Thalapathy Vijay
Thalapathy Vijay – ದಳಪತಿ ವಿಜಯ್ ತಮಿಳು ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಸ್ಟಾರ್ ನಟನಾಗಿ ಮೆರೆದು, ಕೋಟ್ಯಂತರ ಅಭಿಮಾನಿಗಳ ಪ್ರೀತಿಗೆ ಪಾತ್ರರಾದವರು. ಆಕ್ಷನ್ ಮತ್ತು ಸಾಮಾಜಿಕ ಸಂದೇಶದ ಸಿನಿಮಾಗಳ ಮೂಲಕ ಮುಂಚೂಣಿಗೆ ಬಂದ ಅವರು, ‘ತಮಿಳಗ ವೆಟ್ರಿ ಕಳಗಂ’ ರಾಜಕೀಯ ಪಕ್ಷವನ್ನು ಸ್ಥಾಪಿಸಿ ರಾಜಕೀಯ ರಂಗಕ್ಕೆ ಕಾಲಿಟ್ಟರು. ತದನಂತರ ನಡೆದ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ತಮ್ಮ ಅದ್ಭುತ ನಟನಾ ಪಯಣಕ್ಕೆ ತೆರೆ ಎಳೆಯುವ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23ರಂದು ಬಿಡುಗಡೆಯಾಗಿದೆ.
ಇನ್ನೂ ಹೆಚ್ಚು ಓದಿವಿಜಯ್ ಸಿಎಂ ಆಗಿ ಕಳೆಯಿತು 100 ದಿನ: ಮಾಧ್ಯಮದ ಪ್ರಶ್ನೆಗೆ ಮುಗುಳ್ನಕ್ಕು ಹೊರಟ ರಜನಿಕಾಂತ್
ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಕ್ಕೆ ತಮಗೆ ಯಾವುದೇ ಅಸೂಯೆ ಇಲ್ಲ ಎಂದು ರಜನಿಕಾಂತ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದರು. ಆದರೆ ವಿಜಯ್ ಅವರು ಸಿಎಂ ಆಗಿ 100 ದಿನ ಪೂರೈಸಿರುವುದರ ಬಗ್ಗೆ ಕೇಳಿದ್ದಕ್ಕೆ ರಜನಿಕಾಂತ್ ಅವರು ಪ್ರತಿಕ್ರಿಯೆ ನೀಡಿಲ್ಲ. ವಿಡಿಯೋ ವೈರಲ್ ಆಗಿದೆ.
- Madan Kumar
- Updated on: Aug 26, 2026
- 3:48 pm
ತಾಯಿ ಸಂಗೀತಾ ಹಾಗೂ ತಂದೆ ವಿಜಯ್ ಸಂಬಂಧದ ಬಗ್ಗೆ ಜೇಸನ್ ಸಂಜಯ್ ಮಾತು
ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ತಮ್ಮ ತಾಯಿ ಸಂಗೀತಾ ಹಾಗೂ ತಂಗಿ ದಿವ್ಯಾ ಜೊತೆಗಿನ ಬಾಂಧವ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಸಿನಿಮಾ ಬಿಡುಗಡೆಗೂ ಮುನ್ನ ನೀಡಿರುವ ಸಂದರ್ಶನದಲ್ಲಿ ಕುಟುಂಬದ ಜೊತೆಗಿನ ಸಿಹಿ-ಹಿಹಿ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
- Shreelaxmi H
- Updated on: Aug 25, 2026
- 8:14 am
‘ಧೈರ್ಯವಿದ್ದರೆ ವಿಜಯ್ ಆಡಳಿತದ ಬಗ್ಗೆ ಮಾತನಾಡಿ’; ತ್ರಿಷಾ ಟ್ರೋಲ್ಗೆ ಸಂಜನಾ ಗಲ್ರಾನಿ ರಿಯಾಕ್ಷನ್
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಕ್ಕೆ ನಟಿ ತ್ರಿಷಾ ತೀವ್ರ ಟ್ರೋಲ್ಗೆ ಒಳಗಾಗಿದ್ದಾರೆ. ಈ ವೇಳೆ ತ್ರಿಷಾ ಬೆಂಬಲಕ್ಕೆ ನಿಂತಿರುವ ನಟಿ ಸಂಜನಾ ಗಲ್ರಾನಿ, ಧೈರ್ಯವಿದ್ದರೆ ವಿಜಯ್ ರಾಜಕೀಯದ ಬಗ್ಗೆ ಮಾತನಾಡಿ. ಒಬ್ಬ ಮಹಿಳೆಯ ವೈಯಕ್ತಿಕ ಜೀವನವನ್ನು ಟಾರ್ಗೆಟ್ ಮಾಡಬೇಡಿ ಎಂದು ಟ್ರೋಲಿಗರಿಗೆ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
- Rajesh Duggumane
- Updated on: Aug 21, 2026
- 7:25 am
ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ
ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡಿರುವ ಸಿನಿಮಾ ಎಂಬ ಕಾರಣಕ್ಕೆ ‘ಸಿಗ್ಮಾ’ ಮೇಲೆ ಜನರಿಗೆ ನಿರೀಕ್ಷೆ ಮೂಡಿದೆ. ಸಂದೀಪ್ ಕಿಶನ್ ನಟಿಸಿರುವ ಈ ಸಿನಿಮಾದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗಿದೆ. ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್’ ಈ ಬಗ್ಗೆ ಮಾಹಿತಿ ನೀಡಿದೆ.
