಿಸಿಲ ಝಳದಲ್ಲಿ ಮುರಿದ ಕುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವೃದ್ಧೆ
ವೃದ್ಧೆ
Image Credit source: ANI

Updated on: Apr 21, 2023 | 8:38 AM

ಕಿತ್ತು ತಿನ್ನುವ ಬಡತನ, ತಿಂಗಳಿಗೆ ಬರುವ ಪಿಂಚಣಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ವೃದ್ಧೆ. ಪಿಂಚಣಿ ಪಡೆಯಲು ಕಿಲೋಮೀಟರ್​ಗಟ್ಟಲೆ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವೃದ್ಧೆಗೆ 70 ವರ್ಷ, ನಡೆಯಲಾಗದ ಪರಿಸ್ಥಿತಿ ಆದರೆ ಬ್ಯಾಂಕ್​ಗೆ ಹೋಗಿ ಪಿಂಚಣಿ ಪಡೆಯುವುದು ಅನಿವಾರ್ಯ. ಮುರಿದಿರುವ ಖುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಡಿಶಾದ ನಬ್ರಂಗ್​ಪುರ್ ಜಿಲ್ಲೆಯಲ್ಲಿ ಏಪ್ರಿಲ್ 17 ರಂದು ಕಂಡುಬಂದಂತಹ ದೃಶ್ಯವಿದು.

ವೃದ್ಧೆ ಹೆಸರು ಸೂರ್ಯ ಹರಿಜನ್, ಅವರು ವಲಸೆ ಕಾರ್ಮಿಕರಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಇಷ್ಟು ವರ್ಷ ಕೆಲಸ ಮಾಡುತ್ತಿದ್ದರು. ಅವರು ತನ್ನ ಕಿರಿ ಮಗನ ಜತೆ ವಾಸವಾಗಿದ್ದಾರೆ, ಅವರು ಸ್ವಂತ ಜಮೀನು, ಮನೆ ಯಾವುದೂ ಇಲ್ಲ, ಗುಡಿಸಿಲಿನಲ್ಲಿಯೇ ಅವರ ವಾಸ.

ಮತ್ತಷ್ಟು ಓದಿ: ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಓಡಿದ ಒಡಿಯಾ ಮಹಿಳೆ; ವಿಡಿಯೋ ವೈರಲ್​​​​

ಬ್ಯಾಂಕ್​ಗೆ ತೆರಳಿದ್ದರೂ ಅವರ ಹೆಬ್ಬೆಟ್ಟು ಮ್ಯಾಚ್ ಆಗದ ಕಾರಣ ಮನೆಗೆ ವಾಪಸ್ ಕಳುಹಿಸಿದ್ದಾರೆ. ಅವರು ಕೈ ಬೆರಳು ಸರಿ ಇಲ್ಲದ ಕಾರಣ ಹಣ ಪಡೆಯಲು ತೊಂದರೆ ಅನುಭವಿಸಬೇಕಾಯಿತು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.

ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಬರುತ್ತದೆ. ನಾವು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಎಸ್​ಬಿಐ ಮ್ಯಾನೇಜರ್ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us