AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣಕ್ಕೆ ಶೀಘ್ರದಲ್ಲೇ ಬರಲಿದೆ ಹೊರ ವರ್ತುಲ ರೈಲು ಯೋಜನೆ: ಕಿಶನ್ ರೆಡ್ಡಿ

ದೇಶದಲ್ಲೇ ಪ್ರಥಮ ಬಾರಿಗೆ ಹೊರ ವರ್ತುಲ ರೈಲು ಯೋಜನೆ ಹೈದರಾಬಾದ್‌ಗೆ ಬರುತ್ತಿದೆ. ಈ ಯೋಜನೆಯ ಮೂಲಕ ವ್ಯಾಪಾರ ಮತ್ತು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ತೆಲಂಗಾಣಕ್ಕೆ ಶೀಘ್ರದಲ್ಲೇ ಬರಲಿದೆ ಹೊರ ವರ್ತುಲ ರೈಲು ಯೋಜನೆ: ಕಿಶನ್ ರೆಡ್ಡಿ
ಕಿಶನ್ ರೆಡ್ಡಿ
ರಶ್ಮಿ ಕಲ್ಲಕಟ್ಟ
|

Updated on:Jun 28, 2023 | 8:25 PM

Share

ದೆಹಲಿಯಲ್ಲಿ ಇಂದು(ಬುಧವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ,(G. Kishan Reddy) ಪ್ರಾದೇಶಿಕ ವರ್ತುಲ ರಸ್ತೆಗೆ (Regional Ring Road) ಸಮಾನಾಂತರವಾಗಿ ತೆಲಂಗಾಣದಲ್ಲಿ (Telangana) ಹೊರ ವರ್ತುಲ ರೈಲು ಯೋಜನೆ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದಾರೆ. ರಿಂಗ್ ರೈಲು ಯೋಜನೆಯ ವಿವರಗಳನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಲಾಗಿದ್ದು, ಮಾರ್ಗ ನಕ್ಷೆಯ 99 ಶೇ ಸಿದ್ಧತೆ ಪೂರ್ಣಗೊಂಡಿದೆ. ಆರ್‌ಆರ್‌ಆರ್ ಮತ್ತು ಹೊರ ವರ್ತುಲ ರೈಲಿನಿಂದ ಹೈದರಾಬಾದ್‌ಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ರೆಡ್ಡಿ ಹೇಳಿದ್ದಾರೆ.

ದೇಶದಲ್ಲೇ ಪ್ರಥಮ ಬಾರಿಗೆ ಹೊರ ವರ್ತುಲ ರೈಲು ಯೋಜನೆ ಹೈದರಾಬಾದ್‌ಗೆ ಬರುತ್ತಿದೆ. ಈ ಯೋಜನೆಯ ಮೂಲಕ ವ್ಯಾಪಾರ ಮತ್ತು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ. ವಿಜಯವಾಡ, ಗುಂಟೂರು, ವಾರಂಗಲ್, ಮೇದಕ್ ಮತ್ತು ಮುಂಬೈ ರೈಲು ಮಾರ್ಗಗಳಿಗೆ ಹೊರ ವರ್ತುಲ ರೈಲು ಸಂಪರ್ಕವಿರಲಿದೆ ಎಂದು ಅವರು ಹೇಳಿದರು.

ಹೈದ್ರಾಬಾದ್ ನಗರದ ಸುತ್ತಮುತ್ತಲಿನ ಪ್ರಾದೇಶಿಕ ವರ್ತುಲ ರಸ್ತೆಯ ಬಾಹ್ಯ ಪರಿಧಿಯಲ್ಲಿ ಹೊರ ವರ್ತುಲ ರೈಲಿಗೆ ರೈಲ್ವೆ ಸಚಿವಾಲಯದಿಂದ ಮಂಜೂರಾದ ಫೈನಲ್ ಲೊಕೇಷನ್ ಸರ್ವೇ (FLS) ರೂ. 13.95 ಕೋಟಿ.  ಬೈಪಾಸ್ ಕಮ್ ರೈಲ್ ಓವರ್ ರೈಲ್ ಸೇರಿದಂತೆ ಹೊರ ವರ್ತುಲ ರೈಲಿಗೆ ಅಕ್ಕನಪೇಟೆ, ಯಾದಾದ್ರಿ, ಚಿಟ್ಯಾಲ್, ಬುರ್ಗುಳ, ವಿಕಾರಾಬಾದ್ ಮತ್ತು ಗೇಟ್ ವನಂಪಲ್ಲಿ ಒಟ್ಟು 563.5 ಕಿಲೋಮೀಟರ್.