- Madan Kumar
- Updated on: Aug 20, 2026
- 4:49 pm
ತ್ರಿಷಾಗೆ ವಿಜಯ್ ಸೆಲ್ಯೂಟ್? ಡಿಎಂಕೆ ಕಡೆಯಿಂದ ಬಂತು ವಾಗ್ದಾಳಿ
ತಮಿಳುನಾಡು ಸಿಎಂ ವಿಜಯ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಅವರಿಗೆ ಮುಂಭಾಗದ ಸಾಲಿನಲ್ಲಿ ಆಸನ ಕಲ್ಪಿಸಿದ್ದನ್ನು ಡಿಎಂಕೆ ಪತ್ರಿಕೆ ಮುರಸೋಳಿ ತೀವ್ರವಾಗಿ ಖಂಡಿಸಿದೆ. ಜೊತೆಗೆ ಚಿತ್ರರಂಗದ ಆಪ್ತರಿಗೆ ಸರ್ಕಾರಿ ಹುದ್ದೆ ನೀಡಿರುವ ಸ್ವಜನಪಕ್ಷಪಾತದ ಆರೋಪವನ್ನು ಡಿಎಂಕೆ ಮಾಡಿದೆ .
- Shreelaxmi H
- Updated on: Aug 19, 2026
- 8:08 am
ಹನೂರು ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ನೆರೆ ರಾಜ್ಯದ ವಿಧಾನ ಸಭೆಯಲ್ಲಿ ಕರ್ನಾಟಕದಲ್ಲಿ ನಡೆದ ಘಟನೆ ಸಂಬಂಧ ಭಾರಿ ಚರ್ಚೆಯಾಗಿದ್ದು, ಪ್ರಕರಣದ ತನಿಖೆಯನ್ನು ಕರ್ನಾಟಕ ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
- Dileep CP
- Updated on: Aug 18, 2026
- 4:47 pm
ಚಾಮರಾಜನಗರ ಶೂಟೌಟ್ ಪ್ರಕರಣ: ತಮಿಳುನಾಡು ಸಿಎಂ ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಚಾಮರಾಜನಗರ ಶೂಟೌಟ್ ಪ್ರಕರಣದ ಬಗ್ಗೆ ತಮಿಳುನಾಡು ಸಿಎಂ ವಿಜಯ್ ಹೇಳಿಕೆಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ರಾಜ್ಯಗಳ ಕಾನೂನು ಸುವ್ಯವಸ್ಥೆ ಮತ್ತು ಆಡಳಿತದಲ್ಲಿ ಪರಸ್ಪರ ಮಧ್ಯಪ್ರವೇಶಿಸಬಾರದು, ಇದು ಸಂಯುಕ್ತ ರಚನೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ರಾಜ್ಯದ ರಕ್ಷಣೆ ನಮಗೆ ಗೊತ್ತಿದೆ, ಅವರ ಕೆಲಸ ಅವರು ನೋಡಿಕೊಳ್ಳಲಿ ಎಂದು ಡಿಕೆಶಿ ಹೇಳಿದ್ದಾರೆ.
- Anil Kalkere
- Updated on: Aug 18, 2026
- 1:21 pm
‘ಜನ ನಾಯಗನ್’ ಒಟಿಟಿ ರಿಲೀಸ್ ದಿನಾಂಕ ಘೋಷಣೆ; ವಿಜಯ್ ಕೊನೆಯ ಸಿನಿಮಾ ವೀಕ್ಷಣೆಗೆ ದಿನಾಂಕ ನಿಗದಿ
ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 21ರಿಂದ ಝೀ5 ಪ್ಲಾಟ್ಫಾರ್ಮ್ನಲ್ಲಿ ಪ್ರಸಾರ ಆರಂಭವಾಗಲಿದೆ.. ರಾಜಕೀಯ ಪ್ರವೇಶಕ್ಕೂ ಮುನ್ನ ತೆರೆಗೆ ಬಂದ ವಿಜಯ್ ಅವರ ಈ ವಿದಾಯದ ಸಿನಿಮಾವನ್ನು ಮನೆಯಲ್ಲೇ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
- Shreelaxmi H
- Updated on: Aug 18, 2026
- 1:02 pm
ಕದ್ದು ಮುಚ್ಚಿ ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರ
Cauvery Water Dispute: ರಾತ್ರೋರಾತ್ರಿ ಕೆಆರ್ಎಸ್ನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಬಿಡಲಾಗಿದೆ. ಕಬಿನಿ ಒಳಹರಿವು ಇಳಿದ ಕಾರಣ ಹಾಗೂ CWMA ನಿರ್ದೇಶನದಂತೆ ನೀರು ಹರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
- Dileep CP
- Updated on: Aug 15, 2026
- 3:19 pm
ಸ್ವಾತಂತ್ರ್ಯ ದಿನದ ಪರೇಡ್ ವೇಳೆ ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡ ತ್ರಿಷಾ
ನಟಿ ತ್ರಿಷಾ ಹಾಗೂ ದಳಪತಿ ವಿಜಯ್ ಸಂಬಂಧದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸ್ವಾತಂತ್ರ್ಯ ದಿನದ ಪರೇಡ್ ವೇಳೆ ವಿಜಯ್ ಕುಟುಂಬಸ್ಥರೊಂದಿಗೆ ತ್ರಿಷಾ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದ್ದು, ಸಂಗೀತಾ ವಿಚ್ಛೇದನ ಅರ್ಜಿ ವಾಪಸ್ ಪಡೆದ ಬೆನ್ನಲ್ಲೇ ಈ ಘಟನೆ ಭಾರಿ ಕುತೂಹಲ ಮೂಡಿಸಿದೆ.
- Rajesh Duggumane
- Updated on: Aug 15, 2026
- 10:48 am
ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ; ಸರ್ಕಾರಕ್ಕೆ ಹೆಚ್ಚಿನ ವಿಪಕ್ಷಗಳ ಬೆಂಬಲ; ಬಿಜೆಪಿಯಿಂದ ಸಭಾತ್ಯಾಗ
Tamil Nadu Assembly Passes Resolution Against NEET, BJP Stages Walkout: ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲು ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗಿದೆ. ಸಿಎಂ ವಿಜಯ್ ನೇತೃತ್ವದ ಸರ್ಕಾರದ ಈ ನಿರ್ಣಯವನ್ನು ಡಿಎಂಕೆ, ಎಡಿಎಂಕೆ, ಪಿಎಂಕೆ ಇತ್ಯಾದಿ ಹೆಚ್ಚಿನ ವಿಪಕ್ಷಗಳು ಬಂಬಲಿಸಿವೆ. ಬಿಜೆಪಿ ಈ ನಿರ್ಣಯ ವಿರೋಧಿಸಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದೆ.
- Vijaya Sarathy SN
- Updated on: Aug 11, 2026
- 1:50 pm
ಸಿನಿಮಾ ಆಪ್ತರಿಗೆ ಸಾಲು ಸಾಲು ಸರ್ಕಾರಿ ಹುದ್ದೆ; ಸಿಎಂ ವಿಜಯ್ ನಿರ್ಧಾರಕ್ಕೆ ಭಾರಿ ಚರ್ಚೆ
ತಮಿಳುನಾಡು ಸರ್ಕಾರವು 'ಗೋಟ್' ಸಿನಿಮಾ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ದೇವಾಲಯಗಳ ಧರ್ಮದರ್ಶಿ ಆಯ್ಕೆ ಸಮಿತಿಗೆ ನೇಮಕ ಮಾಡಿದೆ. ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಪ್ರಾರಂಭವಾಗಿದ್ದು, ಸಿಎಂ ವಿಜಯ್ ಅವರು ಚಿತ್ರರಂಗದ ಆಪ್ತರಿಗೆ ಸಾಲು ಸಾಲು ಸರ್ಕಾರಿ ಹುದ್ದೆ ನೀಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
- Shreelaxmi H
- Updated on: Aug 11, 2026
- 8:09 am