MMTS ಹಂತ-II ಅನ್ನು ಘಟ್‌ಕೇಸರ್ ಮತ್ತು ರಾಯಗೀರ್ ನಡುವೆ 330 ಕೋಟಿ ವೆಚ್ಚದಲ್ಲಿ 33 ಕಿಲೋಮೀಟರ್‌ಗಳವರೆಗೆ ವಿಸ್ತರಿಸಲು 100% ಧನಸಹಾಯವನ್ನು ರೈಲ್ವೆ ಅನುಮೋದಿಸಿದೆ.MMTS ಹಂತ-II ಗಾಗಿ ಯೋಜನಾ ವೆಚ್ಚದ ಮೂರನೇ ಎರಡರಷ್ಟು ತೆಲಂಗಾಣ ಸರ್ಕಾರವು ಭರಿಸಬೇಕಾಗಿತ್ತು. ಆದರೆ ತೆಲಂಗಾಣ ಸರ್ಕಾರವು ಈ ಯೋಜನೆಗೆ ಹಣ ನೀಡಲು ಅಸಮರ್ಥತೆಯಿಂದಾಗಿ ಭಾರತ ಸರ್ಕಾರವು 100% ಧನಸಹಾಯದೊಂದಿಗೆ ಮುಂದುವರಿಯಲು ನಿರ್ಧರಿಸಿದೆ.

61 ಕಿಲೋಮೀಟರ್ ಉದ್ದದ ಕರೀಂನಗರ-ಹಾಸನಪರ್ತಿ ಬ್ರಾಡ್ ಗೇಜ್ ಮಾರ್ಗಕ್ಕೆ ರೂ.1.5 ಕೋಟಿಗೆ ರೈಲ್ವೆ ಸಚಿವಾಲಯದಿಂದ ಎಫ್ಎಲ್ಎಸ್ ಮಂಜೂರಾಗಿದೆ. 2023-2024ನೇ ಸಾಲಿಗೆ ಬಂಡವಾಳ ವೆಚ್ಚ/ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ  ಅಡಿಯಲ್ಲಿ 2,102 ಕೋಟಿಗಳನ್ನು ಅನುಮೋದಿಸಲಾಗಿದೆ. 2020-2021 ರಲ್ಲಿ ಪ್ರಾರಂಭವಾದಾಗಿನಿಂದ ತೆಲಂಗಾಣ ರಾಜ್ಯ ಸರ್ಕಾರವು ಬಂಡವಾಳ ಯೋಜನೆಗಳ ಮೇಲೆ ಒಟ್ಟು ರೂ.5,221.92 ಕೋಟಿಗಳನ್ನು ಅನುಮೋದಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ತೆಲಂಗಾಣದಿಂದ ಭತ್ತ, ಛತ್ತೀಸಗಢದಿಂದ ಅಕ್ಕಿ: ಸಿದ್ದರಾಮಯ್ಯ

2023-24 ರ ಯೋಜನೆಯಡಿಯಲ್ಲಿ ಅನುಮೋದಿಸಲಾದ ವಿಶೇಷ ಸಹಾಯದ ಸಾಲ (ರೂ. ಕೋಟಿಯಲ್ಲಿ)

ಆರೋಗ್ಯ – 550.00

ಮೂಲಸೌಕರ್ಯ -200.00

ರೈಲ್ವೆ -200.00

ರಸ್ತೆಗಳು- 702.00

ಪ್ರವಾಸೋದ್ಯಮ- 50.00

ನೀರು ಮತ್ತು ನೈರ್ಮಲ್ಯ -400.00

ಒಟ್ಟು– 2102.00

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Wed, 28 June 23

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